ಆ್ಯಪ್ನಗರ

ಬೀದರ್: ನೇಣು ಬಿಗಿದ ರೀತಿಯಲ್ಲಿ ಸಾರಿಗೆ ಬಸ್ ಚಾಲಕನ ಶವ ಪತ್ತೆ

ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಘಟಕದ ಬಸ್ ಚಾಲಕನ ಶವವು ಆತ್ಮಹತ್ಯೆಗೆ ಶರಣಾದ ರೀತಿಯಲ್ಲಿ ಡಿಪೋದ ವಿಶ್ರಾಂತಿ ಕೋಣೆಯಲ್ಲಿ ಪತ್ತೆಯಾಗಿದೆ.

Vijaya Karnataka Web 27 Dec 2020, 7:53 pm
ಬೀದರ್: ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಘಟಕದ ಬಸ್ ಚಾಲಕ ಓಂಕಾರ ಬಸ್ಸಪ್ಪ ಮ್ಯಾಕ್ರೆ ಅವರ ಶವವು ಆತ್ಮಹತ್ಯೆಗೆ ಶರಣಾದ ರೀತಿಯಲ್ಲಿ ಕೇಂದ್ರ ಬಸ್ ನಿಲ್ದಾಣ ಬಳಿಯ ಬಸ್ ಡಿಪೋದ ವಿಶ್ರಾಂತಿ ಕೋಣೆಯಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
Vijaya Karnataka Web bidar


ಡೊಂಗರಗಾಂವ್ ಗ್ರಾಮದ ಓಂಕಾರ್ ಬಸ್ಸಪ್ಪ ಮ್ಯಾಕ್ರೆ (ಚಾಲಕ- 1079) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ನಿಮಿತ್ತ ಬೀದರ್ ತಾಲೂಕಿನ ಸಾಂಗವಿ ಗ್ರಾಮಕ್ಕೆ ಇವರನ್ನು ನಿಯೋಜಿಸಲಾಗಿತ್ತು. ಶನಿವಾರ ಸಂಜೆ ಚುನಾವಣಾ ಸಿಬ್ಬಂದಿ ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಬಸ್‌ನಲ್ಲಿ ಒಯ್ದು ಮತಗಟ್ಟೆಗೆ ತಲುಪಿಸಿದ್ದರು. ಬಳಿಕ ರಾತ್ರಿಯೇ ಪಕ್ಕದ ಕೋಸಂ ಗ್ರಾಮಕ್ಕೆ ತೆರಳಿ ಬಸ್ ಅನ್ನು ಅಲ್ಲಿಯೇ ಬಿಟ್ಟು, ಬೀದರ್‌ಗೆ ಬೈಕ್‌ನಲ್ಲಿ ಮರಳಿದ್ದಾರೆ ಎಂದು ತಿಳಿದು ಬಂದಿದೆ.

ಬೀದರ್‌ನ ಕೇಂದ್ರ ಬಸ್ ನಿಲ್ದಾಣದ ಘಟಕ 2ಕ್ಕೆ ವಿಶ್ರಾಂತಿಗಾಗಿ ತಡರಾತ್ರಿ ಹಿಂತಿರುಗಿದ್ದರು. ಬೆಳಗ್ಗೆ ಸಹ ಸಿಬ್ಬಂದಿ ಕೋಣೆಗೆ ತೆರಳಿದಾಗ ವಿಷಯ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಪ್ರಕರಣ ಕುರಿತಂತೆ ಇಲ್ಲಿನ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ