ಆ್ಯಪ್ನಗರ

ಸಾಲಬಾಧೆ ರೈತ ಆತ್ಮಹತ್ಯೆ

ತಾಲೂಕಿನ ಡೊಣಗಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಪ್ರಭುಶೆಟ್ಟಿ ಬಿರಾದಾರ (60) ಸಾಲಬಾಧೆ ತಾಳಲಾರದೆ ಗುರುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಕ ಸುದ್ದಿಲೋಕ 4 Mar 2017, 4:52 pm

ಭಾಲ್ಕಿ: ತಾಲೂಕಿನ ಡೊಣಗಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಪ್ರಭುಶೆಟ್ಟಿ ಬಿರಾದಾರ (60) ಸಾಲಬಾಧೆ ತಾಳಲಾರದೆ ಗುರುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka Web slabdhe raita tmahatye
ಸಾಲಬಾಧೆ ರೈತ ಆತ್ಮಹತ್ಯೆ


ಇವರಿಗೆ 5 ಎಕರೆ ಜಮೀನಿದ್ದು, ಬೆಳೆ ಬೆಳೆಯುವ ಸಲುವಾಗಿ ಪಿಕೆಪಿಎಸ್‌ ಡೊಣಗಾಪುರ ಬ್ಯಾಂಕ್‌ನಲ್ಲಿ 81,000 ರೂ. ಮತ್ತು ಕೆಜಿಬಿ ಆಳಂದಿ ಬ್ಯಾಂಕ್‌ನಲ್ಲಿ 50,000 ರೂ. ಸಾಲ ಮಾಡಿದ್ದರು. ಬೆಳೆದ ಬೆಳೆ ಬಾರದೆ ಸಾಲ ತೀರಿಸುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ಶ್ರೀದೇವಿ ಮಲ್ಲಿಕಾರ್ಜುನ ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತಹಸೀಲ್ದಾರ್‌ ರಮೇಶ ಪೆದ್ದೆ, ಸಿಪಿಐ ಎಂಎಸ್‌ ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ