ಆ್ಯಪ್ನಗರ

ಉಜಳಂಬ ಜನರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತಾ ಸಿಎಂ ಭೇಟಿ

ಇದೇ ತಿಂಗಳ 28 ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಾಲೂಕಿನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದು,ಇದಕ್ಕಾಗಿ ಕಳೆದ ಒಂದು ವಾರದಿಂದ ಗ್ರಾಮದಕ್ಕೆ ಅಧಿಕಾರಿಗಳ ದಂಡೇ ಹರಿದು ಬರುತ್ತಿದೆ.ನಿತ್ಯ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವ ಕಾರ್ಯ ನಡೆಯುತ್ತಲೇ ಇದೆ.ರಾಜ್ಯ ದೊರೆ ಆಗಮನದಿಂದ ತಮ್ಮ ಗ್ರಾಮದ ಜನತೆಗೆ ಉಜ್ವಲ ಭವಿಷ್ಯ ರೂಪುಗೊಂಡರೆ ಸಾಕು ಎನ್ನುತ್ತಾರೆ ಗ್ರಾಮಸ್ಥರು.

Vijaya Karnataka 13 Jun 2019, 3:57 pm
ಗಣಪತಿ ಬಿ. ಹರಕೂಡೆ, ಬಸವಕಲ್ಯಾಣ :ಇದೇ ತಿಂಗಳ 28 ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಾಲೂಕಿನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದು,ಇದಕ್ಕಾಗಿ ಕಳೆದ ಒಂದು ವಾರದಿಂದ ಗ್ರಾಮದಕ್ಕೆ ಅಧಿಕಾರಿಗಳ ದಂಡೇ ಹರಿದು ಬರುತ್ತಿದೆ.ನಿತ್ಯ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವ ಕಾರ್ಯ ನಡೆಯುತ್ತಲೇ ಇದೆ.ರಾಜ್ಯ ದೊರೆ ಆಗಮನದಿಂದ ತಮ್ಮ ಗ್ರಾಮದ ಜನತೆಗೆ ಉಜ್ವಲ ಭವಿಷ್ಯ ರೂಪುಗೊಂಡರೆ ಸಾಕು ಎನ್ನುತ್ತಾರೆ ಗ್ರಾಮಸ್ಥರು.
Vijaya Karnataka Web the cm will visit the bright future of the people
ಉಜಳಂಬ ಜನರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತಾ ಸಿಎಂ ಭೇಟಿ


* ಉಜಳಂಬ ಗ್ರಾಮದ ನೋಟ: ಮಹಾರಾಷ್ಟ್ರದ ಗಡಿ ಭಾಗಕ್ಕೆ ಅಂಟಿಕೊಂಡಿರುವ ಉಜಳಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಡಿ ಅಂದಾಕು 22,000 ಜನಸಂಖ್ಯೆ ಹೊಂದಿದೆ. ಈ ಪೈಕಿ ಉಜಳಂಬ ಗ್ರಾಮದ ಜನಸಂಖ್ಯೆ 8,000 ಇದೆ. ಈ ಗ್ರಾಮ ಪಂಚಾಯಿತಿಯಡಿ 7 ಗ್ರಾಮಗಳಿವೆ.21 ಗ್ರಾಮಗಳಿಗೆ ಉಜಳಂಬ ಕೇಂದ್ರ ಸ್ಥಾನವೂ ಹೌದು.

* ಗ್ರಾಮಸ್ಥರ ಬೇಡಿಕೆಯಾದರೂ ಏನು?: ಗ್ರಾಮಕ್ಕೆ ನಾಡದೊರೆ ಆಗಮನ ನೀರಿಕ್ಷೆಯಲ್ಲಿರುವ ಉಜಳಂಬ ಗ್ರಾಮಸ್ಥರು ಹತ್ತಾರು ಬೇಡಿಕೆ ಈಡೇರಿಸುವ ಸಂಬಂಧ ದೊಡ್ಡ ಪಟ್ಟಿಯನ್ನೆ ರೆಡಿ ಮಾಡಿಕೊಂಡಿದ್ದಾರೆ. 21 ಗ್ರಾಮಗಳ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಉಜಳಂಬನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಉಜಳಂಬದಿಂದ 12 ಕಿ.ಮೀ. ದೂರವಿರುವ ಮಂಠಾಳ ವಿದ್ಯುತ್‌ ಸ್ಟೇಷನ್‌ನಿಂದ ಉಜಳಂಬ ಗ್ರಾಮಕ್ಕೆ ವಿದ್ಯುತ್‌ ಪೂರೈಸಲಾಗುತ್ತಿದೆ. ಈ 12 ಕಿ.ಮೀ. ವಿದ್ಯುತ್‌ ಕಂಬಗಳಿಗೆ ಅಳವಡಿಸಿರುವ ವಿದ್ಯುತ್‌ ತಂತಿ ವ್ಯವಸ್ಥೆ (ವೈರಿಂಗ್‌) ಹಳೆಯದಾಗಿದ್ದು, ಇದರಿಂದ ಸರಿಯಾಗಿ ಕರೆಂಟ್‌ ಪೂರೈಕೆ ಆಗುತ್ತಿಲ್ಲ.ಹೀಗಾಗಿ ರೈತರ ಹೊಲದಲ್ಲಿರುವ ಮೋಟಾರ್‌ಗಳು ಸುಡುತ್ತಿವೆ. ಈ ಸಮಸ್ಯೆ ಅರಿತ ಜಿಲ್ಲಾಡಳಿತ ಉಜಳಂಬ ಗ್ರಾಮಕ್ಕೆ ಪ್ರತ್ಯೇಕ ಕೆಇಬಿ (ವಿದ್ಯುತ್‌ ಸ್ಟೇಷನ್‌) ಮಂಜೂರಿ ಮಾಡಿದೆ.

ಇದಕ್ಕಾಗಿ ಗ್ರಾಮಸ್ಥರು ಸ್ಥಳ ಒದಗಿಸಿದ್ದಾರೆ.ಕೂಡಲೇ ಈ ಕಾಮಗಾರಿಗೆ ಚಾಲನೆ ನೀಡಬೇಕು. ಕೋಹಿನೂರ ಜಿಪಂ ವ್ಯಾಪ್ತಿಯ ಕೋಹಿನೂರ್‌ನಲ್ಲಿ ಮಾತ್ರ ರೈತ ಸಂಪರ್ಕ ಕೇಂದ್ರ (ಆರ್‌ಎಸ್‌ಕೆ)ವಿದೆ. ಉಜಳಂಬ,ಲಾಡವಂತಿ ಮತ್ತು ಬಡಗೇರಾ ಗ್ರಾಪಂ ವ್ಯಾಪ್ತಿ ರೈತರಿಗೆ ಬಿತ್ತನೆ ಹಾಗೂ ಇನ್ನಿತರ ಸಮಯದಲ್ಲಿ ಅನುಕೂಲವಾಗುವಂತೆ ಗ್ರಾಮದಲ್ಲಿ ಆರ್‌ಎಸ್‌ಕೆ ಸ್ಥಾಪಿಸಬೇಕು. ಉಜಳಂಬದಿಂದ ಸಾರಿಗೆ ಸಂಸ್ಥೆಯ ಬಸ್‌ ಹೊರಡುವ ಸಮಯ ಬೆಳಿಗ್ಗೆ 7 ಗಂಟೆ, 7.30 ಮತ್ತು 10. 30 ಮತ್ತು ಅಲ್ಲಿಂದ ಉಜಳಂಬಕ್ಕೆ ಬರಲು ಮಧ್ಯಾಹ್ನ 3 ಗಂಟೆ, ರಾತ್ರಿ 7 ಮತ್ತು 7.30 ಗಂಟೆಗೆ ಬಸ್‌ ಇದೆ. ಬಸವಕಲ್ಯಾಣಕ್ಕೆ ಹೋಗಲು ಮಧ್ಯಾಹ್ನ ಹಾಗೂ ರಾತ್ರಿ ಅದೇ ರೀತಿ ಬಸವಕಲ್ಯಾಣದಿಂದ ಉಜಳಂಬಕ್ಕೆ ಬರಲು ಬೆಳಗ್ಗೆ ವೇಳೆ ಬಸ್‌ ವ್ಯವಸ್ಥೆ ಮಾಡಬೇಕು.

ಗ್ರಾಮದಲ್ಲಿರುವ ಹಳೆ ಕೆರೆಗಳ ಪುನಶ್ಚೇತನ ಮತ್ತು ಹೊಸ ಕೆರೆಗಳ ನಿರ್ಮಾಣಕ್ಕೆ ಮುಂದಾಗಬೇಕು.ಗ್ರಾಮದಲ್ಲಿ ಬ್ಯಾಂಕ್‌ ವಹಿವಾಟಿಗಾಗಿ ಸದ್ಯ ಗ್ರಾಮದಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಇದೆ. ಎಸ್‌ಬಿಐ ಮತ್ತು ಸಹಕಾರ ಬ್ಯಾಂಕ್‌ (ಸೊಸೈಟಿ ಬ್ಯಾಂಕ್‌)ಗಳು ಸ್ಥಾಪನೆಗೆ ಸರಕಾರ ಕ್ರಮಕೈಗೊಳ್ಳಬೇಕು. ಗ್ರಾಮವು ಮಹಾರಾಷ್ಟ್ರ ಗಡಿ ಭಾಗದಲ್ಲಿರುವುದರಿಂದ ಅಪರಾಧ ಕೃತ್ಯಗಳು ನಡೆಯದಂತೆ ಪೊಲೀಸ್‌ ಠಾಣೆ ಮಂಜೂರು ಮಾಡಬೇಕು. ಆರು ಹಾಸಿಗೆಗಳ ಸಾಮರ್ಥ್ಯ‌ವಿರುವ ಉಜಳಂಬ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು.ಅಲ್ಲದೇ ಖಾಲಿ ಇರುವ ಸಿಬ್ಬಂದಿಗಳನ್ನು ಶೀಘ್ರವೇ ನೇಮಕ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನೇ ಸಿಎಂ ಮುಂದಿಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ