ಭಾಲ್ಕಿ: ತಾಲೂಕಿನ ಡೊಣಗಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಪ್ರಭುಶೆಟ್ಟಿ ಬಿರಾದಾರ (60) ಸಾಲಬಾಧೆ ತಾಳಲಾರದೆ ಗುರುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಗೆ 5 ಎಕರೆ ಜಮೀನಿದ್ದು, ಬೆಳೆ ಬೆಳೆಯುವ ಸಲುವಾಗಿ ಪಿಕೆಪಿಎಸ್ ಡೊಣಗಾಪುರ ಬ್ಯಾಂಕ್ನಲ್ಲಿ 81,000 ರೂ. ಮತ್ತು ಕೆಜಿಬಿ ಆಳಂದಿ ಬ್ಯಾಂಕ್ನಲ್ಲಿ 50,000 ರೂ. ಸಾಲ ಮಾಡಿದ್ದರು. ಬೆಳೆದ ಬೆಳೆ ಬಾರದೆ ಸಾಲ ತೀರಿಸುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ಶ್ರೀದೇವಿ ಮಲ್ಲಿಕಾರ್ಜುನ ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತಹಸೀಲ್ದಾರ್ ರಮೇಶ ಪೆದ್ದೆ, ಸಿಪಿಐ ಎಂಎಸ್ ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.