ಆ್ಯಪ್ನಗರ

ರಾಯರ ವೃಂದಾವನಕ್ಕೆ ತುಳಸಿ ಅಲಂಕಾರ

ಇಲ್ಲಿನ ಶ್ರೀ ಗುರುರಾಜ ಸೇವಾ ಸಂಘದಿಂದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 348ನೇ ಆರಾಧಾನಾ ಮಹೋತ್ಸವ ನಿಮಿತ್ತ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಉತ್ತರಾರಾಧನೆ ವಿಜೃಂಭಣೆಯಿಂದ ಜರುಗಿತು. ದಿನವಿಡೀ ನಾನಾ ಧಾರ್ಮಿಕ ಕಾರ‍್ಯಕ್ರಮಗಳು ನಡೆದವು.

Vijaya Karnataka 27 Aug 2019, 2:30 pm
ಬೀದರ್‌:ಇಲ್ಲಿನ ಶ್ರೀ ಗುರುರಾಜ ಸೇವಾ ಸಂಘದಿಂದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 348ನೇ ಆರಾಧಾನಾ ಮಹೋತ್ಸವ ನಿಮಿತ್ತ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಉತ್ತರಾರಾಧನೆ ವಿಜೃಂಭಣೆಯಿಂದ ಜರುಗಿತು. ದಿನವಿಡೀ ನಾನಾ ಧಾರ್ಮಿಕ ಕಾರ‍್ಯಕ್ರಮಗಳು ನಡೆದವು.
Vijaya Karnataka Web to raira vrindavan tulasi decoration
ರಾಯರ ವೃಂದಾವನಕ್ಕೆ ತುಳಸಿ ಅಲಂಕಾರ


ಭಾನುವಾರ ನಸುಕಿನ ಜಾವ 5 ಗಂಟೆಯಿಂದಲೇ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ವೃಂದಾವನ ಅಲಂಕಾರ, ತುಳಸಿ ಮತ್ತು ಪುಷ್ಪಾರ್ಚನೆ, ನೈವೇದ್ಯ, ಹಸ್ತೋದಕ ಮಂಗಳಾರತಿ ಬಿಡುವಿಲ್ಲದೇ ನಡೆದವು.

ಮಧ್ಯಾಹ್ನದ ವೇಳೆ ಅಲಂಕಾರ ಆಚಾರ‍್ಯರ ಭೋಜನ, ಸಾರ್ವಜನಿಕ ಮಹಾಪ್ರಸಾದ (ಅನ್ನಸಂತರ್ಪಣೆ) ಜರುಗಿತು. ಸಂಜೆ ರಥೋತ್ಸವ, ಮಂತ್ರ ಪುಷ್ಪ ಅಭಾರ ಮನ್ನಣೆ, ಸ್ವಸ್ತಿ ವಾಚನ, ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಶಾಸ್ತ್ರೀ ಸಂಗೀತ ದರ್ಬಾರ್‌ ಕಾರ‍್ಯಕ್ರಮ ನಡೆಯಿತು.

ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವ ನಿಮಿತ್ತ ಆ. 16 ರಂದು ಪೂರ್ವಾರಾಧನೆ, 17 ರಂದು ಮಧ್ಯಾರಾಧನೆ ಹಾಗೂ 18 ರಂದು ಉತ್ತರಾರಾಧನೆ ಕಾರ‍್ಯಕ್ರಮಗಳು ನಡೆದವು. ರಾಯರ ಮಠಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ವೃಂದಾವನದ ದರುಶನ ಪಡೆದರು. ಮಹಾ ಪ್ರಸಾದ ಸ್ವೀಕರಿಸಿ ಪುನೀತರಾದರು.

ಮೂರು ದಿನಗಳ ಕಾಲ ಮುಖ್ಯ ಅರ್ಚಕರಾದ ಪಂಡೀತ ಮಿಲಿಂದಾಚಾರ‍್ಯರು, ಅರ್ಚಕರಾದ ಬಿಂದು ಆಚಾರ‍್ಯರು, ಹಣಮಂತರಾವ್‌ ಪ್ಯಾಟಿ ಪೂಜಾ ವಿಧಿ, ವಿಧಾನ, ಧಾರ್ಮಿಕ ಕಾರ‍್ಯಕ್ರಮಗಳನ್ನು ನಡೆಸಿಕೊಟ್ಟರು.

ಭಾನುವಾರ ಶಾಸಕ ಬಂಡೆಪ್ಪ ಕಾಶಂಪುರ ಅವರು ರಾಯರ ಮಠಕ್ಕೆ ಭೇಟಿ ನೀಡಿ ವೃಂದಾವನದ ದರುಶನ ಪಡೆದುಕೊಂಡರಲ್ಲದೆ, ಪ್ರಸಾದ ಸ್ವೀಕರಿಸಿದರು. ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರರಾವ್‌ ಪಾಟೀಲ್‌, ಉಪಾಧ್ಯಕ್ಷರಾದ ಪ್ರಭಾಕರ ಕುಲಕರ್ಣಿ ಕಾರಾಮುಂಗಿ, ಕಲ್ಯಾಣರಾವ್‌ ಗೋರ್ಟಾ, ಕಾರ‍್ಯದರ್ಶಿ ರಾಜೇಂದ್ರ ಕುಲಕರ್ಣಿ, ಆಡಳಿತಾಧಿಕಾರಿ ರಾಘವೇಂದ್ರ ಜೋಶಿ, ಖಜಾಂಚಿ ಕಿಶನರಾವ್‌ ಉಜನಿ, ಜಂಟಿ ಕಾರ‍್ಯದರ್ಶಿ ರಾಮರಾವ್‌ ಕುಲಕರ್ಣಿ, ನಿರ್ದೇಶಕರಾದ ಭೀಮಸೇನರಾವ್‌ ಕಾನಿಹಾಳ್‌, ರಮೇಶ್‌ ಪಾಟೀಲ್‌ ಹಜ್ಜರಗಿ, ದಿನಕರರಾವ್‌ ಶೆಂಬೆಳ್ಳಿ, ಡಿ.ವಿ. ಸಿಂಧೋಲ್‌, ರಘುನಾಥರಾವ್‌ ಕುಲಕರ್ಣಿ, ಔರಾದ್‌ನ ಬಾಬುರಾವ್‌ ಮಹಾರಾಜ ಸುವರ್ಣಕಾರ ಹಾಗೂ ನೂರಾರು ಸಂಖ್ಯೆಯ ಸ್ವಯಂ ಸೇವಕರು ಮತ್ತು ರಾಯರ ಭಕ್ತರು ಇದ್ದರು.

ವೃಂದಾವನಕ್ಕೆ ತುಳಸಿ ಅಲಂಕಾರ

ಉತ್ತರಾರಾಧನೆಯ ನಿಮಿತ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ರಾಯರ ವೃಂದಾವನಕ್ಕೆ ಭಾನುವಾರ ತುಳಸಿ ಅಲಂಕಾರ ಮಾಡಲಾಗಿತ್ತು. ಅದರೊಂದಿಗೆ ವಿವಿಧ ಹೂವುಗಳ ಅಲಂಕಾರವು ಗಮನ ಸೆಳೆಯುವಂತಿತ್ತು. ಪೂರ್ವಾರಾಧನೆಯಂದು ಬಗೆ ಬಗೆಯ ಹಣ್ಣುಗಳ ಅಲಂಕಾರ ಮಾಡಲಾಗಿದ್ದರೆ, ಮಧ್ಯರಾಧನೆಯಂದು ಹೂವಿನಿಂದ ಹಾಗೂ ಕೊನೆಯ ದಿನ ವೃಂದಾವನಕ್ಕೆ ತುಳಸಿ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯ ಭಕ್ತರು ವೃಂದಾವನದ ದರುಶನ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ