ಆ್ಯಪ್ನಗರ

ಸಿಎಂ- ಶಾಸಕ ಚವ್ಹಾಣ್‌ ನಡುವೆ ಚಕಮಕಿ

ಸಾಲ ಮನ್ನಾ ವಿಷಯದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿಯ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ನಡುವೆ ಶುಕ್ರವಾರ ಸಂಜೆ ಮಾತಿನ ಚಕಮಕಿ ನಡೆದಿದೆ.

Vijaya Karnataka 24 Nov 2018, 5:23 pm
ಬೀದರ್‌ :ಸಾಲ ಮನ್ನಾ ವಿಷಯದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿಯ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ನಡುವೆ ಶುಕ್ರವಾರ ಸಂಜೆ ಮಾತಿನ ಚಕಮಕಿ ನಡೆದಿದೆ.
Vijaya Karnataka Web there is a scandal between cm mla chavan
ಸಿಎಂ- ಶಾಸಕ ಚವ್ಹಾಣ್‌ ನಡುವೆ ಚಕಮಕಿ


ಬೀದರ್‌ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ನಡೆದ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ಸಾಲ ಮನ್ನಾ ಘೋಷಣೆಯಾಗಿದ್ದರೂ ಅರ್ಹ ರೈತರಿಗೆ ಸಿಗುತ್ತಿಲ್ಲ ಎಂದು ಪ್ರಭು ಚವ್ಹಾಣ್‌ ಏರಿದ ದನಿಯಲ್ಲೇ ಹೇಳಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಸಿಎಂ, ''ಸಾಲಮನ್ನಾ ಮಾಡುವದನ್ನು ನಿಮ್ಮಿಂದ ನಾನು ಕಲಿಬೇಕಾಗಿಲ್ಲ,'' ಎಂದು ಸಿಎಂ ಸಹ ಏರು ದನಿಯಲ್ಲೇ ಮಾತನಾಡಿದರು.

''ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಇದೆ. ನೀವು ಅಲ್ಲಿ ಹೇಗೆ ಸಾಲಮನ್ನಾ ಮಾಡಿದ್ದೀರಿ ನನಗೇ ಗೊತ್ತು, ನಿಮ್ಮಿಂದ ನಾನು ಕಲಿಯಬೇಕಿಲ್ಲ,'' ಎಂದು ಸಿಎಂ ಗರಂ ಆದರು.

ಮಧ್ಯಪ್ರವೇಶಿಸಿದ ಸಚಿವರಾದ ಬಂಡೆಪ್ಪ ಖಾಶೆಂಪುರ, ರಾಜಶೇಖರ ಪಾಟೀಲ್‌ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ