ಆ್ಯಪ್ನಗರ

12ತರಗತಿ ಕೋಣೆ ಮತ್ತು ಶಾಲಾ ಕಟ್ಟಡ ಶಿಥಿಲ

ತಾಲೂಕಿನ ಠಾಣಾಕುಶನೂರ್‌ ಸರಕಾರಿ ಮಾದರಿ ಶಾಲೆ ಕಟ್ಟಡ ನಿರ್ಮಿಸಿ 56 ವರ್ಷ ಕಳೆದಿವೆ. ಇಲ್ಲಿರುವ 12 ಶಾಲಾ ಕೋಣೆಗಳು ಸೇರಿದಂತೆ ಆವರಣ ಗೋಡೆ ಶಿಥಿಲಗೊಂಡಿದ್ದು, ಮಕ್ಕಳು ಭಯ ಭೀತರಾಗಿದ್ದಾರೆ.

Vijaya Karnataka 15 Jun 2019, 9:59 pm
ಕಮಲನಗರ :ತಾಲೂಕಿನ ಠಾಣಾಕುಶನೂರ್‌ ಸರಕಾರಿ ಮಾದರಿ ಶಾಲೆ ಕಟ್ಟಡ ನಿರ್ಮಿಸಿ 56 ವರ್ಷ ಕಳೆದಿವೆ. ಇಲ್ಲಿರುವ 12 ಶಾಲಾ ಕೋಣೆಗಳು ಸೇರಿದಂತೆ ಆವರಣ ಗೋಡೆ ಶಿಥಿಲಗೊಂಡಿದ್ದು, ಮಕ್ಕಳು ಭಯ ಭೀತರಾಗಿದ್ದಾರೆ.
Vijaya Karnataka Web school building crack
12ತರಗತಿ ಕೋಣೆ ಮತ್ತು ಶಾಲಾ ಕಟ್ಟಡ ಶಿಥಿಲ


ಠಾಣಾಕುಶನೂರ್‌ ಗ್ರಾಪಂ ಕೇಂದ್ರ ಸ್ಥಾನ ಮತ್ತು ಹೋಬಳಿ ಕೇಂದ್ರವಾಗಿದೆ. 1964ರಲ್ಲಿ ಮೈಸೂರ್‌ ರಾಜ್ಯದ ಶಿಕ್ಷ ಣ ಇಲಾಖೆ ವತಿಯಿಂದ 12 ಕೋಣೆ ಸೇರಿದಂತೆ ಶಾಲಾವರಣದ ಕಟ್ಟಡ ನಿರ್ಮಿಸಲಾಗಿದೆ.

ಕನ್ನಡ 1ರಿಂದ 8 ಮತ್ತು ಮರಾಠಿ ಮಾಧ್ಯಮದ 6ಮತ್ತು 7ನೇ ತರಗತಿ ಸೇರಿದಂತೆ 325ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಾರೆ.

ಸೋರುವ ಕಟ್ಟಡ:

ಶಾಲಾ ಕೋಣೆ ಶಿಥಿಲಗೊಂಡಿವೆ. ಮಳೆಗಾಲದಲ್ಲಿ ಗೋಡೆ ಮತ್ತು ಚಾವಣಿಯಿಂದ ನೀರು ಸೋರಿಕೆಯಾಗುತ್ತವೆ. ವರಾಂಡದಲ್ಲಿ ನೀರು ಹರಿಯುವ ಸದ್ದು ಕೇಳಿ ಬರುತ್ತದೆ. ಮೂರು ಶಾಲಾ ಕೋಣೆಗಳ ಚಾವಣಿಗೆ ಅಳವಡಿಸಲಾದ ಪ್ಲಾಸ್ಟರ್‌ ಬಿದ್ದು ಹೋಗಿದ್ದು, ರಾಡುಗಳು ತೇಲಿವೆ. ಗೋಡೆ ಸುತ್ತಲು ನೀರು ಸೋರಿಕೆಯಿಂದ ಅಳವಡಿಸಲಾದ ಬಣ್ಣ ಹಾಳಾಗಿದೆ. ಹೀಗಾಗಿ ಮಳೆಗಾಲ ಬಂದರೆ ಮಕ್ಕಳಿಗೆ ಅಭ್ಯಾಸ ಮಾಡಲು ಕೋಣೆಗಳಿಲ್ಲ. ಶಾಲಾವರಣದಲ್ಲಿ ಇರುವ ಪ್ರೌಢಶಾಲೆ ತರಗತಿ ಕೋಣೆಯಲ್ಲೇ ಕುಳಿತು ಓದುತ್ತಾರೆ.

ವರಾಂಡದ ಚಾವಣಿ ಮತ್ತು ನಾಮಫಲಕ ಅಳವಡಿಸಿದ ಗೋಡೆ ಪ್ಲಾಸ್ಟರ್‌ ಬಿದ್ದು ಹೋಗಿದೆ. ರಾಡುಗಳು ತೇಲಿದ್ದು, ಮಕ್ಕಳಲ್ಲಿ ಭಯ ಮೂಡಿಸಿದೆ. ಶೈಕ್ಷ ಣಿಕ ವರ್ಷ ಪ್ರಾರಂಭವಾಗಿ 15 ದಿವಸಗಳು ಕಳೆದಿದೆ. ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುಂಚೆ ಶಿಥಿಲಗೊಂಡ ಶಾಲಾ ಕೋಣೆಗಳನ್ನು ತೆರವುಗೊಳಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಶಿಕ್ಷ ಣ ಇಲಾಖೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

12ಕೋಣೆ ತೆರವಿಗೆ ಆಗ್ರಹ:

ಶಾಲೆಯ 12 ಕೋಣೆಗಳು ಶಿಥಿಲಗೊಂಡಿದ್ದು, ಅವುಗಳನ್ನು ನೆಲಸಮಗೊಳಿಸುವಂತೆ ಜಿ.ಪಂ.ಎಂಜನಿಯರಿಂಗ್‌ ಇಲಾಖೆಗೆ ಪತ್ರ ಬರೆಯಲಾಗಿದೆ. ಅನುದಾನದ ಕೊರತೆ ನೆಪ ಹೇಳಲಾಗುತ್ತಿತ್ತು. ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಅವಕಾಶ ನೀಡಬಾರದು ಎಂದು ಶಿಕ್ಷ ಣ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಆದರೆ ಸದ್ಯ ಪರ್ಯಾಯ ಕೈಗೊಳ್ಳದೆ ಇರುವುದು ಪಾಲಕರಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಸಂಬಂಧಿತರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ತಕ್ಷ ಣ ತರಗತಿ ಕೋಣೆಗಳನ್ನು ನೆಲಸಮಗೊಳಿಸಿ, ಬೇರೆ ಸ್ಥಳದಲ್ಲಿ ಮಕ್ಕಳ ಅಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು. ಶಿಕ್ಷ ಣ ಇಲಾಖೆ ಮತ್ತು ಜಿಪಂ ಎಂಜನಿಯರಿಂಗ್‌ ಇಲಾಖೆ ವಿರುದ್ಧ ಕ್ರಮ ಜರುಗಿಸದಿದ್ದರೆ ಹೋರಾಟ ಮಾಡುವುದಾಗಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ತಿಳಿಸಿದೆ.

ಶಿವಾನಂದ ಬಿಚಕುಂದೆ, ತಾಲೂಕಾಧ್ಯಕ್ಷ , ಜೈ ಕನ್ನಡಿಗರ ರಕ್ಷ ಣಾ ವೇದಿಕೆ (ಫೋಟೋ. ಇದೆ)

2016-17 ನೇ ಸಾಲಿನಲ್ಲಿ ಜಿ.ಪಂ.ಎಂಜನಿಯರಿಂಗ್‌ ಇಲಾಖೆಗೆ 226 ಶಾಲಾ ಕೋಣೆಗಳನ್ನು ನೆಲಸಮಗೊಳಿಸುವಂತೆ ಸರಕಾರ ಅದೇಶಿಸಿದೆ. ಆ ಪೈಕಿ 215 ಶಾಲಾ ಕೋಣೆಗಳನ್ನು ನೆಲಸಮಗೊಳಿಸುವ ಕಾರ್ಯ ಪೂರ್ಣಗೊಂಡಿದೆ.ಉಳಿದ ಕಾಮಗಾರಿಗೆ ಅನುದಾನದ ಕೊರತೆ ಇದೆ.

ಅಶೋಕ ಸಜ್ಜನಶೆಟ್ಟಿ, ಸಹಾಯಕ ಕಾರ್ಯಪಾಲ ಅಭಿಯಂತರರು, ಜಿ.ಪಂ.ಎಂಜನಿಯರಿಂಗ್‌ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ