ಆ್ಯಪ್ನಗರ

ಪ್ರಕಾಶ್‌ ಖಂಡ್ರೆ ಗೌರವಕ್ಕೆ ಧಕ್ಕೆ; ಆರೋಪಿ ಬಂಧನ

ಸಾಮಾಜಿಕ ಜಾಲ ತಾಣಗಳಲ್ಲಿ ಭಾಲ್ಕಿಯ ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ಅವರಿಗೆ ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾಲ್ಕಿಯ ಕುಂಬೇಶ್ವರ ಗಲ್ಲಿಯ ಸಚಿನ್‌ ಗೋವಿಂದರಾವ್‌ ನಿಲಂಗೇಕರ್‌ಗೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Vijaya Karnataka 15 Jun 2019, 10:05 pm
ಬೀದರ್‌ :ಸಾಮಾಜಿಕ ಜಾಲ ತಾಣಗಳಲ್ಲಿ ಭಾಲ್ಕಿಯ ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ಅವರಿಗೆ ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾಲ್ಕಿಯ ಕುಂಬೇಶ್ವರ ಗಲ್ಲಿಯ ಸಚಿನ್‌ ಗೋವಿಂದರಾವ್‌ ನಿಲಂಗೇಕರ್‌ಗೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Vijaya Karnataka Web prakash khandre seeks respect the arrest of the accused
ಪ್ರಕಾಶ್‌ ಖಂಡ್ರೆ ಗೌರವಕ್ಕೆ ಧಕ್ಕೆ; ಆರೋಪಿ ಬಂಧನ

ಜೂ. 9 ರಂದು ರಾತ್ರಿ 9.50 ನಿಮಿಷಕ್ಕೆ ವಾಟ್ಸ್‌ ಆ್ಯಪ್‌ನಲ್ಲಿ ಪ್ರಕಾಶ್‌ ಖಂಡ್ರೆ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಹ ಪೋಸ್ಟ್‌ ಹಾಕಲಾಗಿದೆ ಎಂದು ಭಾಲ್ಕಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಗೋವಿಂದರಾವ್‌ ಮೈನಾಳೆ ಅವರು ದೂರು ಸಲ್ಲಿಸಿ, ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಅಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭಾಲ್ಕಿ ಪುರಸಭೆಯ ವಾರ್ಡ್‌ ನಂ. 9ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ಸಚಿನ್‌ ಗೋವಿಂದರಾವ್‌ ನಿಲಂಗೇಕರ್‌ ಅವರು, ತನ್ನ ಪ್ರತಿಸ್ಪರ್ಧಿ ಪ್ರವೀಣ್‌ ಸಾವರೆ ಅವರು ಗೆದ್ದಿದ್ದಕ್ಕೆ ಪ್ರತೀಕಾರವಾಗಿ ಅವನ ಮೇಲೆ ಅಪವಾದ ಹೊರಿಸುವ ದುರುದ್ದೇಶದಿಂದ ವರವಟ್ಟಿಯ ಗಂಗೂಬಾಯಿ ವಿಶ್ವನಾಥ ಅವರು ರಿಪೇರಿಗಾಗಿ ನೀಡಿದ್ದ ಮೊಬೈಲ್‌ ಫೋನ್‌ಅನ್ನು ದುರುಪಯೋಗಪಡಿಸಿಕೊಂಡು ಈ ಫೋನ್‌ ನಂಬರ್‌ ಬಳಸಿ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಪೋಸ್ಟ್‌ ಮಾಡಿರುವುದಾಗಿ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ.

ಆರೋಪಿ ಸಚಿನ್‌ ವಿರುದ್ಧ ಭಾಲ್ಕಿ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿ ಸಚಿನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸ್ಪಿ ಟಿ. ಶ್ರೀಧರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ