ಆ್ಯಪ್ನಗರ

ಶಾಂತಿಗಾಗಿ ಪೊಲೀಸ್‌ರಿಂದ ಪಥ ಸಂಚಲನ

ಕೆಲವೆ ದಿನಗಳಲ್ಲಿಬರಲಿರುವ ಆಯೋಧ್ಯೆ ತೀರ್ಪು ನಿಮಿತ್ತ ಮುಂಜಾಗೃತ ಕ್ರಮವಾಗಿ ಪೊಲೀಸ್‌ರಿಂದ ನಗರದಲ್ಲಿಬುಧವಾರ ಸಂಜೆ ಪಥ ಸಂಚಲನ ನಡೆಯಿತು.

Vijaya Karnataka 9 Nov 2019, 9:59 pm
ಬಸವಕಲ್ಯಾಣ:ಕೆಲವೆ ದಿನಗಳಲ್ಲಿಬರಲಿರುವ ಆಯೋಧ್ಯೆ ತೀರ್ಪು ನಿಮಿತ್ತ ಮುಂಜಾಗೃತ ಕ್ರಮವಾಗಿ ಪೊಲೀಸ್‌ರಿಂದ ನಗರದಲ್ಲಿಬುಧವಾರ ಸಂಜೆ ಪಥ ಸಂಚಲನ ನಡೆಯಿತು.
Vijaya Karnataka Web police patha sanchalan
ಶಾಂತಿಗಾಗಿ ಪೊಲೀಸ್‌ರಿಂದ ಪಥ ಸಂಚಲನ


ನಗರದ ಗಾಂಧಿ ವೃತ್ತದಲ್ಲಿಯ ನಗರ ಪೊಲೀಸ್‌ ಠಾಣೆಯಿಂದ ಆರಂಭವಾದ ಪಥ ಸಂಚಲನ, ಮುಖ್ಯರಸ್ತೆ ಮೂಲಕ ಜಾಮಿಯಾ ಮಸೀದಿ, ಪರುಷಕಟ್ಟೆ, ಕಾಳಿಗಲ್ಲಿ, ಪಾಶಾಪುರ ಗಲ್ಲಿ, ನಾರಾಯಣಪುರ ಕ್ರಾಸ್‌ನಿಂದ ಹುಲಸೂರು ರಸ್ತೆ ಮಾರ್ಗವಾಗಿ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಮರಳಿ ಪೊಲೀಸ್‌ ಠಾಣೆಗೆ ತಲುಪಿತು.

ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದದ ಕುರಿತು ಕೆಲವೇ ದಿನಗಳಲ್ಲಿನ್ಯಾಯಾಲಯದಿಂದ ತೀರ್ಪು ಪ್ರಕಟಿಸುವ ಸಾಧ್ಯತೆ ಇರುವ ಕಾರಣ ನಗರದಲ್ಲಿಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಮುಂಜಾಗೃತ ಕ್ರಮವಾಗಿ ಪೊಲೀಸ್‌ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಮಾಜದಲ್ಲಿಕೋಮು ಸೌಹಾರ್ದತೆ ವಾತಾವರಣ ಕಾಪಾಡುವಲ್ಲಿಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.

ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‌ಐ ಸುನೀಲಕುಮಾರ ನೇತೃತ್ವದಲ್ಲಿನಡೆದ ಪಥ ಸಂಚಲನದಲ್ಲಿಕ್ರೈಂ ಪಿಎಸ್‌ಐ ಸವಿತಾ ಪ್ರಿಯಾಂಕ ಸೇರಿದಂತೆ ನಗರ ಠಾಣೆ ಹಾಗೂ ಸಂಚಾರಿ ಪೊಲೀಸ್‌ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ