ಆ್ಯಪ್ನಗರ

ಬೂದಿಮುಚ್ಚಿದ ಕೆಂಡದಂತಾದ ಮುರ್ಕಿ: ನಿಷೇಧ ಜಾರಿ

ತಾಲೂಕಿನ ಮುರ್ಕಿ ಗ್ರಾಮದಲ್ಲಿ ಮಕ್ಕಳ ಕಳ್ಳರು ಎಂದು ಶಂಕಿಸಿ ಮೂವರಿಗೆ ಕಲ್ಲು ಮತ್ತು ಬಡಿಗೆಯಿಂದ ಗ್ರಾಮಸ್ಥರು ಗಾಯಗೊಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಜಮ್‌ ಮಹಮ್ಮದ್‌ ಇಸ್ಮಾಯಿಲ್‌(35) ಹೈದರಾಬಾದ್‌ ನಿವಾಸಿ ಮರಣ ಹೊಂದಿದ್ದಾರೆ.

Vijaya Karnataka 15 Jul 2018, 4:21 pm
ಕಮಲನಗರ : ತಾಲೂಕಿನ ಮುರ್ಕಿ ಗ್ರಾಮದಲ್ಲಿ ಮಕ್ಕಳ ಕಳ್ಳರು ಎಂದು ಶಂಕಿಸಿ ಮೂವರಿಗೆ ಕಲ್ಲು ಮತ್ತು ಬಡಿಗೆಯಿಂದ ಗ್ರಾಮಸ್ಥರು ಗಾಯಗೊಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಜಮ್‌ ಮಹಮ್ಮದ್‌ ಇಸ್ಮಾಯಿಲ್‌(35) ಹೈದರಾಬಾದ್‌ ನಿವಾಸಿ ಮರಣ ಹೊಂದಿದ್ದಾರೆ.
Vijaya Karnataka Web murki like a masked mushroom bans enactment
ಬೂದಿಮುಚ್ಚಿದ ಕೆಂಡದಂತಾದ ಮುರ್ಕಿ: ನಿಷೇಧ ಜಾರಿ


ಸಲಹಮ್‌(38), ಸಲ್ಮಾನ್‌(24) ಚಿಕಿತ್ಸೆ ಪಡೆದು ಹೈದರಾಬಾದ್‌ಗೆ ಮರಳಿದ್ದಾರೆ. ಈಗ ಗ್ರಾಮವು ಬೂದಿ ಮುಚ್ಚಿದ ಕೆಂಡದಂತಾಗಿದೆ.

ಶನಿವಾರ ಮುರ್ಕಿ ಗ್ರಾಮಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರಿಹರಿ ಬಾಬು ಅವರು ಭೇಟಿ ನೀಡಿ ಮಾತನಾಡಿ, ''ಗ್ರಾಮದಲ್ಲಿ ನಿಷೇಧ ಜಾರಿಗೊಳಿಸಲಾಗಿದೆ. ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚು ಜನರು ಓಡಾಡುವುದು ಮತ್ತು ಸೇರುವುದು ನಿಷೇಧಿಸಿದೆ. ಈಗಾಗಲೆ 30 ಜನರನ್ನು ಬಂಧಿಸಲಾಗಿದ್ದು, 150 ಜನರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ''ಎಂದು ತಿಳಿಸಿದರು.

ಮುರ್ಕಿ ಗ್ರಾಮದಲ್ಲಿ ಬಿಕೋ:

ಈ ಘಟನೆ ನಂತರ ಮುರ್ಕಿ ಗ್ರಾಮದಲ್ಲಿ ಖಾಕಿ ಪಡೆ ಬೀಡು ಬಿಟ್ಟಿದೆ. ಪೊಲೀಸರನ್ನು ಎಲ್ಲಾ ಬಡಾವಣೆಗಳಲ್ಲಿ ನಿಯೋಜಿಸಲಾಗಿದೆ. ಬಸವೇಶ್ವರ ವೃತ್ತ, ಡೋಣಗಾಂವ ರಸ್ತೆ, ಮುರ್ಕಿ ವಾಡಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಪೊಲೀಸರು ಇನ್ನು ಹೆಚ್ಚು ಜನರನ್ನು ಬಂಧಿಸಿ ವಿಚಾರಣೆ ಮಾಡಲಿದ್ದು, ಸುದ್ದಿ ತಿಳಿದು ಕೆಲವು ಗ್ರಾಮಸ್ಥರು ಊರು ತೊರೆದಿದ್ದಾರೆ. ಹೀಗಾಗಿ, ಸದಾ ಗಿಜಗುಡುತ್ತಿದ್ದ ಬಸ್‌ ನಿಲ್ದಾಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಈಗ ನೀರವ ಮೌನ ಮನೆಮಾಡಿದೆ. ಫೋನ್‌ ಮತ್ತು ವಾಟ್ಸ್‌ಪ್‌ ಗ್ರೂಪನಲ್ಲಿ ಯಾವುದೆ ಚಿತ್ರ ಮತ್ತು ಮಾಹಿತಿ ಸಂದೇಶ ರವಾನೆ ಕೂಡ ಆಗುತ್ತಿಲ್ಲ. ಕೆಲವರ ಮೊಬೈಲ್‌ ಆಫ್‌ ಆಗಿದ್ದು, ನೆಂಟರು, ಸ್ನೇಹಿತರು ಆತಂಕಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ