ಆ್ಯಪ್ನಗರ

ಎತ್ತಿನ ಬಂಡಿಯಲ್ಲಿ ಎಚ್‌ಡಿಕೆಗೆ ಅದ್ಧೂರಿ ಸ್ವಾಗತ

ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಅವರನ್ನು ಸಿಂಗರಿಸಿದ ಬಂಡಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಉಜಳಂಬ ಗ್ರಾಮಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು.

Vijaya Karnataka 28 Jun 2019, 5:00 am
ಬೀದರ್‌ :ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಅವರನ್ನು ಸಿಂಗರಿಸಿದ ಬಂಡಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಉಜಳಂಬ ಗ್ರಾಮಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
Vijaya Karnataka Web welcome to hdk on cart
ಎತ್ತಿನ ಬಂಡಿಯಲ್ಲಿ ಎಚ್‌ಡಿಕೆಗೆ ಅದ್ಧೂರಿ ಸ್ವಾಗತ


ಗ್ರಾಮಕ್ಕೆ ಎಂಟ್ರಿಯಾಗುತ್ತಲೇ ಸಿಎಂಗೆ ಆನೆಯಿಂದ ಹೂಮಾಲೆ ಹಾಕಿಸಲಾಯಿತು. ಕುಂಭ ಹೊತ್ತ ಸುಮಂಗಲೆಯರು, ಡೊಳ್ಳು, ಭಜನೆ, ನಾನಾ ಕಲಾವಿದರು ಮೆರವಣಿಗೆಗೆ ಮೆರಗು ತಂದಿದ್ದರು. ಉಜಳಂಬ ಗ್ರಾಮದ ಮನೆಗಳ ಮುಂದೆ ಸಾರಿಸಿ, ರಂಗೋಲಿ ಬಿಡಿಸಿದ್ದರು.

ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಗುರುವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಮುಖ್ಯಮಂತ್ರಿಯವರನ್ನು ನೋಡಲು ಹಾಗೂ ತಮ್ಮ ಸಮಸ್ಯೆ ಹೇಳಿಕೊಳ್ಳಲು ಗ್ರಾಮಸ್ಥರಷ್ಟೇ ಅಲ್ಲದೆ, ನೆರೆಯ ಗ್ರಾಮಗಳ, ಜಿಲ್ಲೆಗಳ ಜನರೂ ಕಾರ‍್ಯಕ್ರಮಕ್ಕೆ ಆಗಮಿಸಿದ್ದರು. ಬಿಸಿಲನ್ನೂ ಲೆಕ್ಕಿಸದೇ ಅಲ್ಲಲ್ಲಿ ಜನತೆ ನಿಂತುಕೊಂಡಿದ್ದರು. ಜಿಲ್ಲಾಡಳಿತದಿಂದ ಮಾಡಲಾಗಿದ್ದ ಗೋದಿ ಹುಗ್ಗಿ,ಅನ್ನ ಸಾರು ಸವಿದ ಜನರು, ಸಂಜೆಯವರೆಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕಾದು ಕುಳಿತಿದ್ದರು.

ಮಧ್ಯಾಹ್ನ 2ಕ್ಕೆ ಕಾರ‍್ಯಕ್ರಮ ಆರಂಭ

ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ‍್ಯಕ್ರಮ ಹಾಗೂ ಜನತಾ ದರ್ಶನ ಮತ್ತು ಕುಂದು ಕೊರತೆಗಳ ಆಲಿಕೆ ನಿಗದಿಯಾಗಿದ್ದರೂ, ಕಾರ‍್ಯಕ್ರಮ ಆರಂಭವಾಗಿದ್ದು ಮಧ್ಯಾಹ್ನ 2ಕ್ಕೆ. ಮುಖ್ಯಮಂತ್ರಿಯವರು ಬಸವಕಲ್ಯಾಣಕ್ಕೆ ತೆರಳಿ, ಮನೆ ಕುಸಿದು ಮೃತಪಟ್ಟಿದ 6 ಜನರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 24 ಲಕ್ಷ ರೂ.ಗಳ ಚೆಕ್‌ ವಿತರಿಸಿ ಬರಲು ಮಧ್ಯಾಹ್ನವೇ ಆಗಿತ್ತು. ಸಿಎಂ ಬರುವವರೆಗೆ ಜನತೆ ಕಾದು ಕುಳಿತಿದ್ದರು. ಕೆಲವರು ಊಟದ ಮನೆಯತ್ತ ಹೆಜ್ಜೆ ಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ