ಭೀಮರಾವ್ ಬುರಾನಪುರ ಬೀದರ್: ಕೊರೊನಾ ತಡೆಯ ಲಾಕ್ಡೌನ್ ಹೊಡೆತಕ್ಕೆ ಸಿಲುಕಿರುವ ಜಿಲ್ಲೆಯ ಸಾವಿರಾರು ಕಾರ್ಮಿಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಹೀಗೆ ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರ ಖಾತೆಗೆ ಸರಕಾರ ಎರಡು ತಿಂಗಳ ಕಾಲ ತಲಾ ಒಂದು ಸಾವಿರ ರೂ. ಖಾತೆಗೆ ಹಾಕುವುದಾಗಿ ತಿಳಿಸಿದ್ದು, ಈ ಹಣವನ್ನೇ ಇದೀಗ ಜಿಲ್ಲೆಯ ಕಾರ್ಮಿಕರು ಆಸೆ ಕಣ್ಣಿನಿಂದ ಎದುರು ನೋಡುತ್ತಿದ್ದಾರೆ.
2006ರಿಂದ ಈ ವರೆಗೆ ಬೀದರ್ ಜಿಲ್ಲೆಯಲ್ಲಿಒಟ್ಟು 72,266 ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿನೋಂದಾಯಿಸಿಕೊಂಡಿದ್ದಾರೆ. ಈ ನಡುವೆ ಹಲವರು ಮೃತಪಟ್ಟಿದ್ದಾರೆ. ಹಲವರ ನೋಂದಾಯಿತ ಅವಧಿ ಪೂರ್ಣಗೊಂಡಿದೆ. ಇನ್ನು ಕೆಲವರು ನಿವೃತ್ತಿ ವಯಸ್ಸು ದಾಟಿದ್ದಾರೆ. ಹೀಗಾಗಿ, ಸದ್ಯಕ್ಕೆ ಕಾರ್ಮಿಕ ಇಲಾಖೆಯಲ್ಲಿಕೇವಲ 27,551 ಕಾರ್ಮಿಕರ ನೋಂದಣಿ ಮಾತ್ರ ಉಳಿದಿದೆ. ಈಗಿರುವ 27 ಸಾವಿರ ಕಾರ್ಮಿಕರ ಪಟ್ಟಿಯನ್ನೇ ಇಲಾಖೆಯು ಹಣ ಜಮೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿಕಾರ್ಮಿಕರಲ್ಲಿಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. ವಾಹನವೊಂದರ ಮೂಲಕ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿವಾಸಿಸುವ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಕರ ಪತ್ರಗಳನ್ನು ಹಂಚಲಾಗುತ್ತಿದೆ. ಕಾರ್ಮಿಕರಿಗೆ ಸ್ಯಾನಿಟೈಸರ್, ಸಾಬೂನು ಹಾಗೂ ಮಾಸ್ಕ್ಗಳನ್ನು ಉಚಿತವಾಗಿ ಇಲಾಖೆಯಿಂದ ವಿತರಿಸಲಾಗುತ್ತಿದೆ. ಕೊರೊನಾ ತಡೆಯುವ ನಿಟ್ಟಿನಲ್ಲಿಕಾರ್ಮಿಕರಿಗೆ ತಿಳಿಹೇಳುವ ಕೆಲಸ ನಡೆಯುತ್ತಿದೆ.
ಆನ್ಲೈನ್; ನೇರ ನೋಂದಣಿಗೆ ಅವಕಾಶ
ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ತಮ್ಮ ಗುರುತಿನ ಚೀಟಿ,ಆಧಾರ್ ಕಾರ್ಡ್,ಮೊಬೈಲ್ ನಂಬರ್,ಬ್ಯಾಂಕ್ ಸ್ಟೇಟ್ಮೆಂಟ್ನೊಂದಿಗೆ ನೇರವಾಗಿ ಆನ್ಲೈನ್ನಲ್ಲೇ ನೋಂದಣಿ ಮಾಡಿಕೊಳ್ಳಲು ಕಾರ್ಮಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಇಷ್ಟು ದಾಖಲೆ ಹೊಂದಿದವರು ನೇರವಾಗಿ ನೋಂದಣಿ ಮಾಡಿಕೊಂಡರೆ, ಅಂತಹವರ ಖಾತೆಗೆ ಹಣವೂ ಆನ್ಲೈನ್ ಮೂಲಕವೇ ನೇರವಾಗಿ ಜಮೆ ಆಗುತ್ತದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ. ಕಾರ್ಮಿಕ ಇಲಾಖೆಯಲ್ಲಿನೋಂದಣಿ ಮಾಡಿಕೊಂಡಿರುವ ಕಾರ್ಮಿಕರು ಮೇಲೆ ತಿಳಿಸಲಾದ ದಾಖಲೆಗಳನ್ನು ಹೊಂದಿರಲೇಬೇಕಿದೆ ಎಂದು ಜಿಲ್ಲಾಕಾರ್ಮಿಕ ಅಧಿಕಾರಿಗಳು ಹೇಳಿದರು.
ಬೀದರ್ ಜಿಲ್ಲೆಯಲ್ಲಿಸದ್ಯಕ್ಕೆ 27,551 ನೋಂದಾಯಿತ ಕಾರ್ಮಿಕರು ಇದ್ದು, ಕೊರೊನಾದಿಂದ ಸಂಕಷ್ಟದಲ್ಲಿರುವ ಇವರಿಗೆ ಪ್ರತಿ ತಿಂಗಳ 1 ಸಾವಿರದಂತೆ ಎರಡು ತಿಂಗಳ ಕಾಲ ಒಟ್ಟು 2 ಸಾವಿರ ರೂ. ಖಾತೆಗೆ ಸರಕಾರದಿಂದ ಜಮೆ ಆಗಲಿದೆ. ಜಿಲ್ಲೆಯ ನೋಂದಾಯಿತ ಕಾರ್ಮಿಕರ ಪಟ್ಟಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಶೀಘ್ರವೇ ಇವರ ಖಾತೆಗೆ ಹಣ ಜಮೆ ಆಗಲಿದೆ.
- ರಮೇಶ್. ವಿ. ಸುಂಬಡ, ಜಿಲ್ಲಾಕಾರ್ಮಿಕ ಅಧಿಕಾರಿ, ಬೀದರ್
2006ರಿಂದ ಈ ವರೆಗೆ ಬೀದರ್ ಜಿಲ್ಲೆಯಲ್ಲಿಒಟ್ಟು 72,266 ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿನೋಂದಾಯಿಸಿಕೊಂಡಿದ್ದಾರೆ. ಈ ನಡುವೆ ಹಲವರು ಮೃತಪಟ್ಟಿದ್ದಾರೆ. ಹಲವರ ನೋಂದಾಯಿತ ಅವಧಿ ಪೂರ್ಣಗೊಂಡಿದೆ. ಇನ್ನು ಕೆಲವರು ನಿವೃತ್ತಿ ವಯಸ್ಸು ದಾಟಿದ್ದಾರೆ. ಹೀಗಾಗಿ, ಸದ್ಯಕ್ಕೆ ಕಾರ್ಮಿಕ ಇಲಾಖೆಯಲ್ಲಿಕೇವಲ 27,551 ಕಾರ್ಮಿಕರ ನೋಂದಣಿ ಮಾತ್ರ ಉಳಿದಿದೆ. ಈಗಿರುವ 27 ಸಾವಿರ ಕಾರ್ಮಿಕರ ಪಟ್ಟಿಯನ್ನೇ ಇಲಾಖೆಯು ಹಣ ಜಮೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿಕಾರ್ಮಿಕರಲ್ಲಿಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. ವಾಹನವೊಂದರ ಮೂಲಕ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿವಾಸಿಸುವ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಕರ ಪತ್ರಗಳನ್ನು ಹಂಚಲಾಗುತ್ತಿದೆ. ಕಾರ್ಮಿಕರಿಗೆ ಸ್ಯಾನಿಟೈಸರ್, ಸಾಬೂನು ಹಾಗೂ ಮಾಸ್ಕ್ಗಳನ್ನು ಉಚಿತವಾಗಿ ಇಲಾಖೆಯಿಂದ ವಿತರಿಸಲಾಗುತ್ತಿದೆ. ಕೊರೊನಾ ತಡೆಯುವ ನಿಟ್ಟಿನಲ್ಲಿಕಾರ್ಮಿಕರಿಗೆ ತಿಳಿಹೇಳುವ ಕೆಲಸ ನಡೆಯುತ್ತಿದೆ.
ಆನ್ಲೈನ್; ನೇರ ನೋಂದಣಿಗೆ ಅವಕಾಶ
ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ತಮ್ಮ ಗುರುತಿನ ಚೀಟಿ,ಆಧಾರ್ ಕಾರ್ಡ್,ಮೊಬೈಲ್ ನಂಬರ್,ಬ್ಯಾಂಕ್ ಸ್ಟೇಟ್ಮೆಂಟ್ನೊಂದಿಗೆ ನೇರವಾಗಿ ಆನ್ಲೈನ್ನಲ್ಲೇ ನೋಂದಣಿ ಮಾಡಿಕೊಳ್ಳಲು ಕಾರ್ಮಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಇಷ್ಟು ದಾಖಲೆ ಹೊಂದಿದವರು ನೇರವಾಗಿ ನೋಂದಣಿ ಮಾಡಿಕೊಂಡರೆ, ಅಂತಹವರ ಖಾತೆಗೆ ಹಣವೂ ಆನ್ಲೈನ್ ಮೂಲಕವೇ ನೇರವಾಗಿ ಜಮೆ ಆಗುತ್ತದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ. ಕಾರ್ಮಿಕ ಇಲಾಖೆಯಲ್ಲಿನೋಂದಣಿ ಮಾಡಿಕೊಂಡಿರುವ ಕಾರ್ಮಿಕರು ಮೇಲೆ ತಿಳಿಸಲಾದ ದಾಖಲೆಗಳನ್ನು ಹೊಂದಿರಲೇಬೇಕಿದೆ ಎಂದು ಜಿಲ್ಲಾಕಾರ್ಮಿಕ ಅಧಿಕಾರಿಗಳು ಹೇಳಿದರು.
ಬೀದರ್ ಜಿಲ್ಲೆಯಲ್ಲಿಸದ್ಯಕ್ಕೆ 27,551 ನೋಂದಾಯಿತ ಕಾರ್ಮಿಕರು ಇದ್ದು, ಕೊರೊನಾದಿಂದ ಸಂಕಷ್ಟದಲ್ಲಿರುವ ಇವರಿಗೆ ಪ್ರತಿ ತಿಂಗಳ 1 ಸಾವಿರದಂತೆ ಎರಡು ತಿಂಗಳ ಕಾಲ ಒಟ್ಟು 2 ಸಾವಿರ ರೂ. ಖಾತೆಗೆ ಸರಕಾರದಿಂದ ಜಮೆ ಆಗಲಿದೆ. ಜಿಲ್ಲೆಯ ನೋಂದಾಯಿತ ಕಾರ್ಮಿಕರ ಪಟ್ಟಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಶೀಘ್ರವೇ ಇವರ ಖಾತೆಗೆ ಹಣ ಜಮೆ ಆಗಲಿದೆ.
- ರಮೇಶ್. ವಿ. ಸುಂಬಡ, ಜಿಲ್ಲಾಕಾರ್ಮಿಕ ಅಧಿಕಾರಿ, ಬೀದರ್