ಆ್ಯಪ್ನಗರ

ಗುರುದ್ವಾರಕ್ಕೆ ರಾಹುಲ್‌ ಗಾಂಧಿ ಭೇಟಿ, ದರುಶನ

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ನಗರದಲ್ಲಿರುವ ಐತಿಹಾಸಿಕ ಗುರುನಾನಕ್‌ ಮಂದಿರಕ್ಕೆ ಭೇಟಿ ನೀಡಿ ಗುರುನಾನಕರ ದರುಶನ ಪಡೆದರು. ತಲೆಯ ಮೇಲೆ ಪಗಡಿ ಕಟ್ಟಿಕೊಂಡು ಗುರುನಾನಕ್‌ ಝಿರಾ ಸಾಹೀಬ್‌ ಮಂದಿರಕ್ಕೆ ತೆರಳಿ, ಅಲ್ಲಿನ ಅಮೃತ ಕುಂಡದ ಸಿಹಿ ನೀರು ಸವಿದರು. ಬಳಿಕ ಗುರುನಾನಕ ಗ್ರಂಥ್‌ ಸಾಹೀಬ್‌ನ ದರುಶನ ಪಡೆದು, ಗಾಳಿ ಬೀಸುವ ಮೂಲಕ ಸೇವೆ ಸಲ್ಲಿಸಿದರು.

Vijaya Karnataka 5 May 2018, 4:23 pm
ಬೀದರ್‌ : ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ನಗರದಲ್ಲಿರುವ ಐತಿಹಾಸಿಕ ಗುರುನಾನಕ್‌ ಮಂದಿರಕ್ಕೆ ಭೇಟಿ ನೀಡಿ ಗುರುನಾನಕರ ದರುಶನ ಪಡೆದರು. ತಲೆಯ ಮೇಲೆ ಪಗಡಿ ಕಟ್ಟಿಕೊಂಡು ಗುರುನಾನಕ್‌ ಝಿರಾ ಸಾಹೀಬ್‌ ಮಂದಿರಕ್ಕೆ ತೆರಳಿ, ಅಲ್ಲಿನ ಅಮೃತ ಕುಂಡದ ಸಿಹಿ ನೀರು ಸವಿದರು. ಬಳಿಕ ಗುರುನಾನಕ ಗ್ರಂಥ್‌ ಸಾಹೀಬ್‌ನ ದರುಶನ ಪಡೆದು, ಗಾಳಿ ಬೀಸುವ ಮೂಲಕ ಸೇವೆ ಸಲ್ಲಿಸಿದರು.
Vijaya Karnataka Web rahul gandhi visits gurudvara cowardice
ಗುರುದ್ವಾರಕ್ಕೆ ರಾಹುಲ್‌ ಗಾಂಧಿ ಭೇಟಿ, ದರುಶನ


ಈ ವೇಳೆ ಗುರುನಾನಕ್‌ ಝಿರಾ ಸಾಹೀಬ್‌ ವತಿಯಿಂದ ರಾಹುಲ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಬಿ.ಕೆ. ಹರಿಪ್ರಸಾದ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ, ಶಾಸಕರಾರ ಅಶೋಕ ಖೇಣಿ, ರಹಿಂ ಖಾನ್‌, ವಿಧಾನ ಪರಿಷತ್‌ ಸದಸ್ಯ ವಿಜಯ್‌ಸಿಂಗ್‌, ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ದತ್ತಾತ್ರೇಯ ಮೂಲಗೆ, ಮಂದಿರದ ಅಧ್ಯಕ್ಷ ಸರದಾರ್‌ ಬಲಬೀರ್‌ಸಿಂಗ್‌ ಮತ್ತಿತರರು ಇದ್ದರು.

ಗುರುವಾರ ದಿನವಿಡೀ ಬೀದರ್‌ನ ನಾಲ್ಕು ಕಡೆಗಳಲ್ಲಿ ಬಹಿರಂಗ ಸಭೆ ಹಾಗೂ ಬಸ್‌ನಲ್ಲಿ ರಾರ‍ಯಲಿ ನಡೆಸಿದ್ದ ರಾಹುಲ್‌ ಗಾಂಧಿ ರಾತ್ರಿ ಬೀದರ್‌ನ ಮಂಗಲಪೇಟ್‌ನಲ್ಲಿರುವ ಎಸ್ಪಿ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದರು. ರಾತ್ರಿ ಅಲ್ಲಿಯೇ ಊಟ ಮಾಡಿದ್ದ ಅವರು, ಬೆಳಗ್ಗೆ ಗೆಸ್ಟ್‌ಹೌಸ್‌ನಲ್ಲಿ ವಾಕಿಂಗ್‌ ಮಾಡಿ ಫ್ರೆಶ್‌ ಆದರು. ಬಳಿಕ ಗುರುನಾಕ್‌ ಮಂದಿರಕ್ಕೆ ಭೇಟಿ ನೀಡಿದರು. ಅಲ್ಲಿಂದ ನೇರವಾಗಿ ಬೀದರ್‌ ವಾಯು ನೆಲೆಯ ಮೂಲಕ ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣಕ್ಕೆ ತೆರಳಿದರು.

ಈಚೆಗೆ ಬೀದರ್‌ಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೂ ಸಹ ಗುರುದ್ವಾರಕ್ಕೆ ಭೇಟಿ ನೀಡಿ ದರುಶನ ಪಡೆದಿದ್ದರು. ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಗುರುದ್ವಾರಕ್ಕೆ ಭೇಟಿ ನೀಡುವ ಮೂಲಕ ಗುರುದ್ವಾರಕ್ಕೆ ಮತ್ತಷ್ಟು ಖ್ಯಾತಿ ಸಿಗುವಂತಾಗಿದೆ. ದೇಶದ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಧ್ಯಕ್ಷರು ಬೀದರ್‌ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳಾದ ಅನುಭವ ಮಂಟಪ, ಗುರುದ್ವಾರಕ್ಕೆ ಭೇಟಿ ನೀಡಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ