ಆ್ಯಪ್ನಗರ

ಕೋತಿಗಳನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ

ತಾಲೂಕಿನ ಕರಕನಳ್ಳಿ ಗ್ರಾಮದಲ್ಲಿ ಜನರ ಮೇಲೆ ಏಕಾಏಕಿ ದಾಳಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿರುವ ಕೋತಿಗಳನ್ನು ಹುಮನಾಬಾದ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ತಂಡವು ಬಂಧಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Vijaya Karnataka 14 Jan 2019, 5:00 pm
ಚಿಟಗುಪ್ಪ:ತಾಲೂಕಿನ ಕರಕನಳ್ಳಿ ಗ್ರಾಮದಲ್ಲಿ ಜನರ ಮೇಲೆ ಏಕಾಏಕಿ ದಾಳಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿರುವ ಕೋತಿಗಳನ್ನು ಹುಮನಾಬಾದ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ತಂಡವು ಬಂಧಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
Vijaya Karnataka Web monkeys to a safe forest area
ಕೋತಿಗಳನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ


ಅರಣ್ಯಾಧಿಕಾರಿ ರಮೇಶ ಕನಕಟಕರ್‌ ಅವರು ಕೋತಿ ಹಿಡಿಯುವ ನುರಿತ ತಂಡವನ್ನು ಕರೆಸಿ, ಕೋತಿಗಳನ್ನು ಹಿಡಿದು ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಂರಕ್ಷಿತ ಕಾದಿಟ್ಟ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡುವ ವ್ಯವಸ್ಥೆ ಮಾಡಿದರು.

ಇದೆ ಜ.10ರಂದು ವಿಜಯ ಕರ್ನಾಟಕದಲ್ಲಿ 'ಕೋತಿಗಳ ಹಾವಳಿಗೆ ಕಂಗೆಟ್ಟ ಕರಕನಳ್ಳಿ' ಎಂಬ ತಲೆ ಬರೆಹದೊಂದಿಗೆ ಚಿತ್ರ ಸಹಿತ ವಿಶೇಷ ವರದಿ ಪ್ರಕಟಿಸಲಾಗಿತ್ತು. ಗ್ರಾಮದ ಮಹೇಶ ಎಂಬ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿ 11ಕ್ಕೂ ಅಧಿಕ ಹೊಲಿಗೆ ಬಿದ್ದಿದ್ದು , ಜನರು ಮನೆ ಹೊರಗಡೆ ಬರಲು ಭಯದ ವಾತಾವರಣ ನಿರ್ಮಾಣವಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು, ಕೋತಿಗಳನ್ನು ಹಿಡಿಯುವ ನುರಿತ ತಂಡವನ್ನು ಆಹ್ವಾನಿಸಿದ್ದು, ಶುಕ್ರವಾರವೇ ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಆದರೂ ಅವುಗಳÜನ್ನು ಹಿಡಿಯಲು ಹರಸಾಹಸ ಪಟ್ಟರು. ಶನಿವಾರ ಬೆಳಗ್ಗೆ ಎರಡು ಕೋತಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ರವಾನಿಸಲಾಯಿತು.

ಕೋತಿಗಳನ್ನು ಹಿಡಿಯುವ ನುರಿತ ತಂಡದ ಸಹಾಯ ಪಡೆದು ಶನಿವಾರ ಎರಡು ಬಂಧಿಸಿ ಚಿಂಚೋಳಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ತಂಡ ಗ್ರಾಮದಲ್ಲಿ ಇದ್ದು , ಇನ್ನುಳಿದ ಕೋತಿಗಳನ್ನು ಬಂಧಿಸಿ ಅರಣ್ಯಕ್ಕೆ ಕಳುಹಿಸಲಾಗುವದು.

ರಮೇಶ, ವಲಯ ಅರಣ್ಯಾಧಿಕಾರಿ ಹುಮನಾಬಾದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ