ಆ್ಯಪ್ನಗರ

ಕ್ರೈಸ್ತ ಸಮಾಜಕ್ಕೆ ನ್ಯಾಯ ಒದಗಿಸಲು ಮನವಿ

ನಗರದ ಮಿಷನ್‌ ಹಾಸ್ಪಿಟಲ್‌ ಕ್ವಾಟರ್ಸ್‌ ಎದುರು ಮಹಿಳೆಯೊಬ್ಬರು ಅಕ್ರಮವಾಗಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಮೆಥೋಡಿಸ್ಟ್‌ ಚರ್ಚ್‌ ಮೇಲ್ವಿಚಾರಕ ಎಂ.ಪಿ. ಜಯಪಾಲ್‌ ಹಾಗೂ ಕರ್ನಾಟಕ ರಾಜ್ಯ ಕ್ರಿಶ್ಚಿಯನ್‌ ಹಕ್ಕುಗಳ ಸಮಿತಿ ಅಧ್ಯಕ್ಷ ಅನಿಲ್‌ ಎಂ. ಜಾಧವ್‌, ಈ ಕುರಿತು ನಗರಸಭೆ ಕಚೇರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

Vijaya Karnataka 20 Jul 2019, 8:59 pm
ಬೀದರ್‌:ನಗರದ ಮಿಷನ್‌ ಹಾಸ್ಪಿಟಲ್‌ ಕ್ವಾಟರ್ಸ್‌ ಎದುರು ಮಹಿಳೆಯೊಬ್ಬರು ಅಕ್ರಮವಾಗಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಮೆಥೋಡಿಸ್ಟ್‌ ಚರ್ಚ್‌ ಮೇಲ್ವಿಚಾರಕ ಎಂ.ಪಿ. ಜಯಪಾಲ್‌ ಹಾಗೂ ಕರ್ನಾಟಕ ರಾಜ್ಯ ಕ್ರಿಶ್ಚಿಯನ್‌ ಹಕ್ಕುಗಳ ಸಮಿತಿ ಅಧ್ಯಕ್ಷ ಅನಿಲ್‌ ಎಂ. ಜಾಧವ್‌, ಈ ಕುರಿತು ನಗರಸಭೆ ಕಚೇರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
Vijaya Karnataka Web to provide justice to christian society
ಕ್ರೈಸ್ತ ಸಮಾಜಕ್ಕೆ ನ್ಯಾಯ ಒದಗಿಸಲು ಮನವಿ


ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಈ ಕುರಿತ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ನಾವು ನಗರಸಭೆಗೆ ದೂರು ನೀಡಿದ್ದರೂ, ಅಕ್ರಮವಾಗಿ ಮನೆ ಕಟ್ಟಿಕೊಂಡವರು ನಗರಸಭೆ ಕಚೇರಿಗೆ ಇನ್ನೂ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ಕ್ರೈಸ್ತ ಸಮುದಾಯದ ಒಂದು ಪ್ರಾರ್ಥನೆ ಹಾಲ್‌ನ ಬಗ್ಗೆ ನಗರಸಭೆ ಕಚೇರಿಗೆ ಅಕ್ರಮವಾಗಿ ಕಟ್ಟಿದ್ದಾರೆ ಎಂದು ದೂರು ಕೊಟ್ಟಿದ್ದಾರೆ ಎಂದರು.

ಶಾಂತ ಪ್ರಿಯರಾಗಿರುವ ಕ್ರೈಸ್ತ ಸಮಾಜ ಯಾರಿಗೂ ಅಹಿತವನ್ನು ಬಯಸಿರುವುದಿಲ್ಲ. ಮಹಿಳೆಯು ಕಿರುಕುಳ ನೀಡುತ್ತಿದ್ದಾರೆ. ಅದಕ್ಕಾಗಿ ದಯಾಪರರಾರದ ನಗರಸಭೆ ಅಧಿಕಾರಿಗಳು ಇದನ್ನು ಪರಿಗಣಿಸಿ ಕ್ರೈಸ್ತ ಬಾಂಧವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ