ಯುವಕನ ಭೀಕರ ಕೊಲೆ
ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಶವವನ್ನು ನಗರದ ಹೊರ ವಲಯದ ಚಿಕ್ಕಪೇಟ ಬಳಿಯ ರಿಂಗ್ ರಸ್ತೆಯ ಪಕ್ಕ ಎಸೆದಿರುವ ಘಟನೆ ನಡೆದಿದೆ.
Vijaya Karnataka 18 Jul 2019, 7:26 pm
ಬೀದರ್: ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಶವವನ್ನು ನಗರದ ಹೊರ ವಲಯದ ಚಿಕ್ಕಪೇಟ ಬಳಿಯ ರಿಂಗ್ ರಸ್ತೆಯ ಪಕ್ಕ ಎಸೆದಿರುವ ಘಟನೆ ನಡೆದಿದೆ.
ಶರಣಪ್ಪ ಕಲ್ಲಪ್ಪ (28) ಕೊಲೆಯಾದ ಯುವಕ. ಔರಾದ್ ತಾಲೂಕಿನ ವಡಗಾಂವ್ ಗ್ರಾಮದವನಾಗಿದ್ದು, ಬೀದರ್ನ ಹೋಟೆಲೊಂದರಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಆದರೆ, ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಣಪ್ಪ ಕಲ್ಲಪ್ಪ (28) ಕೊಲೆಯಾದ ಯುವಕ. ಔರಾದ್ ತಾಲೂಕಿನ ವಡಗಾಂವ್ ಗ್ರಾಮದವನಾಗಿದ್ದು, ಬೀದರ್ನ ಹೋಟೆಲೊಂದರಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಆದರೆ, ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.