ಆ್ಯಪ್ನಗರ

ಶಿಥಿಲ ಶಾಲಾ ಕಟ್ಟಡ ಜೆಸಿಬಿಯಿಂದ ನೆಲಸಮ

ಶಿಥಿಲಾವಸ್ಥೆಯಲ್ಲಿರುವ ತಾಲೂಕಿನ ಉಜಳಂಬ ಗ್ರಾಮದ ನಮ್ಮೂರ ಕ್ಲಸ್ಟರ್‌ ಮಾದರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಶನಿವಾರ ನೆಲಸಮಗೊಳಿಸಲಾಯಿತು.

Vijaya Karnataka 13 Jun 2019, 3:48 pm
ಬಸವಕಲ್ಯಾಣ:ಶಿಥಿಲಾವಸ್ಥೆಯಲ್ಲಿರುವ ತಾಲೂಕಿನ ಉಜಳಂಬ ಗ್ರಾಮದ ನಮ್ಮೂರ ಕ್ಲಸ್ಟರ್‌ ಮಾದರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಶನಿವಾರ ನೆಲಸಮಗೊಳಿಸಲಾಯಿತು.
Vijaya Karnataka Web the dilapidated school building was demolished by jcb
ಶಿಥಿಲ ಶಾಲಾ ಕಟ್ಟಡ ಜೆಸಿಬಿಯಿಂದ ನೆಲಸಮ


ಸಿಎಂ ಗ್ರಾಮವಾಸ್ತವ್ಯಕ್ಕೆ ಇಲ್ಲಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಪಂ ಸಿಇಒ ಮಹಾಂತೇಶ್‌ ಬೀಳಗಿ ಅವರು ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳಿಗೆ ಆದೇಶಿಸಿದ ಬೆನ್ನಲೆ ಶನಿವಾರ ಗ್ರಾಮದಲ್ಲಿ ಜೆಸಿಬಿ ಯಂತ್ರ ಸದ್ದು ಮಾಡಿದೆ. ಕಟ್ಟಡ ಬೀಳಿಸುವ ಕಾರ್ಯ ಬೆಳಗ್ಗೆ ಆರಂಭಗೊಂಡು ಸಂಜೆ ಹೊತ್ತಿಗೆ ನೆಲಸಮಗೊಳಿಸಲಾಗಿದೆ.

ಮಂಠಾಳ ಗ್ರಾಪಂ ಪಿಡಿಒ ಗುರುಶಾಂತ್‌ ಬಿರಾದಾರ, ಗ್ರಾಪಂ ಅಧ್ಯಕ್ಷೆ ಶೋಭಾ ಗಾವ್ಡೆ, ಗ್ರಾಪಂ ಸದಸ್ಯ ಮಹೇಶ್‌ ಪಾಟೀಲ್‌, ಪ್ರಾಥಮಿಕ ಶಾಲೆ ಮುಖ್ಯಗುರು ಸತೀಷ್‌ ಕಾರಬಾರಿ, ಪ್ರೌಢಶಾಲೆ ಮುಖ್ಯಗುರು ಮಂಜುನಾಥ್‌ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ