ಆ್ಯಪ್ನಗರ

ಬೀದರ್‌ನಲ್ಲಿ ನಾಯಿ ವಿಷಯಕ್ಕೆ ಜಗಳ..! ಮಗನಿಂದಲೇ ತಂದೆಯ ಕೊಲೆ; ಪ್ರಕರಣ ಮುಚ್ಚಿ ಹಾಕಲು ಯತ್ನ

ಎಂಥೆಂತ ವಿಷಯಗಳಿಗೆ ಕೊಲೆಗಳಾಗುತ್ತಿವೆ ನೋಡಿ. ದಿಲ್ಲಿಯಲ್ಲಿ ರೂಮ್‌ ಬಾಡಿಗೆ ಕೇಳಿದ್ದಕ್ಕೆ ಇಬ್ಬರು ರೂಮ್‌ಮೇಟ್‌ಗಳನ್ನು ಕೊಲೆ ಮಾಡಿರುವ ಸುದ್ದಿ ಓದಿದ್ದೀರಿ. ಈಗ ಕೇವಲ‌ ನಾಯಿ ವಿಷಯಕ್ಕೆ ಆರಂಭವಾದ ಜಗಳದಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಬೀದರ್‌ನಲ್ಲಿ ನಡೆದಿದೆ.

Vijaya Karnataka Web 1 Sep 2020, 11:58 pm
ಬೀದರ್‌ (ಬಸವಕಲ್ಯಾಣ): ನಾಯಿ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರಮೇಶ ಕಾಂಬಳೆ (55) ಕೊಲೆಯಾದ ವ್ಯಕ್ತಿ. ಪುತ್ರ ಮಹಾದೇವ ಕಾಂಬಳೆ (26) ಕೊಲೆ ಮಾಡಿದ ಆರೋಪಿ.
Vijaya Karnataka Web son kills father for dog in bidar
ಬೀದರ್‌ನಲ್ಲಿ ನಾಯಿ ವಿಷಯಕ್ಕೆ ಜಗಳ..! ಮಗನಿಂದಲೇ ತಂದೆಯ ಕೊಲೆ; ಪ್ರಕರಣ ಮುಚ್ಚಿ ಹಾಕಲು ಯತ್ನ


ಶನಿವಾರ ರಾತ್ರಿ 11ರ ಸುಮಾರಿಗೆ ಸಾಕು ನಾಯಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನ ಮಧ್ಯೆ ವಾದ, ವಿವಾದ ಆರಂಭವಾಗಿದೆ. ಇದರಿಂದ ಕೊಪಗೊಂಡ ಮಗ ಮಹಾದೇವ, ಕೈಯಲಿದ್ದ ಸುತ್ತಿಗೆಯಿಂದ ಮೊದಲು ನಾಯಿ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಅದೆ ಕೋಪದಲ್ಲಿ ಅಲ್ಲೇ ಇದ್ದ ತಂದೆ ರಮೇಶನ ತಲೆಗೂ ಅದೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ರಮೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಂತರ ಪೊಲೀಸ್‌ರಿಗೆ ಮಾಹಿತಿ ನೀಡದೆ ಕುಟುಂಬದ ಇಬ್ಬರು ಹಾಗೂ ಇತರರ ಸಹಾಯದಿಂದ ರಾತ್ರಿಯೇ ಶವ ಸುಟ್ಟು ಹಾಕುವ ಮೂಲಕ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ.

ಬೀದರ್‌ ಆಸ್ಪತ್ರೆಯಲ್ಲಿ ಎರಡು ದಿನದ ಹಸುಳೆಯ ಮುಖ, ಬೆರಳು ಕಡಿದ ಇಲಿ!

ಸುದ್ದಿ ತಿಳಿದ ಸಿಪಿಐ ಮಹೇಶಗೌಡ ಪಾಟೀಲ್‌, ಪಿಎಸ್‌ಐ ವಸೀಂ ಪಟೇಲ್‌, ನಿಂಗಪ್ಪ ಮಣ್ಣೂರು ನೇತೃತ್ವದ ಪೊಲೀಸರ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ಕೊಲೆ ಮಾಡಿದ ಆರೋಪಿ ಮಹಾದೇವ ಹಾಗೂ ಆತನ ತಾಯಿ ಮತ್ತು ಸಹೋದರ ಸೇರಿ ಇತರರ ವಿರುದ್ಧ ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಿಪ್ಪು ಆದರ್ಶ ಪುರುಷನಲ್ಲ, ವಿಶ್ವನಾಥ ಹೇಳಿಕೆ ವೈಯಕ್ತಿಕ, ಅದನ್ನು ಬಿಜೆಪಿ ಒಪ್ಪಲ್ಲ - ಆರ್‌ ಅಶೋಕ್‌

ಆರೋಪಿ ಮಹಾದೇವ ಮತ್ತು ಆತನ ಸಹೋದರನನ್ನು ಬಂಧಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌, ನಾಗೇಶ್‌, ಡಿವೈಎಸ್ಪಿ ಬಸವರಾಜ ಹೀರಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ