ಆ್ಯಪ್ನಗರ

ಅಭಿವೃದ್ಧಿಗೆ ’ಕೈ’ ಹಿಡಿದ ಮತದಾರ: ಸಚಿವ ಪಾಟೀಲ್‌

ಕಾಂಗ್ರೆಸ್‌ ಪಕ್ಷವು ಹಿಂದೆ ಮಾಡಿರುವ ಅಭಿವೃದ್ಧಿಯ ಕೆಲಸಗಳನ್ನು ನೋಡಿ ಹಳ್ಳಿಖೇಡ (ಬಿ) ಪುರಸಭೆಯ ಜನತೆ ಕಾಂಗ್ರೆಸ್‌ ಪಕ್ಷದ ಕೈ ಹಿಡಿದಿದ್ದಾರೆ ಎಂದು ಹುಮನಾಬಾದ್‌ ಕ್ಷೇತ್ರದ ಶಾಸಕ, ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಜಶೇಖರ ಪಾಟೀಲ್‌ ಹುಮನಾಬಾದ್‌ ತಿಳಿಸಿದರು.

Vijaya Karnataka 4 Sep 2018, 3:43 pm
ಬೀದರ್‌: ಕಾಂಗ್ರೆಸ್‌ ಪಕ್ಷವು ಹಿಂದೆ ಮಾಡಿರುವ ಅಭಿವೃದ್ಧಿಯ ಕೆಲಸಗಳನ್ನು ನೋಡಿ ಹಳ್ಳಿಖೇಡ (ಬಿ) ಪುರಸಭೆಯ ಜನತೆ ಕಾಂಗ್ರೆಸ್‌ ಪಕ್ಷದ ಕೈ ಹಿಡಿದಿದ್ದಾರೆ ಎಂದು ಹುಮನಾಬಾದ್‌ ಕ್ಷೇತ್ರದ ಶಾಸಕ, ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಜಶೇಖರ ಪಾಟೀಲ್‌ ಹುಮನಾಬಾದ್‌ ತಿಳಿಸಿದರು.
Vijaya Karnataka Web voter caught congress for development patil
ಅಭಿವೃದ್ಧಿಗೆ ’ಕೈ’ ಹಿಡಿದ ಮತದಾರ: ಸಚಿವ ಪಾಟೀಲ್‌


'ವಿಕ'ದೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರಕಾರವೇ ಹಳ್ಳಿಖೇಡ(ಬಿ) ಗ್ರಾಮ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿಸಿದೆ. ಜತೆಗೆ, ಇಲ್ಲಿ ನಾನು ಶಾಸಕನಾದ ಬಳಿಕ ವಿದ್ಯುತ್‌ ಸೌಕರ‍್ಯ, ಕುಡಿಯುವ ನೀರು, ಸೀಮಿ ನಾಗಣ್ಣ ಮಂದಿರದ ಬಳಿ ಯಾತ್ರಿ ನಿವಾಸ ನಿರ್ಮಾಣ ಮಾಡಿ ಪಟ್ಟಣಕ್ಕೆ ಮೂಲ ಸೌಕರ‍್ಯ ನೀಡಲಾಗಿದೆ. ಹೀಗಾಗಿ, ಜನತೆ ನಾವು ಮಾಡಿರುವ ಕೆಲಸವನ್ನು ನೋಡಿ ಮತ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಹಳ್ಳಿಖೇಡ(ಬಿ) ಪುರಸಭೆಯ ಮೊದಲ ಚುನಾವಣೆಯಲ್ಲೇ ಜನತೆ ಕಾಂಗ್ರೆಸ್‌ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದಾರೆ. 2018ರ ಚುನಾವಣೆಯಲ್ಲೂ ಕಾಂಗ್ರೆಸ್‌ ಬೆಂಬಲಿಸಿ ದಾಖಲೆಗಳ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ, ಇಲ್ಲಿನ ಜನತೆಗೆ ಅಭಿನಂದಿಸುವೆ ಎಂದರು. ಈ ಮೊದಲು ಹಳ್ಳಿಖೇಡ(ಬಿ) ಗ್ರಾಮವು ಮೀಸಲು ಕ್ಷೇತ್ರವಾದ ಹುಲಸೂರು ವ್ಯಾಪ್ತಿಯಲ್ಲಿತ್ತು. 2008ರ ನಂತರ ಹುಮನಾಬಾದ್‌ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಬಳಿಕ ಅಭಿವೃದ್ಧಿಯ ಕೆಲಸಗಳು ನಡೆದಿದೆ ಎಂದೂ ಸಚಿವರು ಹೇಳಿದರು.

ಬಿಜೆಪಿಯವರು ಏನೇ ಕಿತಾಪತಿ ಮಾಡಿ, ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಿದರೂ ಹಳ್ಳಿಖೇಡ(ಬಿ) ಪುರಸಭಾ ವ್ಯಾಪ್ತಿಯ ಜನರು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರು ಏನು ಅಂತರ ಪಡೆಯುತ್ತಾರೆ. ಯಾರ ಸಾಮರ್ಥ್ಯ‌ ಏನು ಎಂಬುದು ತಿಳಿಯುತ್ತದೆ ಎಂದೂ ಸಚಿವರು ಬಿಜೆಪಿಗೆ ಸವಾಲು ಹಾಕಿದರು.

ಹಳ್ಳಿಖೇಡ(ಬಿ) ಪುರಸಭೆಯ ಚುನಾವಣೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್‌, ವಿಜಯ್‌ಸಿಂಗ್‌, ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ ಸೇರಿಕಾರ್‌, ಉಪಾಧ್ಯಕ್ಷ ಡಾ. ಪ್ರಕಾಶ್‌ ಪಾಟೀಲ್‌, ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಅಫ್ಸರ್‌ಮಿಯಾ, ಹುಮನಾಬಾದ್‌ ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್‌ ಡಾಕುಳಗಿ, ಜಿಪಂ ಸದಸ್ಯ ಲಕ್ಷ್ಮಣ ಬುಳ್ಳಾ ಅವರುಗಳು ಸಾರಥ್ಯ ವಹಿಸಿದ್ದರು. ವಿಶೇಷವಾಗಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ್‌ ಹುಮನಾಬಾದ್‌ ಅವರ ವಹಿಸಿದ್ದ ಜವಾಬ್ದಾರಿ ಮತ್ತು ಎಲ್ಲರ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ ಎಂದು ಸಚಿವ ರಾಜಶೇಖರ ಪಾಟೀಲ್‌ ಹುಮನಾಬಾದ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ