ಆ್ಯಪ್ನಗರ

ಬಸ್‌ ಡಿಕ್ಕಿ; ಬೈಕ್‌ ಸವಾರ ಸಾವು

ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಮೃತಪಟ್ಟಿದ್ದಾನೆ ಮೃತನನ್ನು ಜನವಾಡಾ ಗ್ರಾಮದ ಸುಧಾಕರ್‌ ಎಂದು ಗುರುತಿಸಲಾಗಿದೆ.

Vijaya Karnataka 16 Aug 2019, 9:09 pm
ಬೀದರ್‌: ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಮೃತಪಟ್ಟಿದ್ದಾನೆ. ಮೃತನನ್ನು ಜನವಾಡಾ ಗ್ರಾಮದ ಸುಧಾಕರ್‌ ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ಬೆಳ್ಳೂರಾ ಗ್ರಾಮಕ್ಕೆ ಹೋಗಿ ಜನವಾಡಾಕ್ಕೆ ವಾಪಸ್‌ ಬೈಕ್‌ ಮೇಲೆ ಬರುವಾಗ ಚಿಕಪೇಟ್‌ನ ಪೆಟ್ರೋಲ್‌ ಬಂಕ್‌ ಬಳಿ ಬೀದರ್‌-ಔರಾದ್‌ ರಸ್ತೆಯ ಮೇಲೆ ಎದುರಿನಿಂದ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಸುಧಾಕರ ಚಿಕಿತ್ಸೆಗಾಗಿ ಆಸ್ಪತ್ರೆಗೆ ತಂದಾಗ ಮೃತಪಟ್ಟಿದ್ದಾನೆ. ಆರೋಪಿ ಬಸ್‌ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಬೀದರ್‌ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web road accidendeth
ಬಸ್‌ ಡಿಕ್ಕಿ; ಬೈಕ್‌ ಸವಾರ ಸಾವು


ಹಲ್ಲೆ; ವ್ಯಕ್ತಿ ಸಾವು, ದೂರು ದಾಖಲು

ಬೀದರ್‌: ಆಟೋಗೆ ಡಿಕ್ಕಿ ಹೊಡೆದಿರುವದನ್ನು ಪ್ರಶ್ನಿಸಿದ್ದಕ್ಕೆ ಎಂ.ಡಿ. ಜಮೀಲ್‌ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹೊಟ್ಟೆ ಹಾಗೂ ಎದೆಯಲ್ಲಿ ಗುದ್ದಿದ ಪರಿಣಾಮ ತನ್ನ ಪತಿ ಸೈಯದ್‌ ಅಕ್ಬರ್‌ ಶಾ ಮೃತಪಟ್ಟಿದ್ದಾನೆ ಎಂದು ಮೃತನ ಪತ್ನಿ ಶಿಬಾ ಎನ್ನುವವರು ಠಾಣೆಗೆ ದೂರು ನೀಡಿದ್ದಾರೆ.

ಸುಖಾ ಸುಮ್ಮನೆ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದ ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಎದೆ ನೋವಾಗುತ್ತಿದೆ ಎಂದು ಅಬುಲ್‌ ಫೈಜ್‌ ದರ್ಗಾ ಬಳಿಯ ಅಮೀರ್‌ ಹಮಜಾ ಕಾಲೊನಿಯ ನಿವಾಸಿಯಾಗಿದ್ದ ಮೃತ ಸೈಯದ್‌ ಅಕ್ಬರ್‌ ಶಾ ತನ್ನ ಪತ್ನಿಗೆ ಆ. 4 ರಂದು ತಿಳಿಸಿದ್ದಾನೆ. ಬಳಿಕ ಆ. 5 ರಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದಾಗ ಸೈಯದ್‌ ಅಕ್ಬರ್‌ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಶೀಬಾ ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ