ಆ್ಯಪ್ನಗರ

ಹಸಿರಿಕರಣಕ್ಕೆ ಸೀಡ್‌ಬಾಲ್‌ ಯೋಜನೆ ಸಹಾಯಕಾರಿ

ಸೀಡ್‌ಬಾಲ್‌ ಯೋಜನೆ ಹಸಿರಿಕರಣಕ್ಕೆ ತುಂಬಾ ಸಹಕಾರಿಯಾಗಲಿದೆ. ಕಡಿಮೆ ನೀರು ಮತ್ತು ಮಾನವನ ಶ್ರಮ ಇಲ್ಲದೆ ಹೆಚ್ಚು ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವ ವಿನೂತನ ಯೋಜನೆ ಇದಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡೋಳಪ್ಪ ಪಿಎಸ್‌ ಬಣ್ಣಿಸಿದರು.

Vijaya Karnataka 6 Jun 2019, 5:00 am
ಬಸವಕಲ್ಯಾಣ :ಸೀಡ್‌ಬಾಲ್‌ ಯೋಜನೆ ಹಸಿರಿಕರಣಕ್ಕೆ ತುಂಬಾ ಸಹಕಾರಿಯಾಗಲಿದೆ. ಕಡಿಮೆ ನೀರು ಮತ್ತು ಮಾನವನ ಶ್ರಮ ಇಲ್ಲದೆ ಹೆಚ್ಚು ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವ ವಿನೂತನ ಯೋಜನೆ ಇದಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡೋಳಪ್ಪ ಪಿಎಸ್‌ ಬಣ್ಣಿಸಿದರು.
Vijaya Karnataka Web seedball planning is a helpful guide to fertilization
ಹಸಿರಿಕರಣಕ್ಕೆ ಸೀಡ್‌ಬಾಲ್‌ ಯೋಜನೆ ಸಹಾಯಕಾರಿ


ಇಲ್ಲಿನ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ್‌ ಗಂಗವಾರ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿಎಸ್‌ ಮಡೋಳಪ್ಪ ಮತ್ತು ಗ್ರಾಮಸ್ಥರು ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ಬುಧವಾರ ವಿಶ್ವ ಪರಿಸರ ದಿನವನ್ನಾಚರಿಸಿದರು.

ಈ ವೇಳೆ ಅವರು ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛಮೇವ ಜಯತೆ ಅಭಿಯಾನವನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಜೂ.11ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಅದಕ್ಕೆ ಮೂಲತಃ ಇಂದು ಚಾಲನೆ ನೀಡಲಾಗಿದೆ. ಅಂದು ಸರ್ಕಾರಿ ಸ್ಥಳಗಳಲ್ಲಿ ಸಸಿಗಳನ್ನು ನೇಡಲು ಆಯಾ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ಮೋರಖಂಡಿ ಗ್ರಾಪಂನಡಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸೀಮಂತಾಬಾಯಿ, ಉಪಾಧ್ಯಕ್ಷ ರಾಜೇಂದ್ರ ಕಾಶಪ್ಪ, ತಾಪಂ ಸದಸ್ಯ ಗುರುನಾಥ್‌ ಸೋನಖೆ, ಗ್ರಾಪಂ ಸದಸ್ಯ ಬಾಲಾಜಿ ಮುಗಳೆ, ಸಾಮಾಜಿಕ ಕಾರ್ಯಕರ್ತ ಶಾಹಜಿ ಧುಮಾಳ, ಬಸವರಾಜ ಉಸ್ತುರೆ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಏನಿದು ಸೀಡ್‌ಬಾಲ್‌ ಯೋಜನೆ?

ಮಾನವನ ಶ್ರಮ ಇಲ್ಲದೆ ಸಸಿಗಳ ಪೋಷಣೆ, ಕಡಿಮೆ ನೀರಿನಲ್ಲಿ ಸಸಿಗಳು ತನ್ನಷ್ಟಕ್ಕೆ ತಾನೇ ಹುಟ್ಟಲಿ ಎಂಬ ಉದ್ದೇಶದಿಂದ ಸೀಡ್‌ಬಾಲ್‌ (ಬೀಜವನ್ನೊಳಗೊಂಡ ಮಣ್ಣಿನ ಚೆಂಡು) ಯೋಜನೆಯನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಪರಿಚಯಿಸಲಾಗಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸೀಡ್‌ಬಾಲ್‌ ಯೋಜನೆ ಬಹಳ ವರ್ಷಗಳಿಂದ ಜಾರಿಯಲ್ಲಿದೆ. ಈ ಬಾರಿ ಈ ಯೋಜನೆಯನ್ನು ಅನುಸರಿಸುತ್ತಿರುವ ಜಿಲ್ಲೆಯ ತಾಲೂಕು ಪಂಚಾಯಿತಿಗಳ ಪೈಕಿ ಬಸವಕಲ್ಯಾಣ ಏಕೈಕವಾಗಿದೆ. ಸದ್ಯ ಇಲ್ಲಿ ಮಾತ್ರ ಈ ಅಭಿಯಾನ ಆರಂಭಿಸಲಾಗಿದೆ.

ಮಳೆ ಆರಂಭ ಮುಂಚೆ ತಾಪಂ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಐವತ್ತು ಸಾವಿರ ಸೀಡಬಾಲ್‌ಗಳನ್ನು ತಯಾರಿಸುವ ಗುರಿ ನೀಡಲಾಗಿದೆ. ಮಣ್ಣು, ಗೊಬ್ಬರ ಮತ್ತು ಎರಡ್ಮೂರು ಬೀಜಗಳನ್ನು ಸೇರಿಸಿ ಮಣ್ಣಿನ ಉಂಡೆ (ಚೆಂಡು)ಗಳನ್ನು ಮಾಡಿ ಒಣಗಿಸಿ ರಸ್ತೆ ಅಕ್ಕ-ಪಕ್ಕ, ಗ್ರಾಮದ ಗುಡ್ಡಗಾಡು ಪ್ರದೇಶ, ಬಯಲು ಪ್ರದೇಶ ಮತ್ತಿತರ ಸ್ಥಳಗಳಲ್ಲಿ ಅವುಗಳನ್ನು ಎಸೆಯಲಾಗುವುದು. ಮಳೆ ಬಂದಾಗ ಆ ಸೀಡ್‌ಬಾಲ್‌ಗಳು ಒದ್ದೆಯಾಗಿ ಒಳಗಿನಿಂದ ಮೊಳಕೆ ಹುಟ್ಟುತ್ತವೆ.

ಸೀತಾಫಲ, ಬೇವು ನೇರಳೆ ಹೀಗೆ ಕಡಿಮೆ ನೀರು ಮತ್ತು ಕಡಿಮೆ ಪೋಷಣೆ ಅಗತ್ಯವಿರುವ ಬೀಜಗಳನ್ನು ಸೀಡ್‌ಬಾಲ್‌ ತಯಾರಿಕೆಗೆ ಬಳಸಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ