ಆ್ಯಪ್ನಗರ

ಪ್ರಿಯಾಂಕಾ ಗಾಂಧಿ ವಾದ್ರಾ ನಗರ ನಕ್ಸಲರು: ಭಗವಂತ್‌ ಖೂಬಾ

ಪೌರತ್ವ ತಿದ್ದುಪಡಿ ವಿರೋಧಿಸುವವರು ನಗರ ನಕ್ಸಲರು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಬೀದರ್‌ ಸಂಸದ ಭಗವಂತ್‌ ಖೂಬಾ ಬೆಂಬಲ ಸೂಚಿಸಿದರು.

Vijaya Karnataka Web 27 Dec 2019, 4:18 pm
ಬೀದರ್‌: ಕಾಂಗ್ರೆಸ್‌ ಅಧ್ಯಕ್ಷರಾದ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ನಗರ ನಕ್ಸಲರು. ಈ ಗುಂಪಿನ ಮುಖ್ಯಸ್ಥರು. ಯಾವುದೇ ಸಾಕ್ಷಿ, ಪುರಾವೆ ಇಲ್ಲದೇ ಬಿಜೆಪಿ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಈ ರೀತಿ ಹೇಳುವುದು ಸರಿಯಲ್ಲ ಎಂದು ಬೀದರ್‌ ಸಂಸದ ಭಗವಂತ ಖೂಬಾ ತಿರುಗೇಟು ನೀಡಿದರು.
Vijaya Karnataka Web ಭಗವಂತ್‌ ಖೂಬಾ
ಭಗವಂತ್‌ ಖೂಬಾ


ಬೀದರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಗವಂತ್‌ ಖೂಬಾ ಮಾತನಾಡಿದರು. ಬಿಜೆಪಿ ದೇಶದ ಸಂವಿಧಾನಕ್ಕೆ ಕಪ್ಪು ಚುಕ್ಕೆ ಎಂದು ಪ್ರಿಯಾಂಕಾ ನೀಡಿದ ಹೇಳಿಕೆಗೆ ಭಗವಂತ್‌ ಖೂಬಾ ತಿರುಗೇಟು ನೀಡಿದರು.

ನಾವು ಸಂವಿಧಾನ ವಿರೋಧದ ಯಾವ ಕೆಲಸವನ್ನು ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಸಂವಿಧಾನಕ್ಕೆ ಕಪ್ಪು ಚುಕ್ಕೆ ಎಂದು ಭಗವಂತ ಖೂಬಾ ದೂರಿದರು.

ಮಂಗಳೂರಿನ ಗಲಭೆಯಲ್ಲಿ ಮೃತಪಟ್ಟಿರುವವರಿಗೆ ಕಾಂಗ್ರೆಸ್, ಜೆಡಿಎಸ್‌ನವರು ಪರಿಹಾರ ನೀಡಿರುವುದು ರಾಜಕೀಯದ ಆಟ. ದೇಶ ದ್ರೋಹಿಗಳನ್ನು ಬೆಂಬಲಿಸುವುದು ಯಾವುದೇ ಪಕ್ಷಕ್ಕೂ ತರವಲ್ಲ ಎಂದು ಭಗವಂತ್‌ ಖೂಬಾ ಎಂದು ಗಂಭೀರ ಆರೋಪ ಮಾಡಿದರು.

ಡಿ.ಕೆ. ಶಿವಕುಮಾರ ಅವರು ವಿಶ್ವದ ಅತಿ ದೊಡ್ಡ ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಯೇಸುವಿನ ಬದಲು ಕೆಂಪೇಗೌಡರ ಪ್ರತಿಮೆ ನಿರ್ಮಿಸಬೇಕಿತ್ತು. ಸೋನಿಯಾ ಗಾಂಧಿ ಅವರನ್ನು ಖುಷಿ ಪಡಿಸಲು ಯೇಸುವಿನ ಪ್ರತಿಮೆ ನಿರ್ಮಿಸುತ್ತಿದ್ದಾರೆ ಎಂದು ಭಗವಂತ ಖೂಬಾ ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ