ಆ್ಯಪ್ನಗರ

ನೈರ್ಮಲ್ಯ ಅರಿವು ಮೂಡಿಸಿ

ಜನರಲ್ಲಿ ಗ್ರಾಮ ನೈರ್ಮಲ್ಯ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ. ರೇವಣ್ಣ ಅಭಿಪ್ರಾಯಪಟ್ಟರು.

ವಿಕ ಸುದ್ದಿಲೋಕ 26 Mar 2016, 5:15 am
ಚಾಮರಾಜನಗರ : ಜನರಲ್ಲಿ ಗ್ರಾಮ ನೈರ್ಮಲ್ಯ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ. ರೇವಣ್ಣ ಅಭಿಪ್ರಾಯಪಟ್ಟರು.
Vijaya Karnataka Web
ನೈರ್ಮಲ್ಯ ಅರಿವು ಮೂಡಿಸಿ


ತಾಲೂಕಿನ ಮುತ್ತಿಗೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಯುವಕರಿಗಾಗಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಕುರಿತ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ ದರು.

ದೇಶದಲ್ಲಿ ಮೌಢ್ಯ ತುಂಬಿದೆ. ಅದು ತೊಲಗುವ ತನಕ ದೇಶ ಅಭಿವದ್ಧಿ ಹೊಂದಲು ಸಾಧ್ಯವಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಇಂಥ ಕಾರ‌್ಯಕ್ರಮಗಳು ನಡೆದಾಗ ಬದುಕಿನಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದರು.

ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಕೆಎಎಸ್, ಐಎಎಸ್ ವ್ಯಾಸಂಗ ಸಾರ್ವಜನಿಕ ಸೇವೆಯಲ್ಲಿ ದ್ದಾರೆ. ಇದನ್ನು ಮನಗಂಡು ವಿದ್ಯಾರ್ಥಿ ಗಳು ಕೀಳರಿಮೆ ಬಿಟ್ಟು ಕಠಿಣ ಪರಿಶ್ರಮ ದಿಂದ ವ್ಯಾಸಂಗ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಪ್ರಭಾರ ಪ್ರಾಂಶುಪಾಲ ವೈ.ಎಂ.ರವಿಚಂದ್ರ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ವತಿಯಿಂದ ಮುತ್ತಿಗೆ ಗ್ರಾಮದಲ್ಲಿ 7 ದಿನಗಳ ವರೆಗೆ ಯುವಕರಿಗಾಗಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಕುರಿತು ರ್ವಾಕ ವಿಶೇಷ ಶಿಬಿರ ಅಯೋಜಿಸ ಲಾಗಿದ್ದು, ಗ್ರಾಮದ ನೈರ್ಮಲೀಕರಣ ಅರಿವು, ಶೌಚಾಲಯ ದ ನಿರ್ಮಾಣ, ಆರೋಗ್ಯ ಇಲಾಖೆ ಯಿಂದ ವೈಯುಕ್ತಿಕ ಶುಚಿತ್ವ, ಪರಿಸರ ನೈರ್ಮಲೀಕರಣ ಬಗ್ಗೆ ಚಿತ್ರ ಪ್ರದರ್ಶನ, ತಾಂತ್ರಿಕ ಸೇವೆ ಕಾರ‌್ಯಕ್ರಮ, ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುವುದು ಎಂದು ಹೇಳಿದರು.

ಜಿ.ಪಂ.ಸದಸ್ಯೆ ಎಂ.ಚಂದ್ರಕಲಾ, ತಾ.ಪಂ.ಸದಸ್ಯೆ ಸವಿತಾ, ಗ್ರಾ.ಪಂ.ಅಧ್ಯಕ್ಷ ಮುರುಗ, ಉಪಾಧ್ಯಕ್ಷ ಎಚ್.ಎಂ.ಗಿರೀಶ್, ಸದಸ್ಯೆ ಪ್ರೇಮಾ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಎಂ.ಎಸ್.ಮೂರ್ತಿ, ರೈಲ್ವೆ ಮಂಡಳಿ ಸಮಿತಿ ಸದಸ್ಯ ಚಂದ್ರಶೇಖರಯ್ಯ, ಕಾರ್ಯದರ್ಶಿ ಚಿನ್ನಯ್ಯ, ಪಿಡಿಒ ಮಲ್ಲಣ್ಣ, ನಿವತ್ತ ಶಿಕ್ಷಕ ಎಂ.ಜವರೇಗೌಡ ಶಿಬಿರಾಧಿಕಾರಿ ಜಿ.ಎಂ.ಬಸವರಾಜು, ಸಹ ಶಿಬಿರಾಧಿಕಾರಿಗಳಾದ ಎನ್.ಪ್ರಕಾಶ್, ಚಂದ್ರಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ