ಆ್ಯಪ್ನಗರ

ಕಾರು ಪಲ್ಟಿ ಇಬ್ಬರ ಸಾವು,ಇರ್ವರಿಗೆ ಗಾಯ

ತಾಲೂಕಿನ ಮುರ್ಕಿಯಿಂದ ಹಕ್ಯಾಳ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿರುವ ವೇಳೆ ರಾತ್ರಿ ಅತಿ ವೇಗದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

Vijaya Karnataka 5 Jun 2019, 8:38 pm
ಕಮಲನಗರ : ತಾಲೂಕಿನ ಮುರ್ಕಿಯಿಂದ ಹಕ್ಯಾಳ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿರುವ ವೇಳೆ ರಾತ್ರಿ ಅತಿ ವೇಗದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
Vijaya Karnataka Web two car deaths two injured
ಕಾರು ಪಲ್ಟಿ ಇಬ್ಬರ ಸಾವು,ಇರ್ವರಿಗೆ ಗಾಯ


ಈ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು, ಪ್ರಭುಲಿಂಗಯ್ಯ ಶಾಂತಯ್ಯ ಸ್ವಾಮಿ (47) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಶಿವಲಿಂಗಯ್ಯ ಶಾಂತಯ್ಯ ಸ್ವಾಮಿ ಅವರನ್ನು ಮಹಾರಾಷ್ಟ್ರಾದ ಉದಗೀರ್‌ಗೆ ಚಿಕಿತ್ಸೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆದಲ್ಲಿ ಅಸು ನೀಗಿದ್ದಾರೆ. ಗೋಪಾಲ ಭೀಮರಾವ (47) ಮತ್ತು ಚಾಲಕ ಅವಿನಾಶ ಗಂಭೀರ ಗಾಯಗೊಂಡಿದ್ದು, ಬೀದರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಮಲನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ಡಿಎಸ್‌ಪಿ ವಿ.ಎನ್‌.ಪಾಟೀಲ, ಸಿಪಿಐ ದಿಲೀಪ್‌ ಸಾಗರ ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ