ಆ್ಯಪ್ನಗರ

ಅಂಚೆ ಸೇವಕರ ವೇತನ 3 ಪಟ್ಟು ಹೆಚ್ಚಳ

ಸಂಸತ್ತಿನಲ್ಲಿ ಗ್ರಾಮೀಣ ಅಂಚೆ ಸೇವಕರ ಸಮಸ್ಯೆಯ ಕುರಿತು (2015ರ ಮಾ.18 )ಬೀದರ್‌ ಸಂಸದ ಭಗವಂತ ಖೂಬಾ ಪ್ರಸ್ತಾಪಿಸಿ, ಅಂಚೆ ನೌಕರರ ಸಂಬಳ ಹೆಚ್ಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿದ್ದರು. ಅದರ ಫಲವಾಗಿ ಗ್ರಾಮೀಣ ಅಂಚೆ ಸೇವಕರ ವೇತನ ಮೂರು ಪಟ್ಟು ಹೆಚ್ಚಳಗೊಂಡಿದೆ ಎಂದು ಸಂಸದ ಭಗವಂತ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijaya Karnataka 8 Jun 2018, 5:00 am
ಬೀದರ್‌ : ಸಂಸತ್ತಿನಲ್ಲಿ ಗ್ರಾಮೀಣ ಅಂಚೆ ಸೇವಕರ ಸಮಸ್ಯೆಯ ಕುರಿತು (2015ರ ಮಾ.18 )ಬೀದರ್‌ ಸಂಸದ ಭಗವಂತ ಖೂಬಾ ಪ್ರಸ್ತಾಪಿಸಿ, ಅಂಚೆ ನೌಕರರ ಸಂಬಳ ಹೆಚ್ಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿದ್ದರು. ಅದರ ಫಲವಾಗಿ ಗ್ರಾಮೀಣ ಅಂಚೆ ಸೇವಕರ ವೇತನ ಮೂರು ಪಟ್ಟು ಹೆಚ್ಚಳಗೊಂಡಿದೆ ಎಂದು ಸಂಸದ ಭಗವಂತ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web postal staff salary increases 3 times
ಅಂಚೆ ಸೇವಕರ ವೇತನ 3 ಪಟ್ಟು ಹೆಚ್ಚಳ


ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕದ ಜೀವನಾಡಿಯಾಗಿರುವ ಅಂಚೆ ಇಲಾಖೆಯು ಇಂದು ಕೇವಲ ಪತ್ರ ವಿತರಿಸುವುದಷ್ಟೇ ಅಲ್ಲದೆ, ಬ್ಯಾಂಕಾಗಿ, ಉಳಿತಾಯ ಸಂಸ್ಥೆಯಾಗಿ, ಸರಕಾರದಿಂದ ವಿವಿಧ ಧನ ಸಹಾಯವನ್ನು ಫಲಾನುಭವಿಗಳಿಗೆ ವಿತರಿಸುವ ಬಹುಮುಖ್ಯವಾದ ಪಾತ್ರ ನಿರ್ವಹಿಸುತ್ತಿದೆ. ಆದರೆ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಡಿಮೆ ಸಂಬಳದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆಯೆ ಕಷ್ಟವಾಗಿದೆ ಎಂದು ಖೂಬಾ ತಿಳಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕೂಡಲೇ ಸಮಿತಿಯೊಂದನ್ನು ರಚಿಸಿ ಅದರನ್ವಯ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದರು. ಅದರಂತೆ ಕಮಲೇಶ್ಚಂದ್ರ ಸಮಿತಿ ರಚನೆಯಾಗಿ ವರದಿಯನ್ನೂ ನೀಡಿತ್ತು. ಜೂ. 6 ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಗ್ರಾಮೀಣ ಅಂಚೆ ನೌಕರರಿಗೆ 3 ಪಟ್ಟು ವೇತನ ಹೆಚ್ಚಿಸುವ ಕಮಲೇಶ್‌ ಚಂದ್ರ ವರದಿಗೆ ಮೋದಿ ಅವರು ಅನುಮೋದನೆ ನೀಡಿದ್ದಾರೆ ಎಂದು ಖೂಬಾ ತಿಳಿಸಿದ್ದಾರೆ.

ದೇಶಾದ್ಯಂತ ಎಲ್ಲಾ ಗ್ರಾಮೀಣ ಅಂಚೆ ನೌಕರರಿಗೆ ಈ ಹೆಚ್ಚಳದ ಲಾಭ ದೊರಕಲಿದೆ. 2016 ರಿಂದ ಜಾರಿಗೊಂಡ (7ನೇ ವೇತನ ಆಯೋಗ) ಪೂರ್ವಾನ್ವಯ ವೇತನ ಬಾಕಿ ಹಣ ಕೂಡ ಪಡೆಯಲಿದ್ದಾರೆ. ಅಲ್ಲದೆ ವಾರ್ಷಿಕ ಶೇ. 4% ರಷ್ಟು ವೇತನ ಏರಿಕೆಗೂ ಅನುಮತಿ ನೀಡಲಾಗಿದೆ. ಉಳಿದ ಭತ್ಯೆಗಳನ್ನು ಕೂಡ ಹೆಚ್ಚಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಇವರೆಲ್ಲರಿಗೂ ನಿವೃತ್ತಿಯ ನಂತರವು ನಿಯಮಾನುಸಾರ ಸೌಲಭ್ಯಗಳು ಸಿಗಲಿವೆ. ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರಿಂದ ದೇಶದ ಒಟ್ಟು 3.7 ಲಕ್ಷ ಅಂಚೆ ಇಲಾಖೆಯ ಕಟ್ಟಕಡೆಯ ನೌಕರರಿಗೆ ಲಾಭವಾಗಲಿದೆ. ನನ್ನ ಬೇಡಿಕೆಯನ್ನು ಮನ್ನಿಸಿರುವ ಪ್ರಧಾನಿ ನರೇಂದ್ರ ಮೋದಿ, ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ, ರವಿಶಂಕರ ಪ್ರಸಾದ್‌ ಅವರಿಗೆ ಅಭಿನಂದಿಸುವೆ ಎಂದು ಖೂಬಾ ಹೇಳಿದ್ದಾರೆ.

ಹೆಚ್ಚಳವಾದ ವೇತನದ ಮಾಹಿತಿ

2,295 ರೂ ಮಾಸಿಕ ವೇತನ ಪಡೆಯುವವರು ಇನ್ನು ಮುಂದೆ 10 ಸಾವಿರ ವೇತನ ಪಡೆಯಲಿದ್ದಾರೆ. 2,745 ರೂ. ಮಾಸಿಕ ವೇತನ ಪಡೆಯುವವರು ಇನ್ನು ಮುಂದೆ 12 ಸಾವಿರ ರೂ. ವೇತನ ಪಡೆಯುವರು ಹಾಗೂ 4,115 ರೂ. ಮಾಸಿಕ ವೇತನ ಪಡೆಯುತ್ತಿರುವ ಸಿಬ್ಬಂದಿ ಇನ್ನು ಮುಂದೆ 14, 500 ರೂ. ವೇತನ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ