ಬೀದರ್: ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಆಯುಧ ಪೂಜೆ, ವಿಜಯದಶಮಿಯನ್ನು ಸಂಭ್ರಮದೊಂದಿಗೆ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. ಆಯಾ ದೇವಿ (ಭವಾನಿ ಮಾತಾ) ಮಂದಿರಗಳಲ್ಲಿ ವಿಶೇಷ ಪೂಜೆ ನಡೆದವು. ಹೊಸ ಬಟ್ಟೆ ತೊಟ್ಟವರು ಸಂಜೆ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು. ಪರಸ್ಪರ ಬೆಳ್ಳಿ, ಬಂಗಾರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಅಲ್ಲಲ್ಲಿ ಸೀಮೋಲ್ಲಂಘನ ಕಾರ್ಯಕ್ರಮ ಸಹ ನಡೆದವು.
ಬೀದರ್ ಕೋಟೆಯ ಒಳಗಡೆ ಇರುವ ಗ್ರಾಮ ಒಳಕೋಟೆ ಗ್ರಾಮದಲ್ಲಿ ಭಜನೆ ದೇವಿ ಮೆರವಣಿಗೆ ನಡೆಯಿತು ಹಾಗೂ ಚಿಟ್ಟಾ ಗ್ರಾಮದಲ್ಲಿ ಮಹಿಳೆಯರು ವಿವಿಧ ಸಂಸ್ಕೃತಿ ಕಾರ್ಯಕ್ರಮ ಏರ್ಪಡಿಸಿ ಹಿರಿಯರು, ಮಹಿಳೆಯರು, ಮಕ್ಕಳು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ಇತ್ತು. ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಊರ ಹೊರವಲಯಕ್ಕೆ ತೆರಳಿ ಬನ್ನಿ ಮುರಿಯುವ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವೇಳೆ ಆಯುಧ ಪೂಜೆಯೂ ನಡೆಯಿತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು, ಮಿತ್ರರಿಗೆ ಆಹ್ವಾನಿಸಿ ಊಟದ ಸವಿ ಸವಿಯಲಾಯಿತು.
ರಾವಣ ಪ್ರತಿರೂಪ ದಹನ
ವಿಜಯದಶಮಿ ಅಂಗವಾಗಿ ಶ್ರೀ ರಾಮಲೀಲಾ ಉತ್ಸವ ಸಮಿತಿಯಿಂದ ಶುಕ್ರವಾರ ಬೀದರ್ನ ನೆಹರು ಕ್ರೀಡಾಂಗಣ ಹತ್ತಿರದ ಸಾಯಿ ಆದರ್ಶ ಪ್ರೌಢ ಶಾಲೆ ಆವರಣದಲ್ಲಿ ಪ್ರತಿವರ್ಷ 40 ಅಡಿ ಎತ್ತರದ ರಾವಣನ ಪ್ರತಿರೂಪ ದಹನ ಮಾಡಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುತಿತ್ತು. ದಹನ ಕಾರ್ಯಕ್ರಮ ನೋಡಲು ಜನರು ಸೇರುತ್ತಿದ್ದರು. ಆದರೆ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದೆ.
ಶುಕ್ರವಾರ 7 ಗಂಟೆಗೆ ಸಂಜೆ ಅಸತ್ಯದ ಮೇಲೆ ಸತ್ಯದ ಜಯ ಹಾಗೂ ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ 20 ಅಡಿ ಎತ್ತರದ ರಾವಣನ ಪ್ರತಿರೂಪದ ದಹನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದುಷ್ಟರ ಸಂಹಾರದ ಪ್ರತೀಕವಾಗಿ ವಿಜಯದಶಮಿ ಆಚರಣೆ ಮಾಡಲಾಗುತ್ತಿದೆ. ಪ್ರಸ್ತುತ ರಾವಣ, ದುಯೋರ್ಧನನಂಥ ದುಷ್ಟರು ದೇಶದಲ್ಲಿದ್ದಾರೆ. ಇಂಥವರ ಸಂಹಾರ ಮಾಡುವ ಸಂಕಲ್ಪ ಎಲ್ಲರೂ ಮಾಡಬೇಕು ಎಂದು ಪ್ರತಿಯೊಬ್ಬರೂ ಸಂಕಲ್ಪ ಮಾಡುತ್ತಾರೆ.
ವಿಜಯದಶಮಿ: ಮಂದಿರಗಳಿಗೆ ಭಕ್ತರ ದಂಡು
ಜಗನ್ಮಾತೆ, ದೇವಿ ಅಂಬಾ ಭವಾನಿಯ ಒಂಭತ್ತು ದಿನಗಳ ನವರಾತ್ರಿಯ ವಿಶೇಷ ಪೂಜೆ, ಆರಾಧನೆಯ ಬಳಿಕ ಶುಕ್ರವಾರ ಬೀದರ್ ನಗರ ಸೇರಿ ಜಿಲ್ಲೆಯಾದ್ಯಂತ ಸಂಭ್ರಮದ ವಿಜಯದಶಮಿ ಆಚರಣೆ ಜರುಗಿತು. ಈ ನಿಮಿತ್ತ ಜಿಲ್ಲೆಯಾದ್ಯಂತ ಎಲ್ಲೆಡೆ ಬನ್ನಿ ಹರಿದು, ಬಂಗಾರ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಪರಸ್ಪರ 'ಬಂಗಾರ' ಕೊಟ್ಟು-ಕೊಂಡು ಎಲ್ಲರ ಬದುಕು 'ಬಂಗಾರದಂತಿರಲಿ' ಎಂದು ಆಶಿಸಿಲಾಯಿತು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿಸಂಜೆ ವೇಳೆ ಗ್ರಾಮಸ್ಥರೆಲ್ಲ ಹೊಸ ಬಟ್ಟೆ ತೊಟ್ಟು ಬನ್ನಿ /ಬಂಗಾರದ (ಆರಿ ಗಿಡ) ಮರಕ್ಕೆ ತೆರಳಿ ಪೂಜೆ ಸಲ್ಲಿಸಿ, ಬನ್ನಿ ಹರಿದರು. ಬಳಿಕ ಮಕ್ಕಳು, ಹಿರಿಯರು, ಯುವಕ, ಯುವತಿಯರು ಹೀಗೆ ಎಲ್ಲರೂ ಆಯಾ ಗ್ರಾಮದ ದೇವರ ಮಂದಿರಗಳಿಗೆ ತೆರಳಿ ಬಂಗಾರ ಇಟ್ಟು ವಂದಿಸಿದರು. ನಂತರ ಊರ ಎಲ್ಲ ದೇವರಿಗೆ ಬನ್ನಿ ಇಟ್ಟು ನಮಿಸಿದರು. ಮನೆ ಮನೆಗಳಿಗೆ ತೆರಳಿ ಹಿರಿಯರು, ಕಿರಿಯರು, ಮಕ್ಕಳು ಪರಸ್ಪರ ಬಂಗಾರ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ನಗರದ ವಿವಿಧೆಡೆಯ ದೇವಿ ಮಂದಿರಗಳಲ್ಲಿ ವಿಜಯದಶಮಿ ನಿಮಿತ್ತ ವಿಶೇಷ ಪೂಜೆ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಜರುಗಿದವು. ಕೊನೆಯ ದಿನ ಶುಕ್ರವಾರ ಮಂದಿಗಳಿಗೆ ಭಕ್ತರ ದಂಡು ಹರಿದು ಬಂತು. ಭಕ್ತರು ಎಲ್ಲೆಡೆಯ ದೇವಿ ಮಂದಿರ, ಹನುಮಾನ ಮಂದಿರ ಸೇರಿದಂತೆ ವಿವಿಧ ಮಂದಿರಗಳಿಗೆ ತೆರಳಿ ಬಂಗಾರವಿಟ್ಟು ನಮಿಸಿ, ದುರುಶನ ಪಡೆದರು.
ಬೀದರ್ ನಗರದ ಕುಂಬಾರವಾಡಾ, ಲಾಡಗೇರಿ, ಹಳ್ಳದಕೇರಿ, ದೇವಿ ಕಾಲೊನಿ, ಒಳಕೋಟೆ, ಚೌಬಾರಾ, ತಳಘಾಟ್, ಅಗ್ರಹಾರ, ಚಿದ್ರಿ ರಸ್ತೆತ್ರ, ಹಳೆ ಸವೀರ್ಸ್ ಸ್ಟ್ಯಾಂಡ್ ಸೇರಿದಂತೆ ನಾನಾ ಕಡೆಗಳಲ್ಲಿನ ದೇವಿಯ ಮಂದಿರಗಳಲ್ಲಿ ಹಾಗೂ ದೇವಿ ಪ್ರತಿಷ್ಠಾಪನೆಯ ಪೆಂಡಾಲ್ಗಳಲ್ಲಿ ಜನ ಜಂಗುಳಿ ಇತ್ತು. ಎಲ್ಲೆಡೆ ದೇವಿಗೆ ಬಂಗಾರ ಅರ್ಪಿಸಿ ದರುಶನ ಪಡೆಯುವ ದೃಶ್ಯಗಳು ಕಂಡು ಬಂದವು.
ಐತಿಹಾಸಿಕ ಕುಂಬಾರವಾಡಾ ಹಾಗೂ ಹಳ್ಳದಕೇರಿ ದೇವಿಯ ಮೆರವಣಿಗೆಗಳು ಹಳ್ಳದಕೇರಿ ರಸ್ತೆಯಲ್ಲಿನ ಎಸ್ಪಿ ಬಂಗಲೆಯ ಮೂಲಕ ಹಾದು ಹೈದರಾಬಾದ್ ರಸ್ತೆಯಲ್ಲಿರುವ ಶಾರ್ ಹನುಮಾನ ಮಂದಿರದಲ್ಲಿ ಸಂಜೆ ವೇಳೆ ಒಂದೆಡೆ ಸೇರಿದವು. ಬಳಿಕ ಲಾಡಗೇರಿ ಮಾರ್ಗವಾಗಿ ಮಂದಿರಗಳಿಗೆ ತೆರಳಿದವು. ನೂರಾರು ಭಕ್ತರು ದೇವಿಯ ದರುಶನ ಪಡೆದುಕೊಂಡರು. ನಗರದ ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಗರದ ಒಳ ಕೋಟೆಯ ಭವಾನಿ ಸೇರಿದಂತೆ ವಿವಿಧೆಡೆಯ ದೇವಿಯ ಅದ್ಧೂರಿ ಮೆರವಣಿಗೆ ನಡೆದವು. ಭಜನೆ, ಜಾನಪದ ಕಲಾ ತಂಡಗಳು ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದವು. ಕೆಲವೆಡೆಯ ಮಂದಿರಗಳಲ್ಲಿ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿತ್ತು. ಮಂದಿರಗಳಲ್ಲಿಭಕ್ತರ ಸಂಖ್ಯೆ ಕಂಡು ಬಂತು. ಜಿಲ್ಲೆಯಾದ್ಯಂತ ಜನತೆ ಪರಸ್ಪರ ಬಂಗಾರ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು. ನಗರದ ವಿವಿಧೆಡೆಯ ರಸ್ತೆಗಳ ಮೇಲೂ ಹಸಿ ಬಂಗಾರ ಮಾರಾಟವೂ ಜೋರಾಗಿ ನಡೆಯಿತು.
ಬೀದರ್ ಕೋಟೆಯ ಒಳಗಡೆ ಇರುವ ಗ್ರಾಮ ಒಳಕೋಟೆ ಗ್ರಾಮದಲ್ಲಿ ಭಜನೆ ದೇವಿ ಮೆರವಣಿಗೆ ನಡೆಯಿತು ಹಾಗೂ ಚಿಟ್ಟಾ ಗ್ರಾಮದಲ್ಲಿ ಮಹಿಳೆಯರು ವಿವಿಧ ಸಂಸ್ಕೃತಿ ಕಾರ್ಯಕ್ರಮ ಏರ್ಪಡಿಸಿ ಹಿರಿಯರು, ಮಹಿಳೆಯರು, ಮಕ್ಕಳು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ಇತ್ತು. ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಊರ ಹೊರವಲಯಕ್ಕೆ ತೆರಳಿ ಬನ್ನಿ ಮುರಿಯುವ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವೇಳೆ ಆಯುಧ ಪೂಜೆಯೂ ನಡೆಯಿತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು, ಮಿತ್ರರಿಗೆ ಆಹ್ವಾನಿಸಿ ಊಟದ ಸವಿ ಸವಿಯಲಾಯಿತು.
ರಾವಣ ಪ್ರತಿರೂಪ ದಹನ
ವಿಜಯದಶಮಿ ಅಂಗವಾಗಿ ಶ್ರೀ ರಾಮಲೀಲಾ ಉತ್ಸವ ಸಮಿತಿಯಿಂದ ಶುಕ್ರವಾರ ಬೀದರ್ನ ನೆಹರು ಕ್ರೀಡಾಂಗಣ ಹತ್ತಿರದ ಸಾಯಿ ಆದರ್ಶ ಪ್ರೌಢ ಶಾಲೆ ಆವರಣದಲ್ಲಿ ಪ್ರತಿವರ್ಷ 40 ಅಡಿ ಎತ್ತರದ ರಾವಣನ ಪ್ರತಿರೂಪ ದಹನ ಮಾಡಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುತಿತ್ತು. ದಹನ ಕಾರ್ಯಕ್ರಮ ನೋಡಲು ಜನರು ಸೇರುತ್ತಿದ್ದರು. ಆದರೆ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದೆ.
ಶುಕ್ರವಾರ 7 ಗಂಟೆಗೆ ಸಂಜೆ ಅಸತ್ಯದ ಮೇಲೆ ಸತ್ಯದ ಜಯ ಹಾಗೂ ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ 20 ಅಡಿ ಎತ್ತರದ ರಾವಣನ ಪ್ರತಿರೂಪದ ದಹನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದುಷ್ಟರ ಸಂಹಾರದ ಪ್ರತೀಕವಾಗಿ ವಿಜಯದಶಮಿ ಆಚರಣೆ ಮಾಡಲಾಗುತ್ತಿದೆ. ಪ್ರಸ್ತುತ ರಾವಣ, ದುಯೋರ್ಧನನಂಥ ದುಷ್ಟರು ದೇಶದಲ್ಲಿದ್ದಾರೆ. ಇಂಥವರ ಸಂಹಾರ ಮಾಡುವ ಸಂಕಲ್ಪ ಎಲ್ಲರೂ ಮಾಡಬೇಕು ಎಂದು ಪ್ರತಿಯೊಬ್ಬರೂ ಸಂಕಲ್ಪ ಮಾಡುತ್ತಾರೆ.
ವಿಜಯದಶಮಿ: ಮಂದಿರಗಳಿಗೆ ಭಕ್ತರ ದಂಡು
ಜಗನ್ಮಾತೆ, ದೇವಿ ಅಂಬಾ ಭವಾನಿಯ ಒಂಭತ್ತು ದಿನಗಳ ನವರಾತ್ರಿಯ ವಿಶೇಷ ಪೂಜೆ, ಆರಾಧನೆಯ ಬಳಿಕ ಶುಕ್ರವಾರ ಬೀದರ್ ನಗರ ಸೇರಿ ಜಿಲ್ಲೆಯಾದ್ಯಂತ ಸಂಭ್ರಮದ ವಿಜಯದಶಮಿ ಆಚರಣೆ ಜರುಗಿತು. ಈ ನಿಮಿತ್ತ ಜಿಲ್ಲೆಯಾದ್ಯಂತ ಎಲ್ಲೆಡೆ ಬನ್ನಿ ಹರಿದು, ಬಂಗಾರ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಪರಸ್ಪರ 'ಬಂಗಾರ' ಕೊಟ್ಟು-ಕೊಂಡು ಎಲ್ಲರ ಬದುಕು 'ಬಂಗಾರದಂತಿರಲಿ' ಎಂದು ಆಶಿಸಿಲಾಯಿತು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿಸಂಜೆ ವೇಳೆ ಗ್ರಾಮಸ್ಥರೆಲ್ಲ ಹೊಸ ಬಟ್ಟೆ ತೊಟ್ಟು ಬನ್ನಿ /ಬಂಗಾರದ (ಆರಿ ಗಿಡ) ಮರಕ್ಕೆ ತೆರಳಿ ಪೂಜೆ ಸಲ್ಲಿಸಿ, ಬನ್ನಿ ಹರಿದರು. ಬಳಿಕ ಮಕ್ಕಳು, ಹಿರಿಯರು, ಯುವಕ, ಯುವತಿಯರು ಹೀಗೆ ಎಲ್ಲರೂ ಆಯಾ ಗ್ರಾಮದ ದೇವರ ಮಂದಿರಗಳಿಗೆ ತೆರಳಿ ಬಂಗಾರ ಇಟ್ಟು ವಂದಿಸಿದರು. ನಂತರ ಊರ ಎಲ್ಲ ದೇವರಿಗೆ ಬನ್ನಿ ಇಟ್ಟು ನಮಿಸಿದರು. ಮನೆ ಮನೆಗಳಿಗೆ ತೆರಳಿ ಹಿರಿಯರು, ಕಿರಿಯರು, ಮಕ್ಕಳು ಪರಸ್ಪರ ಬಂಗಾರ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ನಗರದ ವಿವಿಧೆಡೆಯ ದೇವಿ ಮಂದಿರಗಳಲ್ಲಿ ವಿಜಯದಶಮಿ ನಿಮಿತ್ತ ವಿಶೇಷ ಪೂಜೆ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಜರುಗಿದವು. ಕೊನೆಯ ದಿನ ಶುಕ್ರವಾರ ಮಂದಿಗಳಿಗೆ ಭಕ್ತರ ದಂಡು ಹರಿದು ಬಂತು. ಭಕ್ತರು ಎಲ್ಲೆಡೆಯ ದೇವಿ ಮಂದಿರ, ಹನುಮಾನ ಮಂದಿರ ಸೇರಿದಂತೆ ವಿವಿಧ ಮಂದಿರಗಳಿಗೆ ತೆರಳಿ ಬಂಗಾರವಿಟ್ಟು ನಮಿಸಿ, ದುರುಶನ ಪಡೆದರು.
ಬೀದರ್ ನಗರದ ಕುಂಬಾರವಾಡಾ, ಲಾಡಗೇರಿ, ಹಳ್ಳದಕೇರಿ, ದೇವಿ ಕಾಲೊನಿ, ಒಳಕೋಟೆ, ಚೌಬಾರಾ, ತಳಘಾಟ್, ಅಗ್ರಹಾರ, ಚಿದ್ರಿ ರಸ್ತೆತ್ರ, ಹಳೆ ಸವೀರ್ಸ್ ಸ್ಟ್ಯಾಂಡ್ ಸೇರಿದಂತೆ ನಾನಾ ಕಡೆಗಳಲ್ಲಿನ ದೇವಿಯ ಮಂದಿರಗಳಲ್ಲಿ ಹಾಗೂ ದೇವಿ ಪ್ರತಿಷ್ಠಾಪನೆಯ ಪೆಂಡಾಲ್ಗಳಲ್ಲಿ ಜನ ಜಂಗುಳಿ ಇತ್ತು. ಎಲ್ಲೆಡೆ ದೇವಿಗೆ ಬಂಗಾರ ಅರ್ಪಿಸಿ ದರುಶನ ಪಡೆಯುವ ದೃಶ್ಯಗಳು ಕಂಡು ಬಂದವು.
ಐತಿಹಾಸಿಕ ಕುಂಬಾರವಾಡಾ ಹಾಗೂ ಹಳ್ಳದಕೇರಿ ದೇವಿಯ ಮೆರವಣಿಗೆಗಳು ಹಳ್ಳದಕೇರಿ ರಸ್ತೆಯಲ್ಲಿನ ಎಸ್ಪಿ ಬಂಗಲೆಯ ಮೂಲಕ ಹಾದು ಹೈದರಾಬಾದ್ ರಸ್ತೆಯಲ್ಲಿರುವ ಶಾರ್ ಹನುಮಾನ ಮಂದಿರದಲ್ಲಿ ಸಂಜೆ ವೇಳೆ ಒಂದೆಡೆ ಸೇರಿದವು. ಬಳಿಕ ಲಾಡಗೇರಿ ಮಾರ್ಗವಾಗಿ ಮಂದಿರಗಳಿಗೆ ತೆರಳಿದವು. ನೂರಾರು ಭಕ್ತರು ದೇವಿಯ ದರುಶನ ಪಡೆದುಕೊಂಡರು. ನಗರದ ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಗರದ ಒಳ ಕೋಟೆಯ ಭವಾನಿ ಸೇರಿದಂತೆ ವಿವಿಧೆಡೆಯ ದೇವಿಯ ಅದ್ಧೂರಿ ಮೆರವಣಿಗೆ ನಡೆದವು. ಭಜನೆ, ಜಾನಪದ ಕಲಾ ತಂಡಗಳು ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದವು. ಕೆಲವೆಡೆಯ ಮಂದಿರಗಳಲ್ಲಿ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿತ್ತು. ಮಂದಿರಗಳಲ್ಲಿಭಕ್ತರ ಸಂಖ್ಯೆ ಕಂಡು ಬಂತು. ಜಿಲ್ಲೆಯಾದ್ಯಂತ ಜನತೆ ಪರಸ್ಪರ ಬಂಗಾರ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು. ನಗರದ ವಿವಿಧೆಡೆಯ ರಸ್ತೆಗಳ ಮೇಲೂ ಹಸಿ ಬಂಗಾರ ಮಾರಾಟವೂ ಜೋರಾಗಿ ನಡೆಯಿತು.