ಆ್ಯಪ್ನಗರ

ಅಸ್ಪೃಶ್ಯತೆ ಬುಡ ಸಮೇತ ಕೀಳುವ ಸಂಕಲ್ಪ ಅಗತ್ಯ

ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಬುಡ ಸಮೇತ ಕಿತ್ತುಹಾಕುವ ಸಂಕಲ್ಪ ಮಾಡ ಬೇಕಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.

ವಿಕ ಸುದ್ದಿಲೋಕ 20 Mar 2016, 5:15 am
ಚಾಮರಾಜನಗರ : ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಬುಡ ಸಮೇತ ಕಿತ್ತುಹಾಕುವ ಸಂಕಲ್ಪ ಮಾಡ ಬೇಕಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
Vijaya Karnataka Web
ಅಸ್ಪೃಶ್ಯತೆ ಬುಡ ಸಮೇತ ಕೀಳುವ ಸಂಕಲ್ಪ ಅಗತ್ಯ


ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಯಿಂದ ಆಯೋಜಿಸಿದ್ದ ಅಸ್ಪೃಶ್ಯತಾ ನಿವಾರಣೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು ಬಹು ವರ್ಷಗಳು ಕಳೆದಿವೆ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಅಸ್ಪೃಶ್ಯತೆ ಎನ್ನುವ ತಾಯಿ ಬೇರಿಗೆ ನೀರು, ಮಣ್ಣು, ಗೊಬ್ಬರ ಎರೆಯುವ ಕೆಲಸ ಮಾಡಬಾರದು. ಅಸ್ಪೃಶ್ಯತೆ ಎಂಬ ಹೆಮ್ಮರವನ್ನು ಬೇರು ಸಮೇತ ಕಿತ್ತೊಗೆಯುವ ಕಾಲ ಬಂದೇ ಬರುತ್ತದೆ. ಜನತೆ ಸೌರ್ಹಾದಿಂದ ಬಾಳುವ ಮನೋಭಾವ ರೂಢಿಸಿಕೊಳ್ಳ ಬೇಕಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಶಿಕ್ಷಣ ಪಡೆಯ ಬೇಕು. ಸ್ವಾಭಿಮಾನದ ಜೀವನ ನಡೆಸ ಬೇಕು. ವ್ಯಕ್ತಿಗಳ ನಡುವಿನ ಕಂದಕಗಳನ್ನು ಮುಚ್ಚಬೇಕು. ಯಾವುದೇ ಭೇದಭಾವ ಎಣಿಸದೆ ನೆಮ್ಮದಿಯಾಗಿ ಬದುಕಬೇಕು. ಮನಃಶಾಂತಿ ಹಾಳು ಮಾಡಿಕೊಳ್ಳದೆ ಕಷ್ಟಕ್ಕೆ ದೂಡಿಕೊಳ್ಳದೆ ಸಾತ್ವಿಕ ಬದುಕು ನಡೆಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಧಿದತ್ತ ಬಂತೇಜಿ ಅವರು, ಜಾತೀಯತೆ ಮುಂದುವರಿಸುವ ವ್ಯವಸ್ಥೆ ಯನ್ನು ಕೈಬಿಡಬೇಕು. ಎಲ್ಲರನ್ನೂ ಸರಿ ಸಮನಾಗಿ ಕಾಣುವ ಆಶಯಗಳಿಗೆ ಒಪ್ಪಿಕೊಳ್ಳುವ ಚಿಂತನೆ ಮಾಡಬೇಕು ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಮತ್ತೊಬ್ಬ ರನ್ನು ಗೌರವ, ವಿಶ್ವಾಸದಿಂದ ಕಾಣುವಂತಾ ಗಬೇಕು. ಇನ್ನೊಬ್ಬರನ್ನು ಬದಲಾಯಿ ಸುವ ಮೊದಲು ತಮ್ಮನ್ನು ತಾವೇ ಬದಲಾಯಿಸಿಕೊಳ್ಳಬೇಕು. ಸಮಾಜದಲ್ಲಿ ಬದಲಾವಣೆ ತರುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ‘ನಾಗರಿಕರ ಜವಾಬ್ದಾರಿ ಮತ್ತು ಹಕ್ಕು ಬಾಧ್ಯತೆ’ ಕುರಿತು ಮಾತನಾಡಿದ ಅಮೃತಾ ಅತ್ರಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಮನಸ್ಸುಗಳ ಜತೆ ಆಡಳಿತಶಾಹಿ ಕೈಜೋಡಿಸಿದರೆ ಅಸ್ಪೃಶ್ಯತೆಯ್ನ ಬೇರನ್ನು ಕಿತ್ತುಹಾಕಲು ಸಾಧ್ಯ ಎಂದರು.

‘ಅಸ್ಪೃಶ್ಯತೆಯ ಉಗಮ ಮತ್ತು ಸಾಮಾಜಿಕ ಅಸಮಾನತೆ’ ವಿಷಯ ಕುರಿತು ಮಾತನಾಡಿದ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ. ಶಿವಕುಮಾರ್ ಸಹಭೋಜನ, ಅಂತರ್ಜಾತಿ ವಿವಾಹ, ಶಿಕ್ಷಣದಿಂದಲೇ ಅಸ್ಪೃಶ್ಯತೆ ನಿವಾರಣೆಯಾಗಲು ಸಾಧ್ಯ ಎಂಬುದನ್ನು ಪೂರ್ಣವಾಗಿ ಒಪ್ಪಲಾಗದು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿ. ಶಿವಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ದಾಶರಥಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ