ಆ್ಯಪ್ನಗರ

ಬೀದರಲ್ಲಿ ಊರೆಲ್ಲ ಓಡಾಡಿದ ಕೊರೊನಾ ಶಂಕಿತ: ಎಫ್‌ಐಆರ್‌ ದಾಖಲು!

ಮನೆಯಲ್ಲಿರುವಂತೆ ಸೂಚಿಸಿದರೂ ಗ್ರಾಮದಲ್ಲಿ ತಿರುಗಾಡಿದ ಕೊರೊನಾ ಶಂಕಿತ ವ್ಯಕ್ತಿ- ಕೊರೊನಾ ತಡೆಗೆ ಮುಂಜಾಗೃ ಕ್ರಮ ಪಾಲಿಸದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈತನ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ.

Vijaya Karnataka Web 23 Mar 2020, 8:26 pm
ಬೀದರ್: ಮನೆಯಲ್ಲಿರುವಂತೆ ಸೂಚಿಸಿದರೂ ಗ್ರಾಮದಲ್ಲಿ ತಿರುಗಾಡಿದ ಕೊರೊನಾ ಶಂಕಿತ ವ್ಯಕ್ತಿ- ಕೊರೊನಾ ತಡೆಗೆ ಮುಂಜಾಗೃ ಕ್ರಮ ಪಾಲಿಸದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Vijaya Karnataka Web Coronavirus 1


ಗೃಹ ಬಂಧನದಲ್ಲಿರುವವನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದುಬೈನಿಂದ ಆಗಮಿಸಿದ್ದರಿಂದ, ಕೊರೊನಾ ಶಂಕಿತ ಹಿನ್ನೆಲೆಯಲ್ಲಿ ಗೃಹ ಬಂಧನದಲ್ಲಿದ್ದ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದ ವ್ಯಕ್ತಿಯೊಬ್ಬರು, ಕೊರೊನಾ ಸೋಂಕಿತ ಮುಂಜಾಗೃತ ಕ್ರಮಗಳನ್ನು ಪಾಲಿಸದೇ, ಬೇಕಾ ಬಿಟ್ಟಿಯಾಗಿ ಗ್ರಾಮದಲ್ಲಿ ತಿರುಗಾಡಿದ್ದರಿಂದ ಆತನ ವಿರುದ್ಧ ಮನ್ನಾಎಖ್ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಪಿಸಿ 269, 270 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಾ. 12 ರಂದು ದುಬೈನಿಂದ ಈ ವ್ಯಕ್ತಿ ಆಗಮಿಸಿದ್ದರು. ಬಳಿಕ ಪಿಎಸ್‌ಐ ಸುನಿತಾ ಹಾಗೂ ವೈದ್ಯಾಧಿಕಾರಿ ಚಂದ್ರಶೇಖರ ಅವರು ಈ ವ್ಯಕ್ತಿಯ ಮನೆಗೆ ಭೇಟಿ ನೀಡಿ, ಗೃಹ ಬಂಧನದಲ್ಲಿ ಇರಬೇಕು. ಗ್ರಾಮದಲ್ಲಿ ತಿರುಗಾಡಬಾರದು ಎಂದು ತಿಳಿ ಹೇಳಿದ್ದಲ್ಲದೆ, ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿ ಹೇಳಿದ್ದರು. ಆದರೂ, ಮಾ. 22 ರಂದು ದುಬೈನಿಂದ ಬಂದಿರುವ ಈ ವ್ಯಕ್ತಿ ಮನೆಯಲ್ಲಿ ಇರದೇ ಗ್ರಾಮದ ಬಸವೇಶ್ವರ ವೃತ್ತ ಸೇರಿದಂತೆ ವಿವಿಧೆಡೆ ತಿರುಗಾಡಿದ್ದಾನೆ.

ಒಂದೇ ದಿನ 7 ಜನರಿಗೆ ಸೋಂಕು, ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 33ಕ್ಕೆ ಏರಿಕೆ

ಇದರಿಂದ ಭೀತಿಗೊಳಗಾದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗ್ರಾಮದ ಬಸವೇಶ್ವರ ವೃತ್ತದಲ್ಲಿದ್ದ ಕೊರೊನಾ ಶಂಕಿತ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ, ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ರವಾನಿಸಿದ್ದಾರೆ.

ಕೊರೊನಾ: ಸುಳ್ಳು ಸುದ್ದಿ ಹರಡುವ ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ!

ವೈದ್ಯರು ಗೃಹ ಬಂಧನದಲ್ಲಿರುವಂತೆ ಸೂಚಿಸಿದ ಮೇಲೂ ಬೇಕಾ ಬಿಟ್ಟಿಯಾಗಿ ಗ್ರಾಮದಲ್ಲಿ ತಿರುಗಾಡಿದ್ದಲ್ಲದೇ, ತನ್ನಿಂದ ಇತರರಿಗೆ ಕೊರೊನಾ ವೈರಸ್ ಹರಡಬಹುದು ಎಂದು ಗೊತ್ತಿದ್ದೂ, ಉದ್ದೇಶಪೂರ್ವಕವಾಗಿ ಗ್ರಾಮದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೇ ತಿರುಗಾಡುತ್ತಿದ್ದನು.

ಈತನನ್ನು ಹಾಗೆಯೇ ಬಿಟ್ಟಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗುವುದಲ್ಲದೆ, ಗ್ರಾಮಸ್ಥರಿಗೂ ಕೊರೊನಾ ಸೋಂಕು ಹರಡುವ ಸಂಭವ ಇದೆ ಎಂದು ಮನ್ನಾಎಖ್ಖೆಳ್ಳಿ ಪಿಎಸ್‌ಐ ಸುನಿತಾ ಅವರು ನೀಡಿರುವ ದೂರಿನ ಮೇರೆಗೆ ಈತನ ವಿರುದ್ಧ ಮನ್ನಾಎಖ್ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ