ಆ್ಯಪ್ನಗರ

ಹುತಾತ್ಮ ಯೋಧ ಮಹಾದೇವಪ್ಪ ಪಾರ್ಥಿವ ಶರೀರಕ್ಕೆ ಅಂತಿಮ ನಮನ

ಛತ್ತಿಸಗಢನ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಕ್ಸಲ್‌ ದಾಳಿಯಲ್ಲಿ ಹುತಾತ್ಮರಾದ ಕಲಬುರಗಿ ಜಿಲ್ಲೆಯ ಮರಗುತ್ತಿ ಗ್ರಾಮದ ಮಹಾದೇವಪ್ಪ ಪಾಟೀಲ್‌ ಅವರ ಪಾರ್ಥಿವ ಶರೀರಕ್ಕೆ ಪಟ್ಟಣದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ ಸೇರಿ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

Vijaya Karnataka 30 Jun 2019, 5:00 am
ಹುಮನಾಬಾದ್‌:ಛತ್ತಿಸಗಢನ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಕ್ಸಲ್‌ ದಾಳಿಯಲ್ಲಿ ಹುತಾತ್ಮರಾದ ಕಲಬುರಗಿ ಜಿಲ್ಲೆಯ ಮರಗುತ್ತಿ ಗ್ರಾಮದ ಮಹಾದೇವಪ್ಪ ಪಾಟೀಲ್‌ ಅವರ ಪಾರ್ಥಿವ ಶರೀರಕ್ಕೆ ಪಟ್ಟಣದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ ಸೇರಿ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.
Vijaya Karnataka Web salutation to the body of yodha mahadevappa parthiv
ಹುತಾತ್ಮ ಯೋಧ ಮಹಾದೇವಪ್ಪ ಪಾರ್ಥಿವ ಶರೀರಕ್ಕೆ ಅಂತಿಮ ನಮನ


ಹೈದರಾಬಾದ್‌ನಿಂದ ಸ್ವಗ್ರಾಮ ಮರಗುತ್ತಿಗೆ ತೆರಳುತಿದ್ದ ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಪಟ್ಟಣದ ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪ ವೃತ್ತದಲ್ಲಿ ಶನಿವಾರ ಹುತಾತ್ಮ ವೀರಯೋಧನಿಗೆ ಯುವಜನತೆ ಬೈಕ್‌ ರಾರ‍ಯಲಿ ನಡೆಸಿ ಗೌರವ ಸಲ್ಲಿಸಿದರು.

ದಾರಿಯುದ್ದಕ್ಕೂ ಯುವಜನತೆ ಭಾರತ ಮಾತಾಕಿ ಜೈ, ಮಹಾದೇವಪ್ಪ ಪಾಟೀಲ್‌ ಅಮರ್‌ ಹೈ ಎಂಬ ಘೋಷಣೆ ಹಾಕಿದರು. ಈ ವೇಳೆ ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ಸುನಿಲ್‌ ಪತ್ರಿ, ಕರವೇ ಅಧ್ಯಕ್ಷ ಮನೋಜಕುಮಾರ ಸೀತಾಳೆ, ಪವನ ತೆಲಂಗ್‌,ಮಹೇಶ, ವೀರೇಶ ಮಠಪತಿ, ಶಿವುರೆಡ್ಡಿ ವಾಂಜರಿ,ಸುಮಿತ್‌ ಸಂಗಶಟ್ಟಿ, ಶರಣು ಪಾಟೀಲ್‌,ಗೋಪಾಲರೆಡ್ಡಿ ಜಲಸಿಂಗಿ, ಮಲ್ಲಿಕಾರ್ಜುನ ಜಲಸಿಂಗಿ, ಮಲ್ಲು ಸ್ವಾಮಿ, ಮಹೇಂದ್ರ, ಶಂಕರ, ಓಂಕಾರ, ಸುನಿಲ್‌ ಮೆಕ್ಯಾನಿಕ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ