ಆ್ಯಪ್ನಗರ

ಕುಮಾರಪುರದಲ್ಲಿ ಕೊಂಡೋತ್ಸವ

ತಾಲೂಕಿನ ಕುಮಾರಪುರ ಗ್ರಾಮದಲ್ಲಿ ಬಸವ, ಮಂಟೇ ಸ್ವಾಮಿ ಕಂಡಾಯ ಹಾಗೂ ಮುಕ್ಕಡಹಳ್ಳಿ ಮಾರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.

ವಿಕ ಸುದ್ದಿಲೋಕ 2 Apr 2016, 5:06 am
ಯಳಂದೂರು : ತಾಲೂಕಿನ ಕುಮಾರಪುರ ಗ್ರಾಮದಲ್ಲಿ ಬಸವ, ಮಂಟೇ ಸ್ವಾಮಿ ಕಂಡಾಯ ಹಾಗೂ ಮುಕ್ಕಡಹಳ್ಳಿ ಮಾರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
Vijaya Karnataka Web
ಕುಮಾರಪುರದಲ್ಲಿ ಕೊಂಡೋತ್ಸವ


ಗ್ರಾಮದ ಎಲ್ಲಾ ಬಡಾವಣೆಯ ಜನತೆ ತಮ್ಮ ಮನೆಗಳಿಗೆ ಬಣ್ಣ ಸುಣ್ಣಗಳನ್ನು ಬಳಿದು ಮದುವಣಗಿತ್ತಿ ಯಂತೆ ಶಿಂಗರಿಸಿ, ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಿಗೆ ತಳಿರು ತೋರಣ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.

ಗ್ರಾಮದ ನವಗ್ರಹ ದೇವಾಲಯದ ಆವರಣದಲ್ಲಿ ಗುರುವಾರ ರಾತ್ರಿ ಸಮಯದಲ್ಲಿ ಗ್ರಾಮದ ಜನರೆಲ್ಲರೂ ಸೇರಿ ಕೊಂಡದ ಸೌಧೆಯನ್ನು ಸಿದ್ಧಗೊಳಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅರ್ಚಕರಿಂದ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ಶುಕ್ರವಾರ ಬೆಳಗ್ಗೆ ಗ್ರಾಮದ ಎಲೆ ಕಲ್ಲಿಗೆ ತೆರಳಿ ಉತ್ಸವ ಮೂರ್ತಿಯನ್ನು ಶುಚಿಗೊಳಿಸಿದ ನಂತರ ಹೂವು ಹೊಂಬಾಳೆ ಹಾಗೂ ವಿವಿಧ ಪುಷ್ಪಾಲಂಕಾರ ದಿಂದ ಶೃಂಗರಿಸಿದ ಬಳಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಸತ್ತಿಗೆ, ಸೂರಿ ಪಾನಿ, ವಾಧ್ಯ ಮೇಳ, ಕೊಂಬು ಕಹಳೆ ಯೊಂದಿಗೆ ಮಂಟೇಸ್ವಾಮಿ, ಕಂಡಾಯ ಮತ್ತು ಮುಕ್ಕಡಹಳ್ಳಿ ಮಾರಮ್ಮನ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ದಾರಿಯುದ್ದಕ್ಕೂ ಹರಕೆ ಹೊತ್ತವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೂವಿನ ಹಾರ ಹಾಗೂ ಇಡುಗಾಯಿ ಒಡೆದು, ಯುವಕರು ಮಾರಿ ಕುಣಿತದೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಉತ್ಸವ ಮೂರ್ತಿ ಕೊಂಡೂತ್ಸವದ ಸ್ಥಳಕ್ಕೆ ಆಗಮಿಸು ತ್ತಿದ್ದಂತೆ ಬಸವ, ಕಂಡಾಯ ಉತ್ಸವ ಮೂರ್ತಿ ಹಾಗೂ ಮುಕ್ಕಡಹಳ್ಳಿ ಮಾರಮ್ಮ, ಸತ್ತಿಗೆ, ಸೂರಿ ಪಾನಿ ಹೊತ್ತ ಅರ್ಚಕರು ಆವೇಶಭರಿತರಾಗಿ ಕೊಂಡ ಹಾಯಲಾಯಿತು. ಕೊಂಡೋತ್ಸವಕ್ಕೆ ತಾಲೂಕಿನ ಸುತ್ತ ಮುತ್ತಲ ಗ್ರಾಮದ ಜನತೆ ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿ ಭಕ್ತಿರ ಪರಿಕಾಷ್ಟೆ ಮೆರೆದರು. ಗ್ರಾಮದ ಯಜಮಾನರು, ಮುಖಂಡರು ಹಾಗೂ ಜನ ಪ್ರತಿನಿಧಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ