ಆ್ಯಪ್ನಗರ

ಸ್ಮಶಾನವಿಲ್ಲದೆ ಮುಸ್ಲಿಮರ ಪರದಾಟ

ಬಸವಕಲ್ಯಾಣ ತಾಲೂಕಿನ ಧನ್ನೂರ ಕೆ. ಗ್ರಾಮದಲ್ಲಿ ಮುಸ್ಲಿಮರ ಅಂತ್ಯ ಸಂಸ್ಕಾರ ದೊಡ್ಡ ಪರದಾಟವೇ ಆಗಿಬಿಟ್ಟಿದೆ.

Vijaya Karnataka Web 3 Nov 2017, 12:34 pm
ಬೀದರ್: ಬಸವಕಲ್ಯಾಣ ತಾಲೂಕಿನ ಧನ್ನೂರ ಕೆ. ಗ್ರಾಮದಲ್ಲಿ ಮುಸ್ಲಿಮರ ಅಂತ್ಯ ಸಂಸ್ಕಾರ ದೊಡ್ಡ ಪರದಾಟವೇ ಆಗಿಬಿಟ್ಟಿದೆ.
Vijaya Karnataka Web muslims face cremation ground problem
ಸ್ಮಶಾನವಿಲ್ಲದೆ ಮುಸ್ಲಿಮರ ಪರದಾಟ


ಈ ಸಮುದಾಯಕ್ಕೆ ಊರಲ್ಲಿ ಸ್ಮಶಾನ ಇಲ್ಲದ ಕಾರಣ ಮೃತದೇಹವನ್ನು ಚುಳಕಿ ನಾಲಾ ಜಲಾಶಯದ ಹಿನ್ನೀರು ದಾಟಿಕೊಂಡು ಹೋಗಿ ಊರ ಹೊರಗೆ ಅಂತ್ಯಸಂಸ್ಕಾರ ಮಾಡಬೇಕಿದೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಸ್ಮಶಾನಕ್ಕಾಗಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಮೊದಲು ಗ್ರಾಮಸ್ಥರು ಧನ್ನೂರು (ಕೆ) ನಲ್ಲಿ ವಾಸವಿದ್ದರು. ಈ ಗ್ರಾಮವು ಚುಳಕಿ ನಾಲಾ ಜಲಾಷಯದ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ ಗ್ರಾಮಸ್ಥರು ಧನ್ನೂರು (ಕೆ) ವಾಡಿಯ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಆದರು. ಇದಾದ ನಂತರ ಸ್ಮಶಾನಕ್ಕೆ ಹೋಗಲು ತೊಂದರೆಯಾಗುತ್ತಿದೆ. ಕಳೆದ ಐದಾರು ವರ್ಷಗಳಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಗ್ರಾಮದ ಇಕ್ರಾಮೊದ್ದೀನ್ ಖಾದಿವಾಲೆ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ