ಆ್ಯಪ್ನಗರ

ಸಂಸದ ಭಗವಂತ ಖೂಬಾಗೆ ಕೊರೊನಾ ಪಾಸಿಟಿವ್..! ಸಚಿವ ಪ್ರಭು ಚವ್ಹಾಣ್ ಕ್ವಾರೆಂಟೈನ್‌..!

ಬುಧವಾರ ಬಂದ ವರದಿಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ, ಪಿಎಸ್‌ಐ, ಪೇದೆ ಸೇರಿದಂತೆ ಒಟ್ಟು 36 ಜನರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಆತಂಕ ಸೃಷ್ಟಿಸಿದೆ. ಇನ್ನು ಇವರೆಲ್ಲರೂ ಜನರ ಜೊತೆ ಬೆರೆಯುತ್ತಿರುವುದರಿಂದ ಹಲವರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ, ಪಾಸಿಟಿವ್ ಬಂದವರ ಜೊತೆ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ಕ್ವಾರೆಂಟೈನ್ ಮಾಡಲಾಗ್ತಿದೆ.

Vijaya Karnataka Web 15 Jul 2020, 5:28 pm
ಬೀದರ್: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಸಿಗದೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಂಡು ಮನಗಂಡಿರುವ ಸರ್ಕಾರ ಮತ್ತೊಂದು ಸುತ್ತಿನ ಲಾಕ್‌ಡೌನ್ ಮಾಡೋಕೆ ಮುಂದಾಗಿದೆ.
Vijaya Karnataka Web Corona positive


ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳು ಮತ್ತೊಮ್ಮೆ ಲಾಕ್‌ಡೌನ್‌ ಮಾಡಲು ನಿರ್ಧರಿಸಿವೆ. ಇತ್ತೀಚಿನ ಕೆಲದಿನಗಳಿಂದ ರಾಜಕಾರಣಿಗಳಲ್ಲಿ ಕೂಡ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿದ್ದು, ಇದೀಗ ಆ ಸಾಲಿಗೆ ಸಂಸದ ಭಗವಂತ ಖೂಬಾ ಅವರು ಸೇರ್ಪಡೆಯಾಗಿದ್ದಾರೆ. ಸಂಸದರಾದ ಖೂಬಾ ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾದ ಬೆನ್ನಲ್ಲೇ ಸಚಿವ ಪ್ರಭು ಚವ್ಹಾಣ್ ಅವರು ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ.

ಬೀದರ್‌: ಮತ್ತೆ 62 ಮಂದಿಗೆ ಕೊರೊನಾ ಪಾಸಿಟಿವ್‌; ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಇಂದು ಬಂದ ವರದಿಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ, ಪಿಎಸ್‌ಐ, ಪೇದೆ ಸೇರಿದಂತೆ ಒಟ್ಟು 36 ಜನರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಆತಂಕ ಸೃಷ್ಟಿಸಿದೆ. ಇನ್ನು ಇವರೆಲ್ಲರೂ ಜನರ ಜೊತೆ ಬೆರೆಯುತ್ತಿರುವುದರಿಂದ ಹಲವರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ, ಪಾಸಿಟಿವ್ ಬಂದವರ ಜೊತೆ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ಕ್ವಾರೆಂಟೈನ್ ಮಾಡಲಾಗ್ತಿದೆ.

ಸರ್ಕಾರಿ ಶಾಲಾ ಶಿಕ್ಷಕರಿಗೆ ಆಗಸ್ಟ್‌ 8ರವರೆಗೆ ವಾರಕ್ಕೆ ಐದೇ ದಿನ ಕೆಲಸ: ಶನಿವಾರವೂ ರಜೆ..!

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕೂಡ ವೈದ್ಯರ ಸಲಹೆಯನ್ನು ಪಡೆದು ಹತ್ತು ದಿನಗಳ ಕಾಲ ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ. ಸಂಸದ ಭಗವಂತ ಖೂಬಾ ಅವರ ಜೊತೆ ಸಭೆಯಲ್ಲಿ ಭಾಗಿ ಸೇರಿದಂತೆ ಅವರ ಸಂಪರ್ಕದಲ್ಲಿದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಚವ್ಹಾಣ್ ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1139 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 53 ಜನ ಮೃತಪಟ್ಟಿದ್ದಾರೆ. 3628 ಜನರ ವರದಿ ಇನ್ನು ಬರಬೇಕಿದೆ.

ಬೀದರ್‌ನಲ್ಲಿ ಕೊರೊನಾ ಅಟ್ಟಹಾಸ; ಮತ್ತೆ 9 ಸಾವು, ಮೂರೇ ದಿನದಲ್ಲಿ 23 ಮಂದಿ ಬಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ