ಆ್ಯಪ್ನಗರ

ವಿದ್ಯುತ್ ಶಾಕ್; ಸ್ಥಳದಲ್ಲೇ ಇಬ್ಬರ ಸಾವು

ಕೊಳವೆ ಬಾವಿಯ ಮೋಟಾರ್ ರಿಪೇರಿಗಾಗಿ ಮೋಟಾರ್‌ಗೆ ಅಳವಡಿಸಿದ್ದ ಪೈಪ್ ಮೇಲೆ ಎತ್ತಿ ಅದನ್ನು ಬಿಚ್ಚುತ್ತಿರುವಾಗ ಆಕಸ್ಮಿಕವಾಗಿ ಬೈಪ್‌ನ ಬ್ಯಾಲೆನ್ಸ್ ತಪ್ಪಿ ವಿದ್ಯುತ್ ವೈಯರ್‌ಗೆ ತಗುಲಿದೆ.

Vijaya Karnataka Web 16 Mar 2019, 8:29 pm
ಬೀದರ್: ಕೊಳವೆ ಬಾವಿಯ ಪೈಪ್‌ನ ಬ್ಯಾಲೆನ್ಸ್ ತಪ್ಪಿ ವಿದ್ಯುತ್ ವೈಯರ್‌ಗೆ ತಗುಲಿದ್ದರ ಪರಿಣಾಮ ಪೈಪ್‌ನಲ್ಲಿ ಕರೆಂಟ್ ಪಾಸ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web ವಿದ್ಯುತ್‌ ಶಾಕ್‌
ವಿದ್ಯುತ್‌ ಶಾಕ್‌


ಬೀದರ್ ತಾಲೂಕಿನ ಗೂನಳ್ಳಿ ಗ್ರಾಮದ ಘಾಳೆಪ್ಪ ಮಾಣಿಕಪ್ಪ ಹಾಸಗೊಂಡ (60) ಹಾಗೂ ದುಬಲಗುಂಡಿ ಗ್ರಾಮದ ಆಕಾಶ್ ನಾಗೇಶ್ ಸೇಡೋಳೆ (20) ಮೃತ ದುರ್ದೈವಿಗಳು.

ಗೂನಳ್ಳಿಯ ಘಾಳೆಪ್ಪ ಅವರ ಹೊಲದಲ್ಲಿ ಈ ಘಟನೆ ನಡೆದಿದೆ. ಈ ಅವಘಡದಲ್ಲಿ ಮೆಕ್ಯಾನಿಕ್ ಆಗಿರುವ ಮೋಹನ್ ಹೀರಾ (38) ಈತನಿಗೂ ಸಹ ವಿದ್ಯುತ್ ಶಾಕ್ ತಗುಲಿದ್ದು, ಸುಟ್ಟ ಗಾಯಗಳಾಗಿವೆ.

ಕೊಳವೆ ಬಾವಿಯ ಮೋಟಾರ್ ರಿಪೇರಿಗಾಗಿ ಮೋಟಾರ್‌ಗೆ ಅಳವಡಿಸಿದ್ದ ಪೈಪ್ ಮೇಲೆ ಎತ್ತಿ ಅದನ್ನು ಬಿಚ್ಚುತ್ತಿರುವಾಗ ಆಕಸ್ಮಿಕವಾಗಿ ಬೈಪ್‌ನ ಬ್ಯಾಲೆನ್ಸ್ ತಪ್ಪಿ ವಿದ್ಯುತ್ ವೈಯರ್‌ಗೆ ತಗುಲಿದೆ.

ಪೈಪ್‌ನ ಮೂಲಕ ವಿದ್ಯುತ್ ಪಾಸ್ ಆಗಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಘಾಳೆಪ್ಪ, ಆಕಾಶ್ ಅವರಿಗೆ ಶಾಕ್ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ