ಆ್ಯಪ್ನಗರ

ಬಡಿಗೆಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ವ್ಯಕ್ತಿಯೊಬ್ಬನಿಗೆ 12 ಜನರ ತಂಡ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

Vijaya Karnataka 13 Sep 2017, 5:46 pm

ಬೀದರ್‌: ವ್ಯಕ್ತಿಯೊಬ್ಬನಿಗೆ 12 ಜನರ ತಂಡ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

Vijaya Karnataka Web the murder of a man by the bites
ಬಡಿಗೆಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ


ಮೂಲತಃ ಬಗ್ದಲ್‌ ಗ್ರಾಮದ ಫುರ್‌ಖಾನ್‌ ಶಾ (42) ಮೃತ. ಮೃತನು ಭಾನಾಮತಿ ಮಾಡುತ್ತಾನೆ ಎಂಬ ಹಿನ್ನೆಲೆಯಲ್ಲಿ ಜನರೇ ಬಡಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬೀದರ್‌ನ ಮೈಲೂರಿನ ಸಂಬಂಧಿಕರ ಮನೆಗೆ ಆಗಮಿಸಿದ್ದ ಫುರ್‌ ಖಾನ್‌ ಶಾನನ್ನು ಜನರು ಫೋನ್‌ ಮಾಡಿ ಕರೆಸಿಕೊಂಡು ಹೊಡದಿದ್ದಾರೆ. ಬಳಿಕ ಆಟೊವೊಂದರಲ್ಲಿ ಈತನನ್ನು ಅಪಹರಿಸಿಕೊಂಡು ಹೋಗಿದ್ದಾರೆ.

ನಗರದ ಲಾಲ್‌ವಾಡಿಯಲ್ಲಿರುವ ಸಂಬಂಧಿಕರ ಮನೆಯೊಂದರಲ್ಲಿ ಮತ್ತೆ ಫುರ್‌ ಖಾನ್‌ಗೆ ಹೊಡೆದಿದ್ದಾರೆ. ಮೃತಪಟ್ಟ ನಂತರ ಆರೋಪಿಗಳು ಆಟೊವೊಂದರಲ್ಲಿ ಹಾಕಿಕೊಂಡು ಜಮೀನೊಂದರಲ್ಲಿ ಬಿಸಾಕಿ ಹೋಗಿದ್ದಾರೆ. ಆರೋಪಿಗಳಾದ ಖದೀರ್‌ ಖುರ್ಷಿದ್‌ಮಿಯಾ, ಶಕೀಲ್‌ ಖುರ್ಷಿದ್‌ಮಿಯಾ, ಯಾದುಲ್ಲಾ, ಪಾಶಾ ಖುರ್ಷಿದ್‌ಮಿಯಾ, ಅಹ್ಮೆದ್‌ಶಾ ಇಮಾಮ್‌ಶಾ, ಫಿರೋಜ್‌ ಇಮಾಮ್‌ಶಾ, ಅಫಾನ್‌ ಮುಸ್ತಾಕ್‌, ಮುಸ್ತಾಕ್‌ ಗಫೂರ್‌ಶಾ, ಸೈಯ್ಯದ್‌ ಗೋರೆ ಸೈಯ್ಯದ್‌ ಜಾಫರ್‌, ರಿಯಾನಾ ಬೇಗಂ, ಶಮೀಲಾ ಬೀ, ಶಾಹಾನಾ ಬೇಗಂ ಮುಸ್ತಾಕ್‌ ಅಕ್ರಮ ಕೂಟ ರಚಿಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೊಹಮ್ಮದ್‌ ಇರ್ಫಾನ್‌ ಅಲಿಶಾ ನೀಡಿರುವ ದೂರಿನ ಮೇರೆಗೆ ಗಾಂಧಿಗಂಜ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ