ಆ್ಯಪ್ನಗರ

ಭೂಮಿಗಿಂತ ತಾಯಿ ಹೆಚ್ಚು : ಆಂದೋಲಾ ಶ್ರೀ

ಮಕ್ಕಳ ಮೇಲೆ ತಾಯಿ ಣ ಭೂಮಿಗಿಂತಲೂ ಹೆಚ್ಚಿನದು ಎಂದು ಕರ್ನಾಟಕ ರಾಜ್ಯ ಶ್ರೀ ರಾಮ ಸೇನೆಯ ಅಧ್ಯಕ್ಷ ಹಾಗೂ ಆಂದೋಲ ಶ್ರೀ ಮಠದ ಪೂಜ್ಯರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

Vijaya Karnataka 5 Jun 2019, 6:16 pm
ಬೀದರ್‌ :ಮಕ್ಕಳ ಮೇಲೆ ತಾಯಿ ಣ ಭೂಮಿಗಿಂತಲೂ ಹೆಚ್ಚಿನದು ಎಂದು ಕರ್ನಾಟಕ ರಾಜ್ಯ ಶ್ರೀ ರಾಮ ಸೇನೆಯ ಅಧ್ಯಕ್ಷ ಹಾಗೂ ಆಂದೋಲ ಶ್ರೀ ಮಠದ ಪೂಜ್ಯರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
Vijaya Karnataka Web mother is more than land andola sri
ಭೂಮಿಗಿಂತ ತಾಯಿ ಹೆಚ್ಚು : ಆಂದೋಲಾ ಶ್ರೀ


ನಗರದ ಎಂಎಸ್‌ ಪಾಟೀಲ್‌ ಕಲ್ಯಾಣ ಮಂಟಪದಲ್ಲಿ ಈಚೆಗೆ ಶ್ರೀಮತಿ ನೀಲಾಂಬಿಕೆ ಹಾಗೂ ಸಾಮಾಜಿಕ ಕಾರ್ಯಕರ್ತ ಸಿದ್ಧರಾಮಯ್ಯ ಹಿರೇಮಠ ದಂಪತಿಗಳ 25ನೇ ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬ ನಿಮಿತ್ತ ಆಯೋಜಿಸಲಾಗಿದ್ದ ವಿಶ್ವ ಅಮ್ಮಂದಿರ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತು ದೇವರಿಗೆ ಪೂಜಿಸುವುದಕ್ಕಿಂತ ಶ್ರಾವಣಕುಮಾರ ತನ್ನ ತಂದೆ-ತಾಯಿಯರಿಗೆ ಸಲ್ಲಿಸಿದ ಭಕ್ತಿ ಸೇವೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಹೆæೕಳಿದರು. ಇನ್ನೋರ್ವ ಪೂಜ್ಯ ಸಿದ್ರಾಮೇಶ್ವರ ಗುರೂಜಿ ಮಾತನಾಡಿ, ಜನ್ಮ ಕೊಟ್ಟ ಅಮ್ಮಂದಿರನ್ನು ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ತಂದೆ- ತಾಯಿಯರಿಗೆ ಸಲ್ಲಿಸುವ ಗೌರವ ನಿಜವಾದ ಸೇವೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈಜನಾಥ ಕಮಠಾಣೆ, ಶರಣಪ್ಪಾ ಮಿಠಾರೆ, ಸುರೇಶ್‌ ಚನ್ನಶೆಟ್ಟಿ, ಎಂ.ಜಿ ದೇಶಪಾಂಡೆ, ಕಂಟೆಪ್ಪಾ ದಾಡಗೆ, ವೀರಣ್ಣಾ ಕುಂಬಾರ್‌, ವೈಜನಾಥ್‌ ಕೋಡಗೆ, ವಿಜಯಕುಮಾರ್‌ ಪಾಟೀಲ್‌ ಖಾಜಾಪುರ, ಗುರುನಾಥ ಬುಟ್ಟೆ, ಸೋಮಯ್ಯ ಸ್ವಾಮಿ, ಶಾಂತವೀರ ಕೇಸಕರ್‌, ವೀರಶೆಟ್ಟಿ ಖ್ಯಾಮಾ, ಅಮೃತ್‌ ಪಾಟೀಲ ಉಪಸ್ಥಿತರಿದ್ದರು.

ದಿವ್ಯ ಸಾನ್ನಿಧ್ಯವನ್ನು ಮಂತ್ರ ಮಹರ್ಷಿ ಎನ್‌ಬಿ ರೆಡ್ಡಿ ಗುರುಜಿ ವಹಿಸಿದ್ದರು. ನೇತೃತ್ವವನ್ನು ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಗಂಗಾಧರ ಶಿವಾಚಾರ್ಯರು ವಹಿಸಿದ್ದರು. ಪುಂಡಲಿಕರಾವ್‌ ಪಾಟೀಲ ಗುಮ್ಮಾ, ಮಲ್ಲಿಕಾರ್ಜುನ ಸ್ವಾಮಿ, ಸಂಜುಕುಮಾರ್‌ ಸ್ವಾಮಿ ಉಜನಿ, ಲೋಕನಾಥ್‌ ಚಾಂಗಲೇರಾ, ಸಿದ್ಧಾರೂಢ ಕಂದಗೂಳ, ಶಿವಕುಮಾರ್‌ ಪಾಂಚಾಳ ಸೇರಿದಂತೆ ಅನೇಕ ಸಂಗೀತ ಕಲಾವಿದರು ವಚನ ಸಂಗೀತ ರಸಮಂಜರಿ ನಡೆಸಿಕೊಟ್ಟರು.

ಸುನೀತಾ ದಾಡಗೆ ಸ್ವಾಗತಿಸಿದರು. ನವಲಿಂಗ ಪಾಟೀಲ್‌ ಸಂಚಾಲನೆ ನಡೆಸಿದರು. ನ್ಯಾಯವಾದಿ ಮಂಗಲಾ ದಾಡಗೆ ವಂದಿಸಿದರು ಎಂದು ಚನ್ನಬಸವ ಬೀಕ್ಲೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ