ಆ್ಯಪ್ನಗರ

ದೇವರ ಹಳೆಯ ಫೋಟೋ ಸಂಗ್ರಹಿಸಿದ ಯುವಕರು

ದೈನಂದಿನ ದಿನಗಳಲ್ಲಿನಾವುಗಳು ಪೂಜಿಸುವ ದೇವರುಗಳ ಭಾವಚಿತ್ರ ಹಳೆಯದಾದರೆ ರಸ್ತೆ, ಹಳ್ಳಕೊಳ್ಳ ಹಾಗೂ ದೇವಸ್ಥಾನ ಸುತ್ತಮುತ್ತಲು ಎಸೆಯುತ್ತ ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಮಾಡಬಾರದು ಎಂದು ಯುವ ಬ್ರಿಗೇಡ್‌ ಜಿಲ್ಲಾಸಂಚಾಲಕ ಲಕ್ಷ್ಮೀಕಾಂತ ಹಿಂದೊಡ್ಡಿ ಹೇಳಿದರು.

Vijaya Karnataka 24 Oct 2019, 10:41 pm
ಹುಮನಾಬಾದ್‌ :ದೈನಂದಿನ ದಿನಗಳಲ್ಲಿನಾವುಗಳು ಪೂಜಿಸುವ ದೇವರುಗಳ ಭಾವಚಿತ್ರ ಹಳೆಯದಾದರೆ ರಸ್ತೆ, ಹಳ್ಳಕೊಳ್ಳ ಹಾಗೂ ದೇವಸ್ಥಾನ ಸುತ್ತಮುತ್ತಲು ಎಸೆಯುತ್ತ ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಮಾಡಬಾರದು ಎಂದು ಯುವ ಬ್ರಿಗೇಡ್‌ ಜಿಲ್ಲಾಸಂಚಾಲಕ ಲಕ್ಷ್ಮೀಕಾಂತ ಹಿಂದೊಡ್ಡಿ ಹೇಳಿದರು.
Vijaya Karnataka Web youths collected an old photo of god
ದೇವರ ಹಳೆಯ ಫೋಟೋ ಸಂಗ್ರಹಿಸಿದ ಯುವಕರು


ಪಟ್ಟಣದ ಭವಾನಿ ಮಂದಿರದಲ್ಲಿಯುವ ಬ್ರಿಗೇಡ್‌ ವತಿಯಿಂದ ಭಾನುವಾರ ಕಣ ಕಣದಲ್ಲೂಶಿವನೆಂಬ ಕಾರ್ಯಕ್ರಮ ಆಯೋಜಿಸಿ ಮಾತನಾಡಿದರು.

ಸುತ್ತಮುತ್ತಲಿನ ವಿವಿಧ ದೇವಸ್ಥಾನಗಳ ಆವರಣ ಹಾಗೂ ಮಾಣಿಕನಗರದ ಸರೋವರದಲ್ಲಿಜನರು ಬಿಟ್ಟು ಹೋದ ದೇವರ ಭಾವಚಿತ್ರ ಸಂಗ್ರಹಿಸಿದ್ದು, ಭಾರತಿಯ ಸಂಸ್ಕೃತಿಯ ಪರಂಪರೆಯಲ್ಲಿಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಸ್ಥಾನÜವಿದೆ. ಹಳೆಯ ಭಾವಚಿತ್ರಗಳು ರಸ್ತೆಯಲ್ಲಿಎಸೆಯಬಾರದು ಎಂದರು.

ಪಟ್ಟಣದಲ್ಲಿಗುಡು-ಗುಂಡಾರ ಮುಂತಾದ ಕಡೆಗಳಲ್ಲಿಇಡಲಾದ ಹಳೆಯ ಫೋಟೋಗಳನ್ನು ಭವಾನಿ ಮಂದಿರದಲ್ಲಿಸಂಗ್ರಹಿಸಿ ಫ್ರೇಮ್‌ ಹಾಗೂ ಗ್ಲಾಸ್‌ ಬೇರ್ಪಡಿಸಲಾಯಿತು. ಒಳಗಿನ ಚಿತ್ರಪಟವನ್ನು ಚೂರು ಮಾಡಿ ಗುಂಡಿಯಲ್ಲಿಮುಚ್ಚಿ ಅದರ ಮೇಲೆ ಅರಳಿ ಮರ ನೆಟ್ಟರು.

ತಾಲೂಕು ಸಂಚಾಲಕ ಪ್ರಶಾಂತ ಶೇರಿಕಾರ, ಸಹ ಸಂಚಾಲಕ ಅಮಿತ್‌ ವರ್ಮಾ, ಕಾರ್ಯಕರ್ತರಾದ ಕಾಶಿನಾಥರೆಡ್ಡಿ ರಾಂಪೂರೆ, ವಿಕ್ರಮ್‌ ಶಂಭುಶಂಕರ, ರಂಜಿತ್‌ ಮೇತ್ರೆ, ಸುರೇಶ ನವಣೆ, ಬಾಲರೆಡ್ಡಿ ಯಾಚಾ, ಕರಬಸಪ್ಪ ಛತ್ರಿ, ವಿಶಾಲ ರಜಪೂತ್‌, ಬಲರಾಮ ಪೋಲಿದಾಸ್‌, ಓಂಕಾರ ಮೇತ್ರೆ, ಪಾಂಡುರಂಗ್‌ ಮಾಳೆ, ಆನಂದ ಜಾಜಿ, ಅನಿಲ್‌ರೆಡ್ಡಿ ವಾಂಜರಿ, ದಿಲೀಪ್‌ ಪಂಚಾಳ, ರಾಹುಲ್‌ ಭೈರಾಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ