ಬೀದರ್:ದೇಶದ ಪ್ರಜ್ಞಾವಂತ ಮತದಾರರು ಜಾತಿ, ಮತ, ಪಂಥ, ಧರ್ಮ ಎನ್ನದೇ ಅಭಿವೃದ್ಧಿಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿರುವುದು ನೋಡಿದರೆ, ಮೋದಿಯವರ ಹವಾ ಇನ್ನೂ ಇದೆ ಎಂಬುದು ಸಾಬೀತಾಗಿದೆ. ಈ ಚುನಾವಣೆಯಲ್ಲಿ ಅನೇಕ ಘಟಾನುಘಟಿಗಳು ಸೋತಿರುವುದೇ ಇದಕ್ಕೆ ಸಾಕ್ಷಿ ಎಂದು ನೂತನ ಸಂಸದ ಭಗವಂತ ಖೂಬಾ ಹೇಳಿದರು.
ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಎರಡನೇ ಬಾರಿ ಆಯ್ಕೆಯಾದ ಭಗವಂತ ಖೂಬಾ ಅವರನ್ನು ನಗರದ ನಾಟ್ಯಶ್ರೀ ನೃತ್ಯಾಲಯ ಹಾಗೂ ಮೋದಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇ 23 ರಂದು ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ದಿನವಾಗಿತ್ತು. ನವ ಭಾರತದ ಏಳಿಗೆಗಾಗಿ ನರೇಂದ್ರ ಮೋದಿಯವರು ಶ್ರಮಿಸುತ್ತಿರುವುದನ್ನು ಗಮನಿಸಿದ ದೇಶದ ಮತದಾರರು ಇಡೀ ದೇಶಾದ್ಯಾಂತ ಅಭೂತಪೂರ್ವ ಬೆಂಬಲ ನೀಡಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಬೀದರ್ ಜಿಲ್ಲೆಯ ಮಹಾಜನತೆ ನಮ್ಮ ಪಕ್ಷ ದ ಕಾರ್ಯಕರ್ತರು, ಹಿತೈಷಿಗಳು, ಎರಡನೇ ಬಾರಿ ಆಶೀರ್ವದಿಸಿದ್ದಾರೆ. ಕಳೆದ ಅವಧಿಯಲ್ಲಿ ಯಾವ ರೀತಿ ಕೇಂದ್ರ ಸರಕಾರದಿಂದ ಅನೇಕ ಯೋಜನೆಗಳನ್ನು ತಂದಿದ್ದೇನೋ ಅದೇ ರೀತಿ ಈ ಅವಧಿಯಲ್ಲಿಯೂ ಇನ್ನು ಹೆಚ್ಚಿನದಾಗಿ ಕೇಂದ್ರದಿಂದ ಅನೇಕ ಜನಪರ ಯೋಜನೆಗಳನ್ನು ತಂದು ಎಂದಿನಂತೆ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸುವೆ ಎಂದರು.
ಗುರುಮೂರ್ತಿ, ಸತ್ಯಮೂರ್ತಿ, ರಾಣಿ ಸತ್ಯಮೂರ್ತಿ, ಬಾಬುರಾವ್ ಮದಕಟ್ಟಿ, ಬಾಬು ವಾಲಿ, ರೇವಣಸಿದ್ದಪ್ಪಾ ಜಲಾದೆ, ಗುರುನಾಥ ರಾಜಗೀರಾ, ಭೀಮಣ್ಣಾ ಕೊಳ್ಳೆ, ಕಿರಣ್ ಮೂರ್ತಿ, ರವಿ ಮೂರ್ತಿ, ವೀರೇಶ್ ಸ್ವಾಮಿ ಸೇರಿದಂತೆ ಅನೇಕರಿದ್ದರು.
ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಎರಡನೇ ಬಾರಿ ಆಯ್ಕೆಯಾದ ಭಗವಂತ ಖೂಬಾ ಅವರನ್ನು ನಗರದ ನಾಟ್ಯಶ್ರೀ ನೃತ್ಯಾಲಯ ಹಾಗೂ ಮೋದಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇ 23 ರಂದು ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ದಿನವಾಗಿತ್ತು. ನವ ಭಾರತದ ಏಳಿಗೆಗಾಗಿ ನರೇಂದ್ರ ಮೋದಿಯವರು ಶ್ರಮಿಸುತ್ತಿರುವುದನ್ನು ಗಮನಿಸಿದ ದೇಶದ ಮತದಾರರು ಇಡೀ ದೇಶಾದ್ಯಾಂತ ಅಭೂತಪೂರ್ವ ಬೆಂಬಲ ನೀಡಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಬೀದರ್ ಜಿಲ್ಲೆಯ ಮಹಾಜನತೆ ನಮ್ಮ ಪಕ್ಷ ದ ಕಾರ್ಯಕರ್ತರು, ಹಿತೈಷಿಗಳು, ಎರಡನೇ ಬಾರಿ ಆಶೀರ್ವದಿಸಿದ್ದಾರೆ. ಕಳೆದ ಅವಧಿಯಲ್ಲಿ ಯಾವ ರೀತಿ ಕೇಂದ್ರ ಸರಕಾರದಿಂದ ಅನೇಕ ಯೋಜನೆಗಳನ್ನು ತಂದಿದ್ದೇನೋ ಅದೇ ರೀತಿ ಈ ಅವಧಿಯಲ್ಲಿಯೂ ಇನ್ನು ಹೆಚ್ಚಿನದಾಗಿ ಕೇಂದ್ರದಿಂದ ಅನೇಕ ಜನಪರ ಯೋಜನೆಗಳನ್ನು ತಂದು ಎಂದಿನಂತೆ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸುವೆ ಎಂದರು.
ಗುರುಮೂರ್ತಿ, ಸತ್ಯಮೂರ್ತಿ, ರಾಣಿ ಸತ್ಯಮೂರ್ತಿ, ಬಾಬುರಾವ್ ಮದಕಟ್ಟಿ, ಬಾಬು ವಾಲಿ, ರೇವಣಸಿದ್ದಪ್ಪಾ ಜಲಾದೆ, ಗುರುನಾಥ ರಾಜಗೀರಾ, ಭೀಮಣ್ಣಾ ಕೊಳ್ಳೆ, ಕಿರಣ್ ಮೂರ್ತಿ, ರವಿ ಮೂರ್ತಿ, ವೀರೇಶ್ ಸ್ವಾಮಿ ಸೇರಿದಂತೆ ಅನೇಕರಿದ್ದರು.