ಆ್ಯಪ್ನಗರ

ನೀರಿನ ಸಮಸ್ಯೆ :ಅಧಿಕಾರಿಗಳ ತಂಡ ಭೇಟಿ

ಪಟ್ಟಣದಲ್ಲಿ ಉದ್ಭವಿಸಿದ ಭೀಕರ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕನ ನಡೆಸಿತು.

Vijaya Karnataka 8 May 2019, 9:25 pm
ಔರಾದ್‌ :ಪಟ್ಟಣದಲ್ಲಿ ಉದ್ಭವಿಸಿದ ಭೀಕರ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕನ ನಡೆಸಿತು.
Vijaya Karnataka Web water problem visit the team of officials
ನೀರಿನ ಸಮಸ್ಯೆ :ಅಧಿಕಾರಿಗಳ ತಂಡ ಭೇಟಿ


ಪಟ್ಟಣದ 20 ವಾರ್ಡ್‌ಗಳಲ್ಲಿ ಸಂಚರಿಸಿ ನೀರಿನ ಸಮಸ್ಯೆ ಅರಿತ ತಂಡ, ತಕ್ಷಣವೇ ಟ್ಯಾಂಕರ್‌ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿತು. ಅಲ್ಲದೆ ಹಾಲಹಳ್ಳಿ ಬಾಂದಾರಗೆ ಕಾರಂಜಾ ನೀರು ಹರಿಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಬಗ್ಗೆ ಭರವಸೆ ನೀಡಿದರು.

ಅಲ್ಲಲ್ಲಿ ಇರುವ ಪುರಾತನ ಬಾವಿಗಳಲ್ಲಿ ತುಂಬಿಕೊಂಡ ಹೂಳು ತೆಗೆಸಲು ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಎರಡು ಖಾಸಗಿ ಕೊಳವೆ ಬಾವಿಗಳಿಂದ ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ವಣಿಕ್ಯಾಳ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಖಾಸಗಿ ಕೊಳವೆ ಬಾವಿ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು. ತೇಗಂಪುರ ಕೆರೆ ಪಕ್ಕದಲ್ಲಿ 3 ಕೊಳವೆ ಬಾವಿ ಕೊರೆಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದರು.

ಪಿಡಿಒಗಳ ಸಭೆ:

ನಂತರ ತಹಸಿಲ್‌ ಕಚೇರಿ ಸಭಾಂಗಣದಲ್ಲಿ ಪಿಡಿಒ ಗಳ ಸಭೆ ನಡೆಸಿದ ಸಹಾಯಕ ಆಯುಕ್ತರು, ಗ್ರಾಮಿಣ ಭಾಗದಿಂದ ನೀರಿನ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಎಚ್ಚರ ವಹಿಸುವಂತೆ ತಾಕೀತು ಮಾಡಿದರು.

ತಹಸೀಲ್ದಾರ ಎಂ.ಚಂದ್ರಶೇಖರ, ಪಪಂ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಮತ್ತಿತರರು ಇದ್ದರು.

ಅಧಿಕಾರಿ ವಣಿಕ್ಯಾಳ ಅವರು ಭೇಟಿ ನೀಡಿದಾಗ, ಕಾರ ಚಾಲಕ ಕೊಡೆ ಹಿಡಿದು ರಕ್ಷಣೆ ನೀಡುತ್ತಿದ್ದ. ಆದರೆ, ಜನರು ಮಾತ್ರ ಬಿಸಿಲಲ್ಲೇ ನೀರಿಗಾಗಿ ಕೊಡ ಹಿಡಿದು ಓಡಾಡುತ್ತಿರುವುದು ಸಾಮಾನ್ಯವಾಗಿತ್ತು.

ಖಾಸಗಿ ಬೋರವೆಲ್‌ ವಿದ್ಯುತ್‌ ಬಿಲ್‌

ಖಾಸಗಿ ವ್ಯಕ್ತಿಗಳ ಮನೆಯಲ್ಲಿ ಕೊಳವೆ ಬಾವಿ ಇದ್ದಲ್ಲಿ ಅಕ್ಕಪಕ್ಕದವರಿಗೆ ನೀರು ನೀಡಿದ್ದಲ್ಲಿ ಕೊಳವೆ ಬಾವಿಗೆ ವಿದ್ಯುತ್‌ ಬಿಲ್‌ ಸರಕಾರ ಪಾವತಿ ಮಾಡಲಿದೆ ಎಂದು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ತಿಳಿಸಿದರು.

ಪಟ್ಟಣದ ಕೇದಾರೇಶ್ವರ ದೇವಸ್ಥಾನದ ಪಕ್ಕದ ಬಾವಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ನೀರಿನ ಸಮಸ್ಯೆ ಸಾಕಷ್ಟು ಕಂಡು ಬರುತ್ತಿದ್ದು, ಖಾಸಗಿ ಕೊಳವೆ ಬಾವಿಗಳ ಮಾಲಿಕರ ಮನವೊಲಿಸಿ ನೀರು ನೀಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ