ಆ್ಯಪ್ನಗರ

ಹುಮನಾಬಾದ್‌ ಜಾತ್ರೆಗೆ ಹರಿದು ಬಂದ ಜನಸಾಗರ

ಹುಮನಾಬಾದ್‌ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಶನಿವಾರ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬಂದಿತ್ತು. ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಜನಸಾಗರ ಕಂಡು ಬಂದಿತು.

Vijaya Karnataka 27 Jan 2019, 5:00 am
ಹುಮನಾಬಾದ್‌ :ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಶನಿವಾರ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬಂದಿತ್ತು. ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಜನಸಾಗರ ಕಂಡು ಬಂದಿತು.
Vijaya Karnataka Web the people who fled to the humanabad festival
ಹುಮನಾಬಾದ್‌ ಜಾತ್ರೆಗೆ ಹರಿದು ಬಂದ ಜನಸಾಗರ


ಪಟ್ಟಣದ ಥೇರ್‌ ಮೈದಾನದಿಂದ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಭಕ್ತರು ಸಾಲಿನಲ್ಲಿ ನಿಂತು ದೇವರ ದರುಶನ ಪಡೆದರು.

ದೇವಸ್ಥಾನದದ ಮುಂಭಾಗದಲ್ಲಿ ದೇವರ ದರ್ಶನಕ್ಕೆ ಮತ್ತು ಥೇರ ಮೈದಾನದಲ್ಲಿರುವ ಅಗ್ನಿ ಕುಂಡದ ಜಾಗದಲ್ಲಿ ಕೂಡ ದೊಡ್ಡ ಸಾಲು ಕಂಡು ಬಂದಿತು. ಕಾಯಿ ಕರ್ಪೂರ, ಹೂ,ಹರ್ಣಣು ಅರ್ಪಿಸಿದರು.

ಈ ಬಾರಿ ನೂತನವಾಗಿ ದೊಡ್ಡ ಅಗ್ನಿ ಕುಂಡ ನಿರ್ಮಿಸಲಾಗಿದ್ದು, ಜನರು ಪ್ರದಕ್ಷಿಣೆ ಹಾಕಿ ಒಳಗೆ ಚೆಕ್ಕಿ ಎಸೆದು, ಅಗ್ನಿ ತುಳಿದರು. ಭಕ್ತರು ಮುಗಿಬಿದ್ದು ದರುಶನ ಪಡೆದರು.

ಅಂಬೇಡ್ಕರ ಚೌಕದಿಂದ ದೂರದ ಈದಗಾ ದವರೆಗೆ ಅಗ್ನಿಕುಂಡಕ್ಕೆ ಹೋಗಲು ಜನರು ಸಾಲಿನಲ್ಲಿ ನಿಂತಿದ್ದರು.

ಒಂದು ಬಾರಿ ಜಾತ್ರೆಗೆ ಬಂದು ಅಗ್ನಿ ತುಳಿದವರು ಮೂರು ವರ್ಷ ಜಾತ್ರೆಗೆ ಅಗ್ನಿ ತುಳಿಯಲು ಬರುವುದು ಇಲ್ಲಿ ಸಾಮಾನ್ಯ. ಹೀಗಾಗಿ ಅನೇಕರು ಹರಕೆ ಸಲ್ಲಿಸಿದರು.

ಪಟ್ಟಣದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ಮಳೆ ಸುರಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ