ಆ್ಯಪ್ನಗರ

ಶಾಲಾ ಕಟ್ಟಡ ದುರಸ್ತಿಗೊಳಿಸದಿದ್ದರೆ ರಸ್ತೆ ತಡೆ

ತಾಲೂಕಿನ ಗಂಗನಬೀಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಕಟ್ಟಡವನ್ನು ಗಾಯರಾಣ ಜಮೀನ್‌ ಸರ್ವೆ ನಂ.55 ಇಲ್ಲವೆ 107ರಲ್ಲಿನಿಯೋಜನೆ ಮಾಡುವಂತೆ ಸಂಭಾಜಿ ಬ್ರಿಗೇಡ್‌ ಸಂಘಟನೆ ಕಾರ್ಯಕರ್ತರು ಬುಧವಾರ ಸಹಾಯಕ ಆಯುಕ್ತರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

Vijaya Karnataka 20 Sep 2019, 5:00 am
ಕಮಲನಗರ:ತಾಲೂಕಿನ ಗಂಗನಬೀಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಕಟ್ಟಡವನ್ನು ಗಾಯರಾಣ ಜಮೀನ್‌ ಸರ್ವೆ ನಂ.55 ಇಲ್ಲವೆ 107ರಲ್ಲಿನಿಯೋಜನೆ ಮಾಡುವಂತೆ ಸಂಭಾಜಿ ಬ್ರಿಗೇಡ್‌ ಸಂಘಟನೆ ಕಾರ್ಯಕರ್ತರು ಬುಧವಾರ ಸಹಾಯಕ ಆಯುಕ್ತರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
Vijaya Karnataka Web road block if school building is not repaired
ಶಾಲಾ ಕಟ್ಟಡ ದುರಸ್ತಿಗೊಳಿಸದಿದ್ದರೆ ರಸ್ತೆ ತಡೆ


ಜಿಲ್ಲಾಧಿಕಾರಿಗಳ ಹೆಸರಿನಲ್ಲಿಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಶಂಕರಗೌಡ ವಣಕ್ಯಾಳ ಅವರಿಗೆ ಸಲ್ಲಿಸಿದರು.

50 ವರ್ಷಗಳ ಹಿಂದೆ ಮರಾಠಿ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದ್ದು, ಶಾಲೆಗೆ ನಿವೇಶನವನ್ನು ಖಾಸಗಿ ಪಟ್ಟೇದಾರರಿಂದ ಪಡೆಯಲಾಗಿದೆ. ಸಾದಾ ಕಾಗದ ಪತ್ರದ ಮೇಲೆ ಬರೆದುಕೊಡಲಾಗಿದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ 6ಶಾಲಾ ಕೋಣೆæಗಳನ್ನು ನಿರ್ಮಿಸಲಾಗಿದ್ದು, ಆ ಪೈಕಿ 5 ಕೋಣೆಗಳು ಶಿಥಿಲಗೊಂಡಿವೆ.ಇದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗಿದ್ದು, ಶಾಲೆ ಆಟದ ಮೈದಾನದಲ್ಲಿನಡೆಯುತ್ತಿದೆ. ಶಾಲಾ ಕೋಣೆಗಳ ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ನಿವೇಶನದ ತಕರಾರು ಇರುವ ಕಾರಣ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ.ಇದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ಮನವಿಯಲ್ಲಿವಿವರಿಸಲಾಗಿದೆ.

ತಕ್ಷಣ ಸರ್ವೆನಂ.55 ಅಥವಾ ಸರ್ವೆ ನಂ. 107ರಲ್ಲಿತಾತ್ಕಾಲಿಕ ತಗಡಿನ ಶೆಡ್‌ ಹೊಡೆದು ಮಕ್ಕಳಿಗೆ ಅಭ್ಯಾಸಕ್ಕಾಗಿ ಅನುಕೂಲ ಕಲ್ಪಿಸಬೇಕು. ತಕ್ಷಣ ಪರ್ಯಾಯ ವ್ಯವಸ್ಥೆ ರೂಪಿಸದೆ ಇದ್ದಲ್ಲಿಅಕ್ಟೋಬರ್‌10 ರಂದು ಸಂಘಟನೆ ವತಿಯಿಂದ ದಾಬಕಾ ಹೋಬಳಿ ಕೇಂದ್ರದಲ್ಲಿರಸ್ತೆ ತಡೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬ್ರಿಗೇಡ್‌ ತಾಲೂಕಾಧ್ಯಕ್ಷ ಸತೀಶ ವಾಸರೆ, ಜಿಲ್ಲಾಕಾರ್ಯಾಧ್ಯಕ್ಷ ಮಾರುತಿ ಪಾಟೀಲ, ತಾಲೂಕು ಉಪಾಧ್ಯಕ್ಷ ಅಂಕುಶ ವಾಡೀಕರ್‌, ಗೋವಿಂದ ಪಾಟೀಲ, ನರಸಿಂಗ ಜಾಧವ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ