ಆ್ಯಪ್ನಗರ

ಕಾಂಗ್ರೆಸ್‌ ಅಧಿಕಾರ, ಜೆಡಿಎಸ್‌ ಹಿರಿಮೆ ಕಾಯ್ದುಕೊಳ್ಳುವುದೇ?

ನಗರಸಭೆಯ 31 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ ವಿವಿಧ ಪಕ್ಷಗಳ 128 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದ್ದು, ಶುಕ್ರವಾರ ಮತ ಎಣಿಕೆಯ ಮೂಲಕ ಸ್ಥಳೀಯ ಸರಕಾರದ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎನ್ನುವುದು ನಿರ್ಧಾರವಾಗಲಿದೆ.

Vijaya Karnataka 31 May 2019, 5:00 am
ಗಣಪತಿ ಬಿ. ಹರಕೂಡೆ ಬಸವಕಲ್ಯಾಣ:ನಗರಸಭೆಯ 31 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ ವಿವಿಧ ಪಕ್ಷಗಳ 128 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದ್ದು, ಶುಕ್ರವಾರ ಮತ ಎಣಿಕೆಯ ಮೂಲಕ ಸ್ಥಳೀಯ ಸರಕಾರದ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎನ್ನುವುದು ನಿರ್ಧಾರವಾಗಲಿದೆ.
Vijaya Karnataka Web monsoon 3 68 lakh hectare sowing target
ಕಾಂಗ್ರೆಸ್‌ ಅಧಿಕಾರ, ಜೆಡಿಎಸ್‌ ಹಿರಿಮೆ ಕಾಯ್ದುಕೊಳ್ಳುವುದೇ?


ಸ್ಥಳೀಯ ಜನಪ್ರತಿನಿಧಿಯಾಗುವ ಆಸೆ ಹೊತ್ತು ಮೊದಲ ಬಾರಿ ಚುನಾವಣೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮತದಾರ ಪ್ರಭುಗಳು ಕೈ ಹಿಡಿಯುವರೆ ? 14 ಮಂದಿ ಪಕ್ಷೇತರರ ಪೈಕಿ ಯಾರ ಹಣೆಬರಹ ಖುಲಾಯಿಸುವುದು ? ಕಳೆದ ಬಾರಿ ಮೂರು ಸ್ಥಾನ ಗಳಿಸಿದ ಎಂಐಎಂ ಪಕ್ಷ ಈ ಬಾರಿ ಮುಗ್ಗರಿಸುವುದೇ ? ಕಳೆದ ಚುನಾವಣೆಯಲ್ಲಿ ಸ್ಪರ್ಧೆಗಿಳಿಯದ ಬಿಎಸ್‌ಪಿ ಪಕ್ಷ ಈ ಬಾರಿ ಖಾತೆ ತೆರೆಯುವುದೇ ? ಇವೆಲ್ಲದಕ್ಕೂ ಇಂದಿನ ಫಲಿತಾಂಶ ಕೈಗನ್ನಡಿಯಾಗಲಿದೆ.

ಜೆಡಿಎಸ್‌ ಹಿರಿಮೆ ಕಾಯ್ದುಕೊಳ್ಳುವುದೇ?

31 ಸ್ಥಾನಗಳ ಪೈಕಿ ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ 11 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇಂದು ಪ್ರಕಟಗೊಳ್ಳಲಿರುವ ನಗರಸಭೆ ಚುನಾವಣಾ ಫಲಿತಾಂಶದಲ್ಲಿ ತನ್ನ ಹಿರಿಮೆ ಕಾಯ್ದುಕೊಳ್ಳುವುದೇ ಎಂಬುದು ಎಲ್ಲರ ಕುತೂಹಲ. ಇನ್ನೊಂದೆಡೆ ಬಿಜೆಪಿ ಪರಾರ‍ಯಯ ಸರಕಾರ ರಚನೆಯ ಕನಸು ಸಾಕಾರಗೊಳ್ಳುವುದೇ ಎಂಬ ಕುತೂಹಲದ ಪ್ರಶ್ನೆಗೆ ಇಂದಿನ ಫಲಿತಾಂಶ ಉತ್ತರ ನೀಡಲಿದೆ.

ಕಾಂಗ್ರೆಸ್‌ ಅಧಿಕಾರ ಕಾಯ್ದುಕೊಳ್ಳುವುದೇ?

ಕಳೆದ ಬಾರಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಗರಸಭೆ ಸರಕಾರ ರಚನೆಗೆ 16 ಸ್ಥಾನಗಳು ಬೇಕಾಗಿದ್ದವು. ಜೆಡಿಎಸ್‌, ಎಂಐಎಂ ಮತ್ತು ಬಿಎಸ್‌ಆರ್‌ನ್ನೊಳಗೊಂಡ ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಗೊಂಡು ಜೆಡಿಎಸ್‌ಕ್ಕಿಂತ ಕಡಿಮೆ ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ನಗರಸಭೆ ಗದ್ದುಗೆಯೇರಿತ್ತು. ಇತರೆ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್‌ ಈ ಬಾರಿ ಎಲ್ಲ 31 ವಾರ್ಡ್‌ಗಳಲ್ಲೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಮತ್ತೊಮ್ಮೆ ಅಧಿಕಾರಕ್ಕಾಗಿ ಶ್ರಮಿಸುತ್ತಿದೆ.

ಯಾವ ಪಕ್ಷಕ್ಕೆ ಮ್ಯಾಜಿಕ್‌ ನಂಬರ್‌ 16

31 ಸ್ಥಾನಗಳನ್ನು ಹೊಂದಿರುವ ಬಸವಕಲ್ಯಾಣ ನಗರಸಭೆ ಸರ್ಕಾರ ರಚನೆಗೆ ಒಂದೇ ಪಕ್ಷದ 16 ಸ್ಥಾನಗಳ ನಿಚ್ಚಳ ಬಹುಮತದ ಅವಶ್ಯಕತೆ ಇದ್ದು, ಮ್ಯಾಜಿಕ್‌ ನಂಬರ್‌ 16 ಯಾವ ಪಕ್ಷದ ಮಡಿಲಿಗೆ ಬೀಳಲಿದೆ ಎಂಬುವುದು ಇಂದು ಮಧ್ಯಾಹ್ನದವರೆಗೆ ನಿಗೂಢ. ಲೋಕಸಭೆ ಚುನಾವಣಾ ಫಲಿತಾಂಶ ಬಳಿಕ ರಾಜಕೀಯ ವಿಷಯದ ತೀವ್ರ ಚರ್ಚೆಗೆ ನಗರದಲ್ಲಿ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಯಾವ ಪಕ್ಷಕ್ಕೆ ಬಹುಮತ ಸಿಗಬಹುದೆಂದು ಸಾರ್ವಜನಿಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಹ್ಯಾಟ್ರಿಕ್‌ ಗೆಲುವಿಗೆ

ರವೀಂದ್ರ ಗಾಯಕವಾಡ, ಗಫಾರ್‌ ಪೇಶಮಾಮ್‌, ಸೈಯದ್‌ ಅಖ್ತರ್‌, ಸುಲ್ತಾನ್‌ ಅಲಿ ಅಮೀರಲಿ ಈ ನಾಲ್ಕು ಮಂದಿ ಅಭ್ಯರ್ಥಿಗಳ ಕಣ್ಣು ಇಂದಿನ ಫಲಿತಾಂಶದ ಮೇಲಿದ್ದು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇದಲ್ಲದೆ, ಎಂಟು ಮಂದಿ ಮರು ಗೆಲುವಿಗಾಗಿ ಕಾದುಕುಳಿತಿದ್ದಾರೆ. ವಿವಿಧ ಪಕ್ಷಗಳಿಂದ ಒಟ್ಟು 60 ಮಹಿಳಾ ಅಭ್ಯರ್ಥಿಗಳು ಚುನಾವಣೆ ಸ್ಪರ್ಧಿಸಿದ್ದಾರೆ.

ಬಸವಕಲ್ಯಾಣ ನಗರಸಭೆಯಲ್ಲಿನ ಆಯಾ ಪಕ್ಷಗಳ ಸದ್ಯದ ಬಲಾಬಲ

ಜೆಡಿಎಸ್‌-11

ಕೆಜಿಪಿ-3

ಕಾಂಗ್ರೆಸ್‌-7

ಬಿಎಸ್‌ಆರ್‌-6

ಎಂಐಎಂ-3

ಸ್ವತಂತ್ರ ಪಕ್ಷ-1

ಒಟ್ಟು ಸ್ಥಾನಗಳು-31

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ