ಆ್ಯಪ್ನಗರ

ಈ ಗೆಲುವು ಜವಾಬ್ದಾರಿ ಹೆಚ್ಚಿಸಿದೆ; ಖೂಬಾ

ಬೀದರ್‌ ಲೋಕಸಭಾ ಕ್ಷೇತ್ರದ ಮಹಾಜನತೆ ನನ್ನ ಮತ್ತು ಪಕ್ಷ ದ ಮೇಲೆ ವಿಶ್ವಾಸವಿಟ್ಟು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಸದುದ್ದೇಶದಿಂದ ಪ್ರಚಂಡ ಬಹುಮತದಿಂದ ನನ್ನನ್ನು ಆಯ್ಕೆ ಮಾಡಿದ ಸಮಸ್ತ ಮತದಾರರಿಗೆ ಧನ್ಯವಾದಗಳು.

Vijaya Karnataka 24 May 2019, 5:00 am
ಬೀದರ್‌ :ಬೀದರ್‌ ಲೋಕಸಭಾ ಕ್ಷೇತ್ರದ ಮಹಾಜನತೆ ನನ್ನ ಮತ್ತು ಪಕ್ಷ ದ ಮೇಲೆ ವಿಶ್ವಾಸವಿಟ್ಟು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಸದುದ್ದೇಶದಿಂದ ಪ್ರಚಂಡ ಬಹುಮತದಿಂದ ನನ್ನನ್ನು ಆಯ್ಕೆ ಮಾಡಿದ ಸಮಸ್ತ ಮತದಾರರಿಗೆ ಧನ್ಯವಾದಗಳು. ಪಕ್ಷ ದ ಮುಖಂಡರು, ಪದಾಧಿಕಾರಿಗಳು, ಹಗಲಿರುಳು ಶ್ರಮಿಸಿ ಗೆಲುವು ತಂದಿತ್ತ ತಳಮಟ್ಟದ ಕಾರ್ಯಕರ್ತರಿಗೆ ಹಾಗೂ ದೇಶಾಭಿಮಾನಿಗಳು ಮತ್ತು ನರೇಂದ್ರ ಮೋದಿಜಿಯವರ ಪ್ರೇರಣೆಯಿಂದ ಸ್ವಯಂ ಸೇವಕರಾಗಿ ದುಡಿದ ಯುವ ಕಣ್ಮಣಿಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web this victory has increased the responsibility khuba
ಈ ಗೆಲುವು ಜವಾಬ್ದಾರಿ ಹೆಚ್ಚಿಸಿದೆ; ಖೂಬಾ


''ನೀವು ನೀಡಿದ ಪ್ರಚಂಡ ಬಹುಮತ ನನಗೆ ಕೊಟ್ಟ ಒಂದು ದೊಡ್ಡ ಜವಾಬ್ದಾರಿ. ತಮ್ಮ ಪ್ರೀತಿ, ಅಭಿಮಾನ, ಉತ್ಸಾಹ ಹೀಗೆಯೇ ಮುಂದುವರಿಸಿಕೊಂಡು ಹೋಗಲು ನಾನು ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಸೇವೆಯಲ್ಲಿ ನಿರತನಾಗಿರುತ್ತೇನೆ. ಮೋದಿಯವರ ಚುಂಬಕ ಶಕ್ತಿಯ ನಾಯಕತ್ವ ಮತ್ತು ಬಲಿಷ್ಠ ಭಾರತ ನಿರ್ಮಾಣದ ಅವರ ಸಾಧನೆಗಳು ಮತ್ತು ಕಳೆದ 5 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿಯ ಕಾರ್ಯಗಳು, ನಿಮ್ಮನ್ನು ಮೆಚ್ಚಿಸಿವೆ. ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರಿಗೆ ಅನುಕೂಲವಾಗುವಂತಹ ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಾ, ಬೀದರ್‌ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುವೆ. ಸಮಾಜದ ಪ್ರತಿಯೊಬ್ಬ ನಾಗರಿಕನ ವಿಕಾಸವೇ, ಬೀದರ್‌ ವಿಕಾಸ ಎಂಬ ತತ್ವದಡಿ ವಿಕಾಸ ಕಾರ್ಯ ಮುಂದುವರಿಸುವೆ. ನನ್ನ ಪ್ರತಿ ಕಾರ್ಯದಲ್ಲೂ ನಿಮ್ಮೆಲ್ಲರ ಸಹಕಾರ, ಪ್ರೀತಿ, ವಿಶ್ವಾಸ ಹಿಗೆಯೇ ಇರುತ್ತದೆ ಎಂದು ಭಾವಿಸುತ್ತೇನೆ''ಎಂದು ಭಗವಂತ ಖೂಬಾ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ