ಆ್ಯಪ್ನಗರ

ಸೇನಾ ದಾಳಿ: ಹೋಟೆಲ್‌ನಲ್ಲಿ ಊಟ, ತಿಂಡಿಗೆ ಡಿಸ್ಕೌಂಟ್‌

ಭಾರತೀಯ ವಾಯು ಪಡೆಯು ಪಾಕಿಸ್ತಾನದ ನೆಲೆಯೊಳಗೆ ನುಗ್ಗಿ ಉಗ್ರರನ್ನು ಸಂಹಾರ ಮಾಡಿದ್ದಕ್ಕಾಗಿ ಬೀದರ್‌ನ ಪ್ರಸಿದ್ಧ ಪಂಜಾಬಿ ಹೋಟೆಲ್‌ನಲ್ಲಿ ಮಂಗಳವಾರ ದಿನವಿಡೀ ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿ ನೀಡುವ ಮೂಲಕ ದೇಶಭಕ್ತಿ ಮೆರೆಯಲಾಗಿದೆ.

Vijaya Karnataka 2 Mar 2019, 9:43 pm
ಭೀಮರಾವ್‌ ಬುರಾನಪುರ ಬೀದರ್‌ :ಭಾರತೀಯ ವಾಯು ಪಡೆಯು ಪಾಕಿಸ್ತಾನದ ನೆಲೆಯೊಳಗೆ ನುಗ್ಗಿ ಉಗ್ರರನ್ನು ಸಂಹಾರ ಮಾಡಿದ್ದಕ್ಕಾಗಿ ಬೀದರ್‌ನ ಪ್ರಸಿದ್ಧ ಪಂಜಾಬಿ ಹೋಟೆಲ್‌ನಲ್ಲಿ ಮಂಗಳವಾರ ದಿನವಿಡೀ ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿ ನೀಡುವ ಮೂಲಕ ದೇಶಭಕ್ತಿ ಮೆರೆಯಲಾಗಿದೆ.
Vijaya Karnataka Web vk exclusivemilitary attack dining at hotel discount
ಸೇನಾ ದಾಳಿ: ಹೋಟೆಲ್‌ನಲ್ಲಿ ಊಟ, ತಿಂಡಿಗೆ ಡಿಸ್ಕೌಂಟ್‌

ಗುರುದ್ವಾರ ರಸ್ತೆಯಲ್ಲಿರುವ ರೋಹಿತ್‌ ಪಂಜಾಬಿ ರೆಸ್ಟಾರೆಂಟ್‌ ಮಾಲೀಕ ಮಹೇಂದ್ರಸಿಂಗ್‌ ಚಾವ್ಲಾ ಸ್ವ ಇಚ್ಛೆಯಿಂದ ರಿಯಾಯಿತಿ ಘೋಷಿಸಿದ್ದಾರೆ. 15 ವರ್ಷಗಳಿಂದ ಹೋಟೆಲ್‌ ನಡೆಸುತ್ತಿರುವ ಮಹೇಂದ್ರಸಿಂಗ್‌ ಚಾವ್ಲಾಗೆ ಮಂಗಳವಾರ ಬೆಳಗ್ಗೆ ಎದ್ದ ಬಳಿಕ ಉಗ್ರರ ಸಂಹಾರದ ಸುದ್ದಿ ಕೇಳಿ ಸಂತಸ ಇಮ್ಮಡಿಗೊಂಡಿದೆ. ಭಾರತೀಯ ವಾಯು ಪಡೆಯ ಶೌರ‍್ಯಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡು, ತಮ್ಮ ಹೋಟೆಲ್‌ನಲ್ಲಿ ದಿನವಿಡೀ ಊಟ ಮಾಡಿದ ಗ್ರಾಹಕರಿಗೆ ರಿಯಾಯಿತಿ ನೀಡಿದ್ದಾರೆ.

ಈ ರೆಸ್ಟೊರೆಂಟ್‌ನಲ್ಲಿ ನಿತ್ಯ ಊಟಕ್ಕಾಗಿ ಸರತಿ ಇರುತ್ತದೆ. ಮಂಗಳವಾರ ಊಟಕ್ಕಾಗಿ ಹೋಟೆಲ್‌ಗೆ ಬಂದಿದ್ದ ಗ್ರಾಹಕರಿಗೆ ಮಾಲೀಕ ಮಹೇಂದ್ರಸಿಂಗ್‌ ಚಾವ್ಲಾ ರಿಯಾಯಿತಿ ನೀಡಿದ್ದನ್ನು ಕಂಡು ಗ್ರಾಹಕರು ಖುಷಿಗೊಂಡಿದ್ದಾರೆ. ಊಟ, ತಿಂಡಿ, ಕೋಲ್ಡ್‌ ಡ್ರಿಂಕ್ಸ್‌ಮೇಲೆ ಡಿಸ್ಕೌಂಟ್‌ ನೀಡಿದ್ದಾರೆ.

ಬುಧವಾರ ಮತ್ತೆ ಉಗ್ರರ ಮೇಲೆ ದಾಳಿಯಾದರೆ ಶೇ.25ರಷ್ಟು ಹಾಗೂ ಗುರುವಾರ ದಾಳಿಯಾದರೆ ಶೇ.30ರಷ್ಟು ಹಾಗೂ ಎಲ್ಲ ಉಗ್ರರು ಸತ್ತರೆ ಹೋಟೆಲ್‌ಗೆ ಊಟಕ್ಕೆ ಬರುವ ಗ್ರಾಹಕರಿಗೆ ಉಚಿತ ಊಟ, ಕೋಲ್ಡ್‌ಡ್ರಿಂಕ್ಸ್‌, ನೀರು ನೀಡುವೆ. ಈ ಮೂಲಕ ದೇಶಕ್ಕಾಗಿ ನನ್ನಿಂದ ಸಣ್ಣ ಕೊಡುಗೆ ನೀಡುವೆ ಎಂದು ಮಹೇಂದ್ರಸಿಂಗ್‌ ಚಾವ್ಲಾ ವಿಜಯ ಕರ್ನಾಟಕಕ್ಕೆ ಹೆಮ್ಮೆಯಿಂದ ಹೇಳಿದರು. ಜತೆಗೆ, ಭಾರತೀಯ ಯೋಧರ, ವಾಯುಪಡೆಯ ಕುರಿತು ಅಭಿಮಾನ ವ್ಯಕ್ತಪಡಿಸಿದರು. ಇಲ್ಲಿ ವೆಜ್‌ ಜತೆ ಪಂಜಾಬಿ ಖಾದ್ಯ ಸಿಗುತ್ತದೆ.

ಪಾಕಿಸ್ತಾನದ ಉಗ್ರರ ಮೇಲೆ ಭಾರತೀಯ ವಾಯು ಪಡೆಯು ದಾಳಿ ನಡೆಸಿ ಕೊಂದ ಖುಷಿಗೆ ಸಿಹಿ ಹಂಚಬೇಕು ಎಂದುಕೊಂಡಿದ್ದೆ, ಆದರೆ, ಸಿಹಿ ತಯಾರಿಸಲು ಸಮಯ ತಗಲುವುದರಿಂದ ಊಟದ ಮೇಲೆ ಡಿಸ್ಕೌಂಟ್‌ ನೀಡಲಾದೆ. ಸ್ವ ಇಚ್ಛೆಯಿಂದ ದೇಶ ಪ್ರೇಮಕ್ಕಾಗಿ ಈ ರಿಯಾಯಿತಿ ನೀಡಲಾಗಿದೆ. ಉಗ್ರರ ಮೇಲೆ ಮತ್ತೆ ಮತ್ತೆ ದಾಳಿ ನಡೆದರೆ ಇನ್ನಷ್ಟು ಹೆಚ್ಚಿನ ರಿಯಾಯಿತಿ ನೀಡುವೆ. ಎಲ್ಲ ಉಗ್ರರ ಸಂಹಾರವಾದರೆ ಗ್ರಾಹಕರಿಗೆ ಉಚಿತ ಊಟ ನೀಡುವೆ.

- ಮಹೇಂದ್ರಸಿಂಗ್‌ ಚಾವ್ಲಾ
ಮಾಲೀಕರು, ರೋಹಿತ್‌ ಪಂಜಾಬಿ ರೆಸ್ಟೊರೆಂಟ್‌, ಬೀದರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ