ಆ್ಯಪ್ನಗರ

ಜನರಲ್ಲಿಅರಿವು ಮೂಡಿಸುವುದೇ ವಾಸ್ತವ್ಯ ಉದ್ದೇಶ

ಜಿಲ್ಲಾವಾರ್ತಾಧಿಕಾರಿಗಳು ಪ್ರತಿ ತಿಂಗಳಲ್ಲಿ 2 ಗ್ರಾಮಗಳಲ್ಲಿನಡೆಸಲಿರುವ ಗ್ರಾಮ ವಾಸ್ತವ್ಯ ವಿಶೇಷ ಕಾರ್ಯಕ್ರಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಶನಿವಾರ ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿಹಸಿರು ನಿಶಾನೆ ತೋರಿದರು.

Vijaya Karnataka 15 Dec 2019, 5:07 pm
ಬೀದರ್‌:ಜಿಲ್ಲಾವಾರ್ತಾಧಿಕಾರಿಗಳು ಪ್ರತಿ ತಿಂಗಳಲ್ಲಿ 2 ಗ್ರಾಮಗಳಲ್ಲಿನಡೆಸಲಿರುವ ಗ್ರಾಮ ವಾಸ್ತವ್ಯ ವಿಶೇಷ ಕಾರ್ಯಕ್ರಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಶನಿವಾರ ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿಹಸಿರು ನಿಶಾನೆ ತೋರಿದರು.
Vijaya Karnataka Web purpose of stay is to raise awareness among the people
ಜನರಲ್ಲಿಅರಿವು ಮೂಡಿಸುವುದೇ ವಾಸ್ತವ್ಯ ಉದ್ದೇಶ


ಸರಕಾರದ ಹತ್ತು ಹಲವು ಯೋಜನೆಗಳ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿವಾರ್ತಾ ಇಲಾಖೆಯು ರೂಪಿಸಿರುವ ವಿನೂತನ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದ ದಿನ ನೂರು ಸಾಧನೆ ನೂರಾರು ಎನ್ನುವ ಪುಸ್ತಕವನ್ನು ಗ್ರಾಪಂ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಆಯುಕ್ತರು ವಿತರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಬೀದಿಗಳಲ್ಲಿಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಬೀದಿನಾಟಕ ಜಾಗೃತಿ

ಪ್ರಮುಖ ವೃತ್ತದಲ್ಲಿಬೀದಿನಾಟಕ ಜಾಥಾ ಬಳಿಕ ಗ್ರಾಮದ ಪ್ರಮುಖ ವೃತ್ತದಲ್ಲಿಕಲಾವಿದರು ಬೀದಿನಾಟಕ ನಡೆಸಿ ಶೌಚಾಲಯದ ಬಳಕೆ ಮತ್ತು ಸರಕಾರದ ಇನ್ನಿತರ ಯೋಜನೆಗಳ ಬಗೆಗೆ ಅರಿವು ಮೂಡಿಸಿದರು. ಈ ವೇಳೆ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ತುಕಾರಾಂ ದೊಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೆಹಬೂಬ್‌ ನದಾಫ್‌ ಅವರುಗಳು ಮಾತನಾಡಿ, ಗ್ರಾಮ ವಾಸ್ತವ್ಯ ವಾರ್ತಾ ಇಲಾಖೆಯ ಗಮನಾರ್ಹ ಕಾರ‍್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷರಾದ ಅನಿತಾ ಲೊಬೋಜಿ ಜಾಧವ್‌, ಉಪಾಧ್ಯಕ್ಷ ತುಕಾರಾಮ ಹಣಮಂತ ದೊಡ್ಡಿ, ಸದಸ್ಯ ಬಾಬುರಾವ್‌ ವಿಠಲ್‌ ರಾವ್‌ ಪಾಟೀಲ್‌, ಶಿವಾಜಿ ಸಾಹುಕಾರ್‌ ಇತರರು ಭಾಗಿಯಾಗಿದ್ದರು.

ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾಹಿತಿ ನೀಡಿದರು. ಸರಕಾರಿ ಪ್ರೌಢ ಶಾಲೆ ಮುಖ್ಯಗುರು ಹಣಮಂತರಾವ್‌ ಪೂಜಾರಿ, ಪ್ರಾಥಮಿಕ ಶಾಲೆ ಮುಖ್ಯಗುರು ವಿಠಲರಾವ್‌, ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ, ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮೊಳಗಿದ ಜಾಗೃತಿ ಗೀತೆ
ಸೃಜನ ಕಲಾ ಸ್ವಯಂ ಸೇವಾ ಸಂಸ್ಥೆ, ಕೋಹಿನೂರ ವಾಡಿ ಕಲಾ ತಂಡದ ಕಲಾವಿದರಾದ ಮಧುಕರ್‌ ಘೋಡಕೆ, ಏಸುದಾಸ ಅಲಿಯಂಬುರೆ, ಗುರುಶಾಂತಯ್ಯ ಮಠಪತಿ, ಸಂದೀಪ ತೇಲಗಾಂವ್‌, ಅಜಯ ಅಲಿಯಂಬುರೆ, ಗೋದಾವರಿ ಶಿಂಧೆ, ಮೀನಾಕ್ಷಿ ಯೆಮನ್‌, ಬಬಿತಾ ಕಾಂಬಳೆ ಹಾಗೂ ಕಲ್ಚರಲ್‌ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಚಿಮಕೋಡ ಕಲಾ ತಂಡದ ವೀಣಾ ದೇವದಾಸ ಚಿಮಕೋಡ, ಬಕ್ಕಪ್ಪ ದಂಡಿನ್‌, ಯಲ್ಲಾಲಿಂಗ ಸುಣಗಾರ್‌ ಕಣಜಿ ಜಾಗೃತಿ ಗೀತೆಗಳನ್ನು ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ