ಆ್ಯಪ್ನಗರ

ಸಂವಿಧಾನ ದುರ್ಬಲಗೊಳಿಸಲು ಯಾರಿಂದಲೂ ಆಗದು: ಈಶ್ವರ್ ಖಂಡ್ರೆ

ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನ ದುರ್ಬಲ ಗೊಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ಯಾರೇ ಬಂದರೂ ಸಂವಿಧಾನ ದುರ್ಬಲಗೊಳಿಸಲಾಗದು ಎಂದು ಕೆಪಿಸಿಸಿ ಕರ‍್ಯಾಧ್ಯಕ್ಷ, ಶಾಸಕ ಈಶ್ವರ್ ಖಂಡ್ರೆ ಹೇಳಿದರು.

Vijaya Karnataka Web 7 Mar 2021, 7:30 pm
ಬೀದರ್‌: ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಿರುವ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನವು ಪವಿತ್ರವಾದ ಗ್ರಂಥವಾಗಿದೆ. ಸಂವಿಧಾನ ದುರ್ಬಲ ಗೊಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ಯಾರೇ ಬಂದರೂ ಸಂವಿಧಾನ ದುರ್ಬಲಗೊಳಿಸಲಾಗದು ಎಂದು ಕೆಪಿಸಿಸಿ ಕರ‍್ಯಾಧ್ಯಕ್ಷ, ಶಾಸಕ ಈಶ್ವರ್ ಖಂಡ್ರೆ ಹೇಳಿದರು.
Vijaya Karnataka Web ishwar khandre


ಬೀದರ್‌ನ ಡಾ. ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಸದಸ್ಯತ್ವ ಅಭಿಯಾನ ಸಮಾರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸದಸ್ಯತ್ವ ಪಡೆದು ಮಾತನಾಡಿದರು.

ಬೀದರ್‌ ಜಿಲ್ಲಾಧಿಕಾರಿಯಿಂದ ಗ್ರಾಮ ವಾಸ್ತವ್ಯ! ಪ್ರತಿ 3ನೇ ಶನಿವಾರ ದಿನ ನಿಗದಿ!

ಮನುಷ್ಯ ಜೀವಿಸಲಿಕ್ಕೆ ಉಸಿರಾಟ ಹೇಗೆ ಅವಶ್ಯಕವೋ, ಹಾಗೆಯೇ ದೇಶ ಬದುಕಬೇಕಾದರೆ ಸಂವಿಧಾನವೂ ಅಗತ್ಯ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಭಾರತದಲ್ಲಿ ಸಂವಿಧಾನ, ಜಾತ್ಯತೀತ ತತ್ವ ಇಲ್ಲದಿದ್ದರೆ ದೇಶ ಬದುಕಲು ಸಾಧ್ಯವಿಲ್ಲ ಎಂದರು. ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದು ಕಾಂಗ್ರೆಸ್, ಆದರೆ, ಖಾಸಗೀಕರಣದ ಮೂಲಕ ಜನರನ್ನು ವಂಚಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ