ತ್ರಿಶ್ಶೂರ್: ಮದುವೆ ನಿಲ್ಲಿಸಿ ಎಂದು ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾಳೆ.
ಕೊಡಂಗಲೂರಿನ ಶ್ರೀ ಕುರುಂಬ ದೇವಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಇನ್ನೇನು ತಾಳಿ ಕಟ್ಟಲು ಕೆಲವೇ ಕ್ಷಣಗಳಿರುವಾಗ ಯುವತಿ ಅಲ್ಲಿಂದ ಠಾಣೆಗೆ ಪರಾರಿಯಾಗಿದ್ದಾಳೆ.
ಯುವತಿ ಹಿರಿಯ ಸೋದರಿಯ ಆಶ್ರಯದಲ್ಲಿ ಇದ್ದು, ಅಕ್ಕ ಮತ್ತು ಭಾವ ಇದೇ ವರನನ್ನು ಮದುವೆಯಾಗುವಂತೆ ಬಲವಂತ ಮಾಡಿದ್ದರು. 18 ವರ್ಷದ ಯುವತಿಗೆ 36 ವರ್ಷದ ವರನನ್ನು ನಿಗದಿಗೊಳಿಸಲಾಗಿತ್ತು. ಆದರೆ ಯುವತಿ ಇಷ್ಟು ವಯಸ್ಸಾದವನ ಜತೆ ಮದುವೆ ಇಷ್ಟ ಇಲ್ಲ, ಮದುವೆ ನಿಲ್ಲಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.
ಪೊಲೀಸ್ ಅಧಿಕಾರಿ ಎರಡೂ ಕಡೆಯವರ ಜತೆ ಮಾತುಕತೆ ನಡೆಸಿದ ಬಳಿಕ ಮದುವೆ ರದ್ದುಗೊಳಿಸಲಾಯಿತು. ವಧುವಿಗೆ ನೀಡಲಾಗಿದ್ದ ಉಡುಗೊರೆ ಮತ್ತು ಬಟ್ಟೆಗಳನ್ನು ವರನ ಕಡೆಯವರಿಗೆ ವಾಪಸ್ ಮಾಡಲಾಯಿತು.ವರನ ಕಡೆಯವರು ವಧುವಿನ ಕುಟುಂಬದ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಯುವತಿ ಓದಿನಲ್ಲಿ ಜಾಣೆಯಾಗಿದ್ದು, 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು.ಹಣಕಾಸು ಬಿಕ್ಕಟ್ಟಿನ ಕಾರಣ ಓದು ನಿಂತಿದೆ. ಓದು ಮುಂದುವರಿಸುವ ಇಚ್ಛೆ ಇದ್ದು, ಮದುವೆಯಾದರೆ ಅದು ಸಾಧ್ಯವಾಗುವುದಿಲ್ಲ ಎಂದು ಯುವತಿ ಪೊಲೀಸರಲ್ಲಿ ಹೇಳಿದ್ದಾಳೆ.
ಕೊಡಂಗಲೂರಿನ ಶ್ರೀ ಕುರುಂಬ ದೇವಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಇನ್ನೇನು ತಾಳಿ ಕಟ್ಟಲು ಕೆಲವೇ ಕ್ಷಣಗಳಿರುವಾಗ ಯುವತಿ ಅಲ್ಲಿಂದ ಠಾಣೆಗೆ ಪರಾರಿಯಾಗಿದ್ದಾಳೆ.
ಯುವತಿ ಹಿರಿಯ ಸೋದರಿಯ ಆಶ್ರಯದಲ್ಲಿ ಇದ್ದು, ಅಕ್ಕ ಮತ್ತು ಭಾವ ಇದೇ ವರನನ್ನು ಮದುವೆಯಾಗುವಂತೆ ಬಲವಂತ ಮಾಡಿದ್ದರು. 18 ವರ್ಷದ ಯುವತಿಗೆ 36 ವರ್ಷದ ವರನನ್ನು ನಿಗದಿಗೊಳಿಸಲಾಗಿತ್ತು. ಆದರೆ ಯುವತಿ ಇಷ್ಟು ವಯಸ್ಸಾದವನ ಜತೆ ಮದುವೆ ಇಷ್ಟ ಇಲ್ಲ, ಮದುವೆ ನಿಲ್ಲಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.
ಪೊಲೀಸ್ ಅಧಿಕಾರಿ ಎರಡೂ ಕಡೆಯವರ ಜತೆ ಮಾತುಕತೆ ನಡೆಸಿದ ಬಳಿಕ ಮದುವೆ ರದ್ದುಗೊಳಿಸಲಾಯಿತು. ವಧುವಿಗೆ ನೀಡಲಾಗಿದ್ದ ಉಡುಗೊರೆ ಮತ್ತು ಬಟ್ಟೆಗಳನ್ನು ವರನ ಕಡೆಯವರಿಗೆ ವಾಪಸ್ ಮಾಡಲಾಯಿತು.ವರನ ಕಡೆಯವರು ವಧುವಿನ ಕುಟುಂಬದ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಯುವತಿ ಓದಿನಲ್ಲಿ ಜಾಣೆಯಾಗಿದ್ದು, 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು.ಹಣಕಾಸು ಬಿಕ್ಕಟ್ಟಿನ ಕಾರಣ ಓದು ನಿಂತಿದೆ. ಓದು ಮುಂದುವರಿಸುವ ಇಚ್ಛೆ ಇದ್ದು, ಮದುವೆಯಾದರೆ ಅದು ಸಾಧ್ಯವಾಗುವುದಿಲ್ಲ ಎಂದು ಯುವತಿ ಪೊಲೀಸರಲ್ಲಿ ಹೇಳಿದ್ದಾಳೆ.