ಆ್ಯಪ್ನಗರ

ಗಣೇಶ ಚತುರ್ಥಿಯಲ್ಲಿ ರಾಷ್ಟ್ರಭಕ್ತಿ ಮೇಳೈಸಲಿ

ನಗರದ ಐತಿಹಾಸಿಕ ರಾಮ ಮಂದಿರದಲ್ಲಿ ಶನಿವಾರ ಗಣೇಶ ಮಹಾ ಮಂಡಳಿಯ ಸಭೆಯು ನಂದಕಿಶೋರ ವರ್ಮಾ ಅಧ್ಯಕ್ಷ ತೆಯಲ್ಲಿ ನಡೆಯಿತು.

Vijaya Karnataka 27 Aug 2019, 2:05 pm
ಬೀದರ್‌ :ನಗರದ ಐತಿಹಾಸಿಕ ರಾಮ ಮಂದಿರದಲ್ಲಿ ಶನಿವಾರ ಗಣೇಶ ಮಹಾ ಮಂಡಳಿಯ ಸಭೆಯು ನಂದಕಿಶೋರ ವರ್ಮಾ ಅಧ್ಯಕ್ಷ ತೆಯಲ್ಲಿ ನಡೆಯಿತು.
Vijaya Karnataka Web patriotism in ganesh chaturthi
ಗಣೇಶ ಚತುರ್ಥಿಯಲ್ಲಿ ರಾಷ್ಟ್ರಭಕ್ತಿ ಮೇಳೈಸಲಿ


ಅಧ್ಯಕ್ಷ ರಾಗಿ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬುವಾಲಿ ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಹೊಸಬರನ್ನು ಹಾಗೂ ಕ್ರಿಯಾಶೀಲರನ್ನು ಸೇರಿಸಿಕೊಳ್ಳುವ ಹಾಗೂ ಸಮಯ ಕೊಡದ ಪದಾಧಿಕಾರಿಗಳನ್ನು ಕೈಬಿಡುವ ಜವಾಬ್ದಾರಿಯನ್ನು ಸಭೆಯು ಹಿರಿಯರಿಗೆ ನೀಡಿತು. ಈ ಪ್ರಸ್ತಾವನೆಯನ್ನು ಉಪೇಂದ್ರ ದೇಶಪಾಂಡೆ ಮಂಡಿಸಿದರು. ಈ ಪ್ರಸ್ತಾವನೆಯನ್ನು ಸಭೆಯು ಸರ್ವಾನುಮತದಿಂದ ಅನುಮೋದಿಸಿತು.

ಬಳಿಕ ಬಾಬುವಾಲಿ ಪ್ರಾಸ್ತಾವಿಕ ಮಾತನಾಡಿ, ಗಣೇಶ ಚತುರ್ಥಿಯು ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮದ ವಿಜಯೋತ್ಸವ ಆಚರಿಸಿದಂತೆ ಆಚರಿಸಬೇಕು. ರಾಷ್ಟ್ರೀಯ ಹಬ್ಬವಾದ ಈ ಗಣೇಶ ಚತುರ್ಥಿ ಜಮ್ಮು ಮತ್ತು ಕಾಶ್ಮೀರ 370 ಮತ್ತು 35ಎ ವಿಧಿಯಿಂದ ಮುಕ್ತವಾದ ಈ ಸಂದರ್ಭ ದೇಶದ್ಯಾಂತ ಅಖಂಡ ಭಾರತದ ಕನಸು ನನಸಾಗಿದೆ. ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ರಾಷ್ಟ್ರೀಯ ಧ್ವಜಗಳು ರಾರಾಜಿಸುವಂತೆ ಮಾಡಲು ಸಲಹೆ ನೀಡಿದರು.

ಗಣೇಶ ಮಹಾಮಂಡಳಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಮಾತನಾಡಿ, ಒಂದು ದಿನ ಮುಂಚೆ ಬೈಕ್‌ ರಾರ‍ಯಲಿ ನಡೆದು ಮೆರವಣಿಗೆಯಲ್ಲಿ ಬೇಗ ಬರುವಂತೆ ಸೂಚಿಸಲಾಗುತ್ತದೆ. ಗಣೇಶ ಮಂಡಳಿಗಳು ಬೇಗ ಬರಬೇಕು. ಸಮಯ ಪಾಲನೆ ಮಾಡಿದರೆ ಹೆಚ್ಚು ಉತ್ಸಾಹ ಬರುತ್ತದೆ. ಭಕ್ತರು ವೀಕ್ಷಿಸುತ್ತಾರೆ. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ದೇಶಭಕ್ತಿ ಗೀತೆಗಳನ್ನು ಮಾತ್ರ ಹಾಕಬೇಕು. ಸ್ವಚ್ಛತೆ ಕಾಪಾಡುವುದು, ಗಿಡ ನೆಡುವುದು, ಬೆಂಕಿ ಅಥವಾ ಶಾರ್ಟ್‌ ಸರ್ಕಿಟ್‌ ಆಗದಂತೆ ಮುಂಜಾಗೃತಾ ಕ್ರಮಗಳನ್ನು ಮಾಡಿಕೊಂಡು 24 ಗಂಟೆ ಪೆಂಡಾಲ್‌ಗಳಲ್ಲಿ ಗಣೇಶ ಮಂಡಳಿಯ ಪದಾಧಿಕಾರಿಗಳು ಇರುವಂತೆ ನೋಡಿಕೊಳ್ಳಬೇಕು ಮತ್ತು ಆ ಪಟ್ಟಿ ಮಹಾ ಮಂಡಳಿಗಳಿಗೆ ಸಲ್ಲಿಸಬೇಕು ಎಂದು ಅಧ್ಯಕ್ಷ ರು ತಿಳಿಸಿದರು.

ಜಿಲ್ಲಾಡಳಿತವು ಪಿಒಪಿ ಗಣೇಶ ಹಾಗೂ ಪ್ಲಾಸ್ಟಿಕ್‌ ನಿಷೇಧ ಬಗ್ಗೆ ಸಭೆ ನಡೆಸಿ ತಿಳಿಸಿದೆ. ಸಾರ್ವಜನಿಕ ಗಣೇಶ ಮಂಡಳಿ ಹಾಗೂ ನಗರದ ಎಲ್ಲಾ ಮನೆಗಳಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ಪ್ರತಿಷ್ಠಾಪಿಸುವ ಕುರಿತು ಪ್ರಚಾರ ಮಾಡುವ ಬಗ್ಗೆ ನಿರ್ಧರಿಸಲಾಯಿತು.

ಈಶ್ವರಸಿಂಗ್‌ ಠಾಕೂರ ಮಾತನಾಡಿ, ರಾಷ್ಟ್ರಭಕ್ತಿ ಈ ಸಲ ವಿಜೃಂಭಸಲಿ ಎಂದರು.

ನಂದಕಿಶೋರ ವರ್ಮಾ ಮಾತನಾಡಿದರು. ಮಹೇಶ್ವರ ಸ್ವಾಮಿ ವಂದಿಸಿದರು. ಹಣಮಂತ ಬುಳ್ಳಾ, ಶ್ರೀಮಂತ ಸಪಾಟೆ, ಮಹೇಶ ಪಾಲಂ, ಶಶಿ ಹೊಸಳ್ಳಿ, ಸಿದ್ದು ಮೊಟ್ಟೆ, ನಾಗಶೆಟ್ಟಿ ಧರಂಪುರೆ, ಕಿರಣ ಪಾಲಂ ಸೇರಿದಂತೆ ಇತರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಗಣೇಶ ಮಹಾ ಮಂಡಳದ ಪದಾಧಿಕಾರಿಗಳು

ಚಂದ್ರಶೇಖರ ಪಾಟೀಲ ಗಾದಗಿ (ಅಧ್ಯಕ್ಷ ), ಬಾಬುವಾಲಿ (ಪ್ರಧಾನ ಕಾರ್ಯದರ್ಶಿ), ರೇವಣಸಿದ್ದಪ್ಪ ಜಲಾದೆ, ದೀಪಕ್‌ ವಾಲಿ, ಈಶ್ವರ ಸಿಂಗ್‌ ಠಾಕೂರ್‌, ಮಹೇಶ್‌ ಪಾಲಂ, ಭರತ ಶೆಟ್ಟಕರ್‌, ಬಸವರಾಜ್‌ ಪವಾರ್‌, ಸತೀಶ ಮೊಟ್ಟಿ, ಭೂಷಣ ಪಾಠಕ, ಸಚಿನ ನವಲಕಲೆ, ರಾಜರಾಮ ಚಿಟ್ಟಾ (ಉಪಾಧ್ಯಕ್ಷ ರುಗಳು). ಮನೋಹರ್‌ ದಂಡೆ, ಸಾಯಿನಾಥ ಮುಧೂಳಕರ್‌, ಸುಭಾಷ ಮಡಿವಾಳ, ಪ್ರಶಾಂತ ಬಾವುಗಿ, ಸುರೇಶ ಮಾಶೆಟ್ಟಿ, ಶಿವಪುತ್ರ ವೈದ್ಯ, ಮಹೇಶ್ವರ ಸ್ವಾಮಿ, ಅರುಣ ಬಸವನಗರ, ರಾಜು ಬಿರಾದಾರ, ನಿಲೇಶ ರಕ್ಷಾಳ, ಅಂಬ್ರಿಷ್‌ ಬಟನಾಪುರೆ, ವಿನೋದ ಪಾಟೀಲ್‌, ವಿರೇಶ ಸ್ವಾಮಿ, ಶ್ರೀಮಂತ ಸಪಾಟೆ (ಕಾರ್ಯದರ್ಶಿಗಳು). ರಜನೀಶ ವಾಲಿ (ಖಜಾಂಚಿ), ವೀರೂಪಾಕ್ಷ ಗಾದಗಿ, ಶಶಿಕುಮಾರ ಪಾಟೀಲ, ಮಾಳಪ್ಪಾ ಅಡಸಾರೆ (ಪ್ರಚಾರ ಸಮಿತಿ), ಹಣಮಂತ ಬುಳ್ಳಾ, ದೇವೇಂದ್ರ ಉಮ್ಮೇಕರ, ಸುನೀಲ್‌ ದಳವೆ, ಅಶೋಕ ದಿಡಗೆ, ಕಲ್ಯಾಣರಾವ ಬಿರಾದಾರ್‌ (ಅಲಂಕಾರ ಸಮಿತಿ), ನಂದಕೀಶೋರ ವರ್ಮಾ (ಅಧ್ಯಕ್ಷ ಸ್ವಾಗತ ಸಮಿತಿ), ಸುಭಾಶ ಚೋಕರ (ಕಾರ್ಯಾದರ್ಶಿ), ಚಂದ್ರಶೇಖರ (ಖಜಾಂಚಿ). ಸೂರ್ಯಕಾಂತ ಶೆಟಕಾರ (ಮೆರವಣಿಗೆಯ ಸಮಿತಿ ಗೌರವಾಧ್ಯಕ್ಷ), ರಾಜಕುಮಾರ ಚಿದ್ರಿ (ಅಧ್ಯಕ್ಷ ), ಸದಸ್ಯರುಗಳಾಗಿ ಮುನ್ನ ಆರ್ಯ, ಪ್ರಭಾಕರ ಪಾಟೀಲ ಗಾದಗಿ, ಬಸವರಾಜ ಮಲ್ಕಪ್ಪಾ, ಕಿರಣ ಪಾಲಂ, ರಾಜು ಜಮಾದಾರ್‌, ಪ್ರಕಾಶ ನಂದಗೌಳಿ, ಕೃಪಾಸಿದ್ದ ಪಾಟೀಲ್‌, ಸಂಜು ಘನತೆ, ಸಂಜು ಸ್ವಾಮಿ, ವಿನೋದ ಪಾಟೀಲ್‌, ಗೋರಖ್‌, ಗೋಪಾಲ್‌ ಕೃಷ್ಣಾ, ಅನಿಲ್‌ ರಾಜಗೀರಾ, ನರೇಶ ಗೌಳಿ, ಹಣಮಂತ ಕಾಮಟಿಕರ್‌ ನೇಮಕಗೊಂಡಿದ್ದಾರೆ.

ಎಲ್ಲಾ ಗಣೇಶ ಮಂಡಳಿಗಳ ಅಧ್ಯಕ್ಷ ರು ಗಣೇಶ ಮಹಾಮಂಡಳಿಯ ಕಾರ್ಯಕಾರಣಿ ಸದಸ್ಯರಾಗಿರುತ್ತಾರೆ. ಇನ್ನುಳಿದ ಮತ್ತು ಹೊಸದಾಗಿ ಸೇರಿದ ಪದಾಧಿಕಾರಿಗಳ ಪಟ್ಟಿ ಹಿರಿಯರೊಂದಿಗೆ ಚರ್ಚಿಸಿ ಬಿಡುಗಡೆ ಮಾಡಲಾಗುವುದು ಎಂದು ಬಾಬು ವಾಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ