ಆ್ಯಪ್ನಗರ

ಪಿಸ್ತೂಲು ವಾಪಸ್‌ ನೀಡದ ಪಿಎಸ್‌ಐ ಸಸ್ಪೆಂಡ್‌

ಪೊಲೀಸ್‌ ಠಾಣೆಯಲ್ಲಿಟ್ಟಿದ್ದ ಪಿಸ್ತೂಲು ಕಳವು ಆಗಿದ್ದು, ಅದನ್ನು ಜೋಪಾನವಾಗಿಡುವಲ್ಲಿ ನಿರ್ಲಕ್ಷ್ಯ ತೋರಿದ ಬೀದರ್‌ನ ನ್ಯೂ ಟೌನ್‌ ಪೊಲೀಸ್‌ ಠಾಣೆಯ ಹಿಂದಿನ ಪಿಎಸ್‌ಐ (ಸದ್ಯದ ಜನವಾಡಾ ಠಾಣೆಯ ಪಿಎಸ್‌ಐ) ಸಂಗಮೇಶ್‌, ಒಬ್ಬ ಎಎಸ್‌ಐ ಮತ್ತು ಇಬ್ಬರು ಪೊಲೀಸ್‌ ಪೇದೆಗಳನ್ನು ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಅಮಾನತು ಗೊಳಿಸಿದ್ದಾರೆ.

Vijaya Karnataka 10 Dec 2018, 5:00 am
ಬೀದರ್‌ :ಪೊಲೀಸ್‌ ಠಾಣೆಯಲ್ಲಿಟ್ಟಿದ್ದ ಪಿಸ್ತೂಲು ಕಳವು ಆಗಿದ್ದು, ಅದನ್ನು ಜೋಪಾನವಾಗಿಡುವಲ್ಲಿ ನಿರ್ಲಕ್ಷ್ಯ ತೋರಿದ ಬೀದರ್‌ನ ನ್ಯೂ ಟೌನ್‌ ಪೊಲೀಸ್‌ ಠಾಣೆಯ ಹಿಂದಿನ ಪಿಎಸ್‌ಐ (ಸದ್ಯದ ಜನವಾಡಾ ಠಾಣೆಯ ಪಿಎಸ್‌ಐ) ಸಂಗಮೇಶ್‌, ಒಬ್ಬ ಎಎಸ್‌ಐ ಮತ್ತು ಇಬ್ಬರು ಪೊಲೀಸ್‌ ಪೇದೆಗಳನ್ನು ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಅಮಾನತು ಗೊಳಿಸಿದ್ದಾರೆ.
Vijaya Karnataka Web the pistol does not return the psi suspend
ಪಿಸ್ತೂಲು ವಾಪಸ್‌ ನೀಡದ ಪಿಎಸ್‌ಐ ಸಸ್ಪೆಂಡ್‌


2018ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗ ಭದ್ರತೆಯ ಹಿತ ದೃಷ್ಟಿಯಿಂದ ಪಿಸ್ತೂಲ್‌ ಪರವಾನಗಿ ಪಡೆದಿರುವ ಬೀದರ್‌ನ ಡಾ. ಚಂದ್ರಕಾಂತ ಗುದಗೆ, ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪಿಸ್ತೂಲು ಜಮೆ ಮಾಡಿದ್ದರು. ಅಂದಿನ ಪಿಎಸ್‌ಐ ಸಂಗಮೇಶ್‌ ಅವರು ಪಿಸ್ತೂಲನ್ನು ಠೇವಣಿ ಮಾಡಿಕೊಂಡಿದ್ದರು. ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಡಾ. ಚಂದ್ರಕಾಂತ ಗುದಗೆ ಅವರು ತಮ್ಮ ಪಿಸ್ತೂಲು ನೀಡುವಂತೆ ಪಿಎಸ್‌ಐ ಸಂಗಮೇಶ್‌ ಅವರಿಗೆ ಕೇಳಿದ್ದಾರೆ. ಆದರೆ, ಪಿಎಸ್‌ಐ ವಾಪಸ್‌ ನೀಡದೇ ದಿನ ದೂಡಿಕೊಂಡು ಬಂದಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ ಎಂದು ಎಸ್ಪಿ ವಿಕಕ್ಕೆ ತಿಳಿಸಿದ್ದಾರೆ.

ಈ ನಡುವೆ ಪಿಎಸ್‌ಐ ಸಂಗಮೇಶ್‌ ಅವರು ನ್ಯೂ ಟೌನ್‌ ಠಾಣೆಯಿಂದ ಜನವಾಡಾ ಠಾಣೆಗೆ ವರ್ಗವಾಗಿದ್ದರು. ವರ್ಗವಾದ ಬಳಿಕ ಡಿಟೈಲ್‌ ಚಾರ್ಜ್‌ ಸಹ ಹೊಸದಾಗಿ ಬಂದ ಪಿಎಸ್‌ಐಗೆ ನೀಡಿರಲಿಲ್ಲ. ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿರುವ ಹಿನ್ನೆಲೆಯಲ್ಲಿ ಹಾಗೂ ಠಾಣೆಯಲ್ಲಿಟ್ಟಿದ್ದ ಪಿಸ್ತೂಲು ಕಳವು ಆಗಿದ್ದರಿಂದ ಪಿಎಸ್‌ಐ ಸಂಗಮೇಶ್‌, ಒಬ್ಬ ಎಎಸ್‌ಐ, ಇಬ್ಬರು ಪೊಲೀಸ್‌ ಪೇದೆಗಳನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶ ಮಾಡಲಾಗಿದೆ. ಅಲ್ಲದೆ, ಪಿಸ್ತೂಲು ಕಳ್ಳತನ ಆಗಿರುವ ಕುರಿತು ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಎಸ್ಪಿ ಶ್ರೀಧರ ಅವರು ತಿಳಿಸಿದರು.


ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಠೇವಣಿ ಮಾಡಿಕೊಂಡಿದ್ದ ವೈದ್ಯರೊಬ್ಬರ ಪಿಸ್ತೂಲನ್ನು ಪಿಎಸ್‌ಐ ಸಂಗಮೇಶ್‌ ವಾಪಸ್‌ ನೀಡಿಲ್ಲ. ವೈದ್ಯರು ಕೇಳಿದರೆ ನಾಳೆ, ನಾಡಿದ್ದು ನೀಡುವೆ ಎಂದು ದಿನ ದೂಡಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೂ ತರದೆ ನಿರ್ಲಕ್ಷ್ಯ ತೋರಿದ್ದರಿಂದ ಪಿಎಸ್‌ಐ, ಒಬ್ಬ ಎಎಸ್‌ಐ, ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಪಿಸ್ತೂಲು ಕಳುವಾದ ಬಗ್ಗೆ ಪ್ರಕರಣ ದಾಖಲಾಗಿದೆ.

- ಟಿ. ಶ್ರೀಧರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೀದರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ