ಆ್ಯಪ್ನಗರ

ಒಡೆಯರ ಪಾಳ್ಯಕ್ಕೆ ಡಾ. ಲೋಬ್ ಸಿಂಗ್ ಭೇಟಿ

ಹನೂರು ಸಮೀಪದ ಒಡೆಯರಪಾಳ್ಯದ ಟಿಬೆಟಿಯನ್ ಕ್ಯಾಂಪ್‌ಗೆ ಕೇಂದ್ರೀಯ ಟಿಬೆಟಿಯನ್ ಆಡಳಿತ ಪ್ರಧಾನಿ ಡಾ.ಲೋಬ್‌ಸಂಗ್ ಸಂಗಾಯ್ ಅವರು ಭೇಟಿ ಸ್ಥಳೀಯ ಟಿಬೆಟಿಯನ್ನರ ಜತೆ ಚರ್ಚೆ ನಡೆಸಿದರು.

Vijaya Karnataka Web 4 Mar 2016, 5:19 am
ಹನೂರು: ಹನೂರು ಸಮೀಪದ ಒಡೆಯರಪಾಳ್ಯದ ಟಿಬೆಟಿಯನ್ ಕ್ಯಾಂಪ್‌ಗೆ ಕೇಂದ್ರೀಯ ಟಿಬೆಟಿಯನ್ ಆಡಳಿತ ಪ್ರಧಾನಿ ಡಾ.ಲೋಬ್‌ಸಂಗ್ ಸಂಗಾಯ್ ಅವರು ಭೇಟಿ ಸ್ಥಳೀಯ ಟಿಬೆಟಿಯನ್ನರ ಜತೆ ಚರ್ಚೆ ನಡೆಸಿದರು. ಒಡೆಯರ್‌ಪಾಳ್ಯ ಸಮೀಪದ ಟಿಬೆಟ್ ಕ್ಯಾಂಪಿನ ಸೆಟ್ಲ್‌ಮೆಂಟ್ ಕಚೇರಿ ಸಭಾಂಗಣದಲ್ಲಿ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿದ ಅವರನ್ನು ಸ್ಥಳೀಯ ಟಿಬೆಟಿಯನ್ನರು ಸಾಂಪ್ರದಾಯಕವಾಗಿ ಸತ್ಕರಿಸಿ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ಸ್ಥಳೀಯ ಸಾರ್ವಜನಿಕರ ಜತೆ ಸಹಬಾಳ್ವೆ ಹಾಗೂ ಸೌಹಾರ್ದತೆಯಿಂದ ವರ್ತಿಸ ಬೇಕು. ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಟ್ಟು ವಿದ್ಯಾವಂತರನ್ನಾಗಿ ಮಾಡುವಂತೆ ಕಿವಿಮಾತು ಹೇಳಿದರು. ಮಾ. 21ರಂದು ಟಿಬೆಟ್‌ನಲ್ಲಿ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
Vijaya Karnataka Web
ಒಡೆಯರ ಪಾಳ್ಯಕ್ಕೆ ಡಾ. ಲೋಬ್ ಸಿಂಗ್ ಭೇಟಿ


ಒಡೆಯರ್‌ಪಾಳ್ಯ ಸುತ್ತಮುತ್ತಲಿನಲ್ಲಿ ಟಿಬೆಟಿಯನ್ ಸಮುದಾಯ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹನೂರು ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ