ಆ್ಯಪ್ನಗರ

ಸರಕಾರಿ ಸವಲತ್ತುಗಳ ಸದ್ಭಳಕೆಗೆ ಸಲಹೆ

Vijaya Karnataka Web 23 Mar 2016, 8:45 pm
ಚಾಮರಾಜನಗರ: ರಾಜ್ಯ ಹಾಗೂ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾನಾ ಯೋಜನೆಗಳ ಸದ್ಭಳಕೆಗೆ ರೈತರು ಮುಂದಾಗಬೇಕು ಎಂದು ಜಿಲ್ಲಾಪಂಚಾಯಿತಿ ಸದಸ್ಯ ಎಂ.ರಾಮಚಂದ್ರ ಸಲಹೆ ನೀಡಿದರು. ನಗರದ ತೋಟಗಾರಿಕೆ ಹಿರಿಯ ಸಹಾಯಕ ನಿದೇರ್ಶಕರ ಕಚೇರಿ ಆವರಣದಲ್ಲಿ ಗಿರಿಜನ ವಿಶೇಷ ಯೋಜನೆಯಡಿ ಗಿರಿಜನ ಫಲಾನುಭವಿಗಳಿಗೆ ರಸಗೊಬ್ಬರ, ಕೀಟನಾಶಕ ಔಷಧಿಗಳನ್ನು ವಿತರಿಸಿ ಮಾತನಾಡಿದರು.
Vijaya Karnataka Web
ಸರಕಾರಿ ಸವಲತ್ತುಗಳ ಸದ್ಭಳಕೆಗೆ ಸಲಹೆ


ತಾಲೂಕಿನ ಗಿರಿಜನ ಪೋಡುಗಳಾದ ಬೇಡಗುಳಿ, ಕಾಡುಗೆರೆ, ಬಿಸಿಲುಗೆರೆ, ಮಾರಿಗುಡಿ, ಮೊಣಕೈ ಪೋಡು,ಶ್ರೀನಿವಾಸಪುರ ಕಾಲನಿಗಳು ಕಾಡಂಚಿನ ಗ್ರಾಮಗಳಾಗಿವೆ. ಸರಕಾರ ನೀಡುವ ರಸಗೊಬ್ಬರ ಹಾಗೂ ಕೀಟನಾಶಕ ಔಷಧಿಗಳನ್ನು ಸಮರ್ಪಕವಾಗಿ ತಮ್ಮ ಜಮೀನುಗಳಲ್ಲಿ ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕೆಂದು ತಿಳಿಸಿದರು. ತಾಪಂ ಸದಸ್ಯ ಕುಮಾರ್‌ನಾಯಕ್, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ಪುಣಜನೂರು ಗ್ರಾ.ಪಂ ಉಪಾಧ್ಯಕ್ಷ ಶಿವನಾಯಕ, ಸದಸ್ಯರಾದ ನಂಜೇಗೌಡ,ಗಣೇನಾಯಕ್,ರತ್ನಮ್ಮ, ಮುಖಂಡರಾದ ಶಿವಮೂರ್ತಿ, ರಾಜು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ