ಚಾಮರಾಜನಗರ: ಹಿರಿಯ ಅಧಿಕಾರಿಗಳ ಆದೇಶ ಪಾಲಿಸದೆ ಕರ್ತವ್ಯ ನಿರ್ಲಕ್ಷ ್ಯ ತೋರಿದ ಕೊಳ್ಳೇಗಾಲ ತಾಲೂಕು ಚಿಕ್ಕಲ್ಲೂರು ಗ್ರಾಮ ಪಂಚಾುತಿ (ಮೂಲ ಪಂಚಾಯಿತಿ ಕುಂತೂರು)ಯಲ್ಲಿ ನಿಯೋಜನೆ ಮೇರೆಗೆ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಲಿಂಗಶೆಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಾಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಶಿವಲಿಂಗಶೆಟ್ಟಿ ಅವರು ಮಧುವಿನಹಳ್ಳಿ ಗ್ರಾಮ ಪಂಚಾಯಿತಿಗೆ ನಿಯೋಜನೆಗೊಂಡು ನಂತರ ಚಿಕ್ಕಲ್ಲೂರು ಗ್ರಾಮ ಪಂಚಾಯಿತಿಯ ಪೂರ್ಣ ಪ್ರಭಾರವನ್ನು ಕಾರ್ಯದರ್ಶಿ ಉಷಾ ಎಂಬುವವರಿಗೆ ವಹಿಸಬೇಕಿತ್ತು. ಆದರೆ ಶಿವಲಿಂಗಶೆಟ್ಟಿ ಅವರು ಪೂರ್ಣ ಪ್ರಭಾರವನ್ನು ಉಷಾ ಅವರಿಗೆ ವಹಿಸಿರಲಿಲ್ಲ. ಹಿರಿಯ ಅಧಿಕಾರಿಗಳು ಮೂರು ಬಾರಿ ಸೂಚನೆ ನೀಡಿದ್ದರೂ ಪೂರ್ಣ ಪ್ರಭಾರವನ್ನು ವಹಿಸದೆ ನಿರ್ಲಕ್ಷ ್ಯ ವಹಿಸಿದ್ದರು.
ಈ ಹಿನ್ನಲೆಯಲ್ಲಿ ಶಿವಲಿಂಗಶೆಟ್ಟಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಾಪಾಟಿ ಆದೇಶ ಹೊರಡಿಸಿದ್ದಾರೆ.